Get Updates
Get notified of breaking news, exclusive insights, and must-see stories!

ಬೆಂಗಳೂರು: ಮಂಗಳವಾರ ರಾತ್ರಿ ವರುಣ ತಂದ ಅವಾಂತರಗಳು

ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ ಏನೆಲ್ಲ ಅವಾಂತರಗಳನ್ನು ಸೃಷ್ಠಿಸಿದೆ ಎಂಬ ಸಣ್ಣ ವರದಿ ಇಲ್ಲಿದೆ.

ಬೆಂಗಳೂರು, ಮಾರ್ಚ್.07 : ಸಿಲಿಕಾನ್ ಸಿಟಿ ಬೆಂಗಳೂರು ನಗರದೆಲ್ಲೆಡೆ ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ.

ನಗರದ ಹಲವು ನಗರಗಳಲ್ಲಿ ಒಳಚರಂಡಿ, ಮ್ಯಾನ್‌ಹೋಲ್‌ ತುಂಬಿ ಹರಿದಿದ್ದರಿಂದ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. [ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ]

ಲಕ್ಷದದ್ವೀಪದ ಸುತ್ತಮುತ್ತ ಮೇಲ್ಮೈ ಸುಳಿಗಾಳಿ ಹಾಗೂ ಕರ್ನಾಟಕ ಉತ್ತರ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ. [ಉದ್ಯಾನ ನಗರಿಗೆ ಸೋಮವಾರ ರಾತ್ರಿ ವರುಣನ ಸಿಂಚನ]

ಹಾಗಿದ್ದರೆ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ ಏನೆಲ್ಲ ಅವಾಂತರಗಳನ್ನು ಸೃಷ್ಠಿಸಿದೆ ಎಂಬ ಸಣ್ಣ ವರದಿ ಇಲ್ಲಿದೆ.

heavy-rain-brings-hazards-in-bengaluru-on-march-7th-night

* ನೈರುತ್ಯ ಸಾರಿಗೆ ಬಸ್ ವೊಂದು ಕಿನೋ ಚಿತ್ರಮಂದಿರ ಬಳಿ ಅಂಡರ್ ಪಾಸ್ ನಲ್ಲಿ ಬಸ್ ಮುಗುಳುಗೊಂಡಿದೆ. ಬಸ್ ನಲ್ಲಿ ಸಿಲುಕಿದ್ದ 10 ಜನ ಪ್ರಯಾಣಿಕರನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ.

*ಜಯನಗರದಲ್ಲಿ ಮರ ಉರುಳಿ ಬೈಕ್ ಜಖಂ.

* ಬಿಟಿಎಂನ ಕೆಎಸ್ ಆರ್ ಟಿಸಿ ಲೇಔಟ್ ನಲ್ಲಿ ನಾಲ್ಕು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಮನೆಯವರನ್ನು ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ.

* ಜಯನಗರದ ಏಳನೇ ಹಂತದಲ್ಲಿ ಹೋರ್ಡಿಂಗ್ ಬೋರ್ಡ್ ವೊಂದು ರಸ್ತೆಗೆ ಉರುಳಿ ಬಿದ್ದಿದೆ.

* ಸಂಜಯ್ ನಗರದ ಎಇಎಸ್ ಲೇಔಟ್ ನಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ.

* ಮಲ್ಲೇಶ್ವರಂನ ವೇಣುಗೋಪಾಲ್ ಬಳಿ ಇರುವ ದೇವಸ್ಥಾನಗಳಿಗೆ ನುಗ್ಗಿದ ನೀರು.

ಈ ಎಲ್ಲಾ ಆವಾಂತರಗಳಿಂದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+