ಆನ್ ಲೈನ್ ನಲ್ಲಿ ಆಸ್ತಿ ಖಾತಾ ವರ್ಗಾವಣೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
Recommended Video

ಬೆಂಗಳೂರು,ಫೆಬ್ರವರಿ 06 : ರಾಜಧಾನಿಯ ಜನರು ಇನ್ನು ಮುಂದೆ 'ಆನ್ ಲೈನ್; ನಲ್ಲೇ ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪಡೆಯಬಹುದು.
ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಖಾತಾ ಬದಲಾವಣೆಯನ್ನು ಸರಳೀಕರಿಸುವ ಮತ್ತು ವಿಳಂಬ ತಡೆಯುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಬಿಬಿಎಂಪಿ ಮತ್ತು ಇ-ಆಡಳಿತ ಇಲಾಖೆಯು ಜಂಟಿಯಾಗಿ ಸಿದ್ಧಪಡಿಸಿರುವ ತಂತ್ರಾಂಶದ ಮೂಲಕ ನಾಗರಿಕರಿಗೆ ಆನ್ ಲೈನ್ ಅಥವಾ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಖಾತಾ ಬದಲಾವಣೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಅದು ಸಕಾಲ ಮೂಲಕ ಬಿಬಿಎಂಪಿ ಸಂಬಂಧಿತ ಅಧಿಕಾರಿಗೆ ನೇರವಾಗಿ ತಲುಪುತ್ತದೆ.
ಇದರಿಂದ ನಾಗರಿಕರು ಅರ್ಜಿಯ ಸ್ಥಿತಿಗತಿಗಳನ್ನು ಕಾಲಕಾಲಕ್ಕೆ ವೀಕ್ಷಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಖಾತಾ ಬದಲಾವಣೆಯನ್ನು ವೀಕ್ಷಿಸಬಹುದು. ಬೆಂಗಳೂರು ಒನ್ ಕೇಂದ್ರಗಳು ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ತೆರದಿರುತ್ತದೆ.
ಈ ಸಂಬಂಧ ಹೊಸ ತಂತ್ರಾಂಶವನ್ನು ಬಿಬಿಎಂಪಿ ಸಿದ್ಧಪಡಿಸಲಾಗಿದ್ದು, ಫೆಬ್ರವರಿ ಮೊದಲ ವಾರದ ನಂತರ ಇದನ್ನು ಜಾರಿಗೊಳ್ಳಲಿದೆ. ನಾಗರಿಕರು ಖಾತಾ ವರ್ಗಾವರಣೆಯನ್ನು ಆನ್ ಲೈನ್ ಮೂಲಕ, ಬೆಂಗಳೂರು ಒನ್ ಕೇಂದ್ರ ಅಥವಾ ಸಕಾಲ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ.
ಬಿಬಿಎಂಪಿಯಿಂದ ಖಾತಾ ನೋಂದಣಿ, ಖಾತಾ ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳ ಹಿಂದೆ ಸುತ್ತಬೇಕು ಎಂಬ ಕೆಟ್ಟ ಅಭಿಪ್ರಾಯಗಳು ಜನರಲ್ಲಿವೆ. ಇದನ್ನು ಹೋಗಲಾಡಿಸುವ ಸಲುವಾಗಿ ಇ-ಆಡಳಿತದ ಜತೆ ಚರ್ಚಿಸಿ ಆನ್'ಲೈನ್ ಮೂಲಕವೇ ಖಾತಾ ನೋಂದಣಿ, ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ನೀಡಲು ಸೂಕ್ತ ತಂತ್ರಾಂಶ (ಸಾಫ್ಟ್ವೇರ್) ಅಭಿವೃದ್ಧಿಪಡಿಸಲಾಗಿದೆ.

ಖಾತಾ ವರ್ಗಾವಣೆ ಹೇಗೆ
ಸಾರ್ವಜನಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಅಪ ಲೋಡ್ ಮಾಡಿಕೊಳ್ಳಬಹುದು. ಆ ದಾಖಲೆಗಳನ್ನು ಅಧಿಕಾರಿಗಳು ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಿ ಖಾತೆ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ನಡೆಸುತ್ತಾರೆ. ಆನ್ ಲೈನ್ ಮೂಲಕ ಅಥವಾ ಬೆಂಗಳೂರು ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಮೊದಲು ಖಾತಾ ವರ್ಗಾವಣೆಗಾಗಿ, ಬಿಬಿಎಂಪಿ ಕಚೇರಿಗೆ ತಿಂಗಳು ಗಟ್ಟಲೆ ಅಲೆಯಬೇಕಿತ್ತು. ದಾಖಲೆಗಳನ್ನು ಪರಿಶೀಲನೆಗೆ ನೀಡಬೇಕಿತ್ತು, ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿಯ ಸ್ಥಿತಿಗತಿ ಪರಿಶೀಲಿಸಲು ಬಿಬಿಎಂಪಿ ಕಚೇರಿಗೆ ಹೋಗಬೇಕಿತ್ತು. ಖಾತೆ ನೋಂದಣಿಗೆ ಹಣವನ್ನು ಕೂಡ ನೀಡಬೇಕಿತ್ತು. ಆದರೆ ಇದೀಗ ಅದೆಲ್ಲವೂ ಸರಳೀಕೃತವಾಗಿದೆ. ಎಲ್ಲವನ್ನೂ ನೀವು ಕುಳಿತಲ್ಲಿಂದಲೇ ಮಾಡಬಹುದಾಗಿದೆ.

ನಾಗರಿಕರು ಹೇಗೆ ಸರ್ಜಿ ಸಲ್ಲಿಸಬೇಕು?
1)ನಾಗರಿಕರು ಬೆಂಗಳೂರು ಒನ್ ಕೇಂದ್ರ ಅಥವಾ ಆನ್ ಲೈನ್ ನಲ್ಲಿ ಖಾತಾ ಅರ್ಜಿ ಸಲ್ಲಿಸಬಹುದು
2) ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ದಾಖಲೆಗಳ ಸಮೇತವಾಗಿ ಅರ್ಜಿ ಭರ್ತಿ ಮಾಡಬೇಕು.
3) ಅರ್ಜಿಯ ಪಸ್ತುತ ಸ್ಥಿತಿಗತಿ ತಿಳಿಯಲು ಆನ್ ಲೈನ್ ಅಥವಾ ಸಕಾಲದಲ್ಲಿ ಜಿಎಸ್ ಸಿ ನಂಬರ್ ಮೂಲಕ ಪರೀಕ್ಷಿಸಬಹುದು.
4) ನಾಗರಿಕರಿಗೆ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ ಎಸ್ ಎಂ ಎಸ್ ಮೂಲಕವು ಪಡೆಯಬಹುದು
5) ಬೆಂಗಳೂರು ಒನ್ ಅಥವಾ ಆನ್ ಲೈನ್ ನಲ್ಲಿ ಸಲಲ್ಲಿಸಿದ ಖಾತಾವನ್ನು ಸಕಾಲದ ಮೂಲಕ ಪಡೆದುಕೊಳ್ಳಬೇಕು.

ಬಂದ ಅರ್ಜಿಗಳನ್ನು ಅಧಿಕಾರಿಗಳು ಏನು ಮಾಡಬೇಕು?
1) ಭರ್ತಿ ಮಾಡಿದ ಅರ್ಜಿಗಳು ಹಾಗೂ ಬೇಕಾದ ದಾಖಲೆಗಳನ್ನು ಆನ್ ಲೈನ್ ಮೂಲಕ ಪಡೆಯುವುದು
2) ಅರ್ಜಿದಾರರನ್ನು ಇ-ಸೈನ್ ಮೂಲಕ ಆಟೋಮೇಟೆಡ್ ಅಥೆಂಟಿಕೇಷನ್ ಮಾಡಬಹುದು
3)ಬಾಕಿ ಉಳಿದಿರುವ ಅರ್ಜಿಯ ಕುರಿತು ಒಂದು ಬಟನ್ ಒತ್ತುವ ಮಾಡುವ ಮೂಲಕ ಮಾಹಿತಿ ಪಡೆಯಬಹುದು
4) ಕೆಲವು ಸಂದರ್ಭಗಳಲ್ಲಿ ಮಾತ್ರ ನಾಗರೊಕರೊಂದಿಗೆ ಮಾತನಾಡುವ ಅಗತ್ಯ ಬೀಳಬಹುದು
5) ಎಸ್ ಎಂ ಎಸ್ ಮೂಲಕ ಖಾತಾ ಕುರಿತು ಅಟೋಮೆಟಿಕ್ ಮಾಹಿತಿ ರವಾನೆಯಾಗುತ್ತದೆ
6) ಆನ್ ಲೈನ್ ಮೂಲಕ ಇ-ಸೈನ್ ಖಾತಾವನ್ನು ಅಪ್ ಲೋಡ್ ಮಾಡಬೇಕು

ಆಸ್ತಿ ಖಾತಾ ಬದಲಾವಣೆಗೆ ಒದಗಿಸಬೇಕಾದ ದಾಖಲೆ
ವಿಲ್ ಪ್ರಕಾರ ಆಸ್ತಿ ನೋಂದಣಿ: ಸೇಲ್ ಡೀಡ್: ಸೇಲ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕ್ಯುಂಬ್ರೆನ್ಸ್ ಸರ್ಟಿಫಿಕೇಟ್ ಹಳೆಯ ಸೇಲ್ ಡೀಡ್, ತೆರಿಗೆ ರಶೀತಿ, ನೋಂಧಣಿ ವಿಲ್ ನ ಜೆರಾಕ್ಸ್ ಅಥವಾ ಅಫಿಡೆವಿಟ್, ಒಂದೊಮ್ಮೆ ವಿಲ್ ಇಲ್ಲದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಎನ್ ಓಸಿ ಸರ್ಟಿಫಿಕೇಟ್ ನೀಡಬೇಕು.

ವಿಲ್ ನಲ್ಲಿ ಇರುವ ಹಾಗೆ ಖಾತಾ ವರ್ಗಾವಣೆ ಮಾಡದಿದ್ದರೆ ಏನು ದಾಖಲೆ
ಹಳೆಯ ಸೇಲ್ ಡೀಡ್, ಪೊಸೆಷನ್ ಸರ್ಟಿಫಿಕೇಟ್, ಪ್ರಸಕ್ತ ವರ್ಷದ ತೆರಿಗೆ ರಶೀತಿ, ಒಂದೊಮ್ಮೆ ವಿಲ್ ಇಲ್ಲದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಎನ್ ಓಸಿ ಸರ್ಟಿಫೀಕೇಟ್ ನೀಡಬೇಕು. ಖಾತಾ ಹೊಂದಿದ್ದವರು ಅಸಲಿ ಮರಣ ಪ್ರಮಾಣ ಪತ್ರ, ಸೇಲ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ದಾಖಲೆ ಒದಗಿಸಬೇಕು.

ಉಡುಗೊರೆಯ ಆಸ್ತಿ ಖಾತಾ ಪಡೆಯುವುದು ಹೇಗೆ
ಹಳೆಯ ಸೇಲ್ ಡೀಡ್, ಗಿಫ್ಟ್ ಡೀಡ್, ತೆರಿಗೆ ಕಟ್ಟಿರುವ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ದಾಖಲೆ ಒದಗಿಸಬೇಕು.

ಕೋರ್ಟ್ ಮೂಲಕ ಆಸ್ತಿ ದೊರೆತರೆ ಒದಗಿಸಬೇಕಾದ ದಾಖಲೆಗಳು
ಕೋರ್ಟ್ ಮೂಲಕ ಆಸ್ತಿ ದೊರೆತಿದ್ದರೆ ಕೋರ್ಟ್ ನೀಡಿರುವ ಅನುಮತಿ ಪತ್ರ, ಹಳೆಯ ಡೀಡ್, ಆದಾಯ ತೆರಿಗೆ ರಶೀತಿ, ಫಾರ್ಮ್ 15 ಇಂದ ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್ ಒದಗಿಸಬೇಕು.
-
Bda: ಬಿಡಿಎ ಮುಕ್ತ ಸಂವಾದದಿಂದ ಸೈನಿಕರ ಸಮಸ್ಯೆಗೆ ಪರಿಹಾರ: ಬೆಂಗಳೂರು ಆಸ್ತಿದಾರರಿಗೆ ಇಲ್ಲಿದೆ ಗುಡ್ನ್ಯೂಸ್ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications