ಬೆಂಗಳೂರು ಪೊಲೀಸರ ತಲೆಗೆ ಹೆಲ್ಮೆಟ್ ಹಾಕೋರು ಯಾರು?
ಗೃಹ ಸಚಿವರು: ಮುಖ್ಯಮಂತ್ರಿಗಳೇ ಪೊಲೀಸರು ತುಂಬಾ ಶ್ರಮಪಡುತ್ತಿದ್ದಾರೆ. ಅವರ ವೇತನ ಹೆಚ್ಚಳ ಮಾಡಬೇಕು.
ಮುಖ್ಯಮಂತ್ರಿ: ಬೊಕ್ಕಸದಲ್ಲಿ ಹಣವಿಲ್ಲ. ಭಾಗ್ಯದ ಯೋಜನೆಗಳನ್ನು ನೀಡಿ ಖಾಲಿಯಾಗಿಹೋಗಿದೆ.
ಗೃಹ ಸಚಿವರು: ಹಾಗಾದರೆ ಏನು ಮಾಡೋಣ?
ಮುಖ್ಯಮಂತ್ರಿ: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದು ಮಾಡೋಣ.....!

ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದ ಈ ಜೋಕನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳಬಹುದು. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಯಾರಿಗೆ ಲಾಭ? ಯಾರಿಗೆ ನಷ್ಟ? ನಿಜಕ್ಕೂ ಜನರು ನೀತಿಯನ್ನು ಪಾಲಿಸುತ್ತಿದ್ದಾರೆಯೇ? ಇದೆಲ್ಲದಕ್ಕೂ ಉತ್ತರ ಹುಡುಕುತ್ತ ಹೊರಟರೆ ನಮ್ಮ ಕಣ್ಣಿಗೆ ಬಿದ್ದಿದ್ದನ್ನು ಹೇಳಲೇ ಬೇಕು.[ಬೆಳಗಾವಿ, ಮೈಸೂರು, ತುಮಕೂರಲ್ಲಿ ಫೆಬ್ರವರಿ 1 ರವರೆಗೆ ಅವಕಾಶ]
ಬೆಂಗಳೂರಿನ ಕತೆಯನ್ನೇ ಇಟ್ಟುಕೊಂಡರೆ ಅರ್ಧ ತಲೆಗಳಿಗೆ ಹೆಲ್ಮೆಟ್ ಇಲ್ಲ. ಹಿಂಬದಿ ಸವಾರರಿರಲಿ ಮುಂಬದಿ ಸವಾರರೇ ಹೆಲ್ಮೆಟ್ ಹಾಕಿಕೊಳ್ಳುವುದಿಲ್ಲ. ದಂಡ ಕಟ್ಟುತ್ತೇವೆ ಎಂಬ ಉಡಾಫೆ, ಪೊಲೀಸರು ಏನು ಮಾಡಿಕೊಳ್ಳುತ್ತಾರೆ ಎಂಬ ಭಾವನೆ, ಇದೊಂದು ದಿನ ಪಾಸ್ ಆಗೋಣ ಎಂಬ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ಆತುರ ... ಒಟ್ಟಿನಲ್ಲಿ ಯಾವುದೋ ಒಂದು ಕಾರಣ ಇಟ್ಟುಕೊಂಡು ಜನ ಹೆಲ್ಮೆಟ್ ಹಾಕಿಕೊಳ್ಳುತ್ತಾ ಇಲ್ಲ.
ತಂಡ ರಚಿಸಿಕೊಂಡ ಪೊಲೀಸರು ಕಳೆದ ಎರಡು ದಿನಗಳಿಂದ ತುಂಬಾ ಬ್ಯುಸಿ. ಕರ್ತವ್ಯ ನಿಷ್ಠರಾಗಿ ತಮ್ಮ ಕೆಲಸವನ್ನು ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಅದು ಬೆಂಗಳೂರಿನ ಕತ್ರಿಗುಪ್ಪೆ ಇರಬಹುದು, ಗಾಂಧಿ ಬಜಾರ್ ಇರಬಹುದು, ಮೆಜೆಸ್ಟಿಕ್ ಸಮೀಪ ಇರಬಹುದು, ಲಾಲ್ ಬಾಗ್ ಗೇಟ್ ಇರಬಹುದು..... ಎಲ್ಲ ಕಡೆ ತಲೆ ತಪಾಸಣೆ ನಡೆಯುತ್ತಿದೆ. [ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

ಅದ್ಯಾಕೋ ಗೊತ್ತಿಲ್ಲ ಮೂರು ಜನರನ್ನು ಹಾಕಿಕೊಂಡು ಜುಮ್ ಎಂದು ಹೋಗುತ್ತಿದ್ದರೂ ಕೆಲವೊಮ್ಮ ಜಾಕ್ ಪಾಟ್ ಹೊಡೆಯುತ್ತಾರೆ. ಅವರನ್ನು ಯಾರು ಟಚ್ ಸಹ ಮಾಡಲ್ಲ(ಅವರ ವೇಗವೂ ಹಾಗೇ ಇರುತ್ತೆ ಬಿಡಿ) ಮಗುವನ್ನು ಕರೆದುಕೊಂಡು ಸಂಜೆ ಶಾಪಿಂಗ್ ಗೋ, ದೇವಸ್ಥಾನಕ್ಕೋ ಹೋಗುವ ನೀವು ಸಿಕ್ಕಿಹಾಕಿಕೊಳ್ಳುವ ಸಂಭವ ಹೆಚ್ಚು.
ಕಾನೂನು ಬಂದುಬಿಟ್ಟಿದೆ. ಜನವರಿ 20 ರಿಂದ ಕಾಯಂ ಆಗಿದೆ. ಆದರೆ ಅನುಷ್ಠಾನ ಸಾಧ್ಯವಾಗಿಲ್ಲ ಎಂಬುದನ್ನು ಪೊಲೀಸರು ಸೇರಿದಂತೆ ಸಾರಿಗೆ ಇಲಾಖೆ ಒಪ್ಪಿಕೊಳ್ಳಲೇಬೇಕು. ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ದಂಡವೂ ಹರಿದು ಬರುತ್ತಿದೆ ಬಿಡಿ.[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]
ಸಾಮಾಜಿಕ ತಾಣದಲ್ಲಿ ವಿಡಿಯೋವೊಂದು ಬರುತ್ತೆ. ಹೆಲ್ಮೆಟ್ ಹಾಕದೇ ಹುಡುಗನೊಬ್ಬ ಬೈಕ್ ಚಲಾಯಿಸಿಕೊಂಡು ಬರುತ್ತಾನೆ. ಅವನನ್ನು ಅಡ್ಡಹಾಕುವ ಪೊಲೀಸ್ ಆತನ ಕಿಸೆಯಲ್ಲಿದ್ದ ಹಣ ಪಡೆದುಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಹಿಂದಕ್ಕೆ ಬರುವ ಪೊಲೀಸ್ ಹೊಸ ಹೆಲ್ಮೆಟ್ ಖರೀದಿ ಮಾಡಿ ತಂದಿರುತ್ತಾರೆ. ಅದನ್ನು ಹುಡುಗನ ತಲೆಗೆ ಹಾಕಿಸಿ ಮುಂದಕ್ಕೆ ಕಳಿಸುತ್ತಾರೆ. ಆದರೆ ಬೆಂಗಳೂರಲ್ಲಿ ಸದ್ಯ ಈ ಕತೆಯ ಅರ್ಧ ಭಾಗ ಮಾತ್ರ ನಡೆಯುತ್ತಿದೆ!
ನಾವು ಹೆಲ್ಮೆಟ್ ಹಾಕದಿದ್ರೆ ಹಿಡಿತಾರೆ. ಆದ್ರೇ ಅವರೇ ಹೆಲ್ಮೆಟ್ ಹಾಕದೇ ಓಡಾಡುತ್ತಿದ್ದಾರೆ. ಪೊಲೀಸರಿಗೆ ದಂಡ ಹಾಕುವವರು ಯಾರು? ಇದು ಹಿಂಬದಿ ಸವಾರರಿಗೆ ಹೆಲ್ಮೆಟ್, ಮುಂಬದಿ ಸವಾರರಿಗೆ ಟೋಪಿ ಆದಂಗಾಗಿದೆ ಎಂದು ದಂಡ ಕಟ್ಟಿದ ಗೃಹಸ್ಥರೊಬ್ಬರು ಗೊಣಗಿಕೊಂಡಿದ್ದು ಯಾರ ಕಿವಿಗೂ ಬೀಳಲೇ ಇಲ್ಲ!
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
IPL 2026: ಬೆಂಗಳೂರು ಕ್ರಿಕೆಟ್ ಪ್ರೇಮಿಗಳೇ ಗಮನಿಸಿ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಈ ಹೊಸ ರೂಲ್ಸ್ ಗೊತ್ತಿರಲಿ












Click it and Unblock the Notifications