ವಿಕಲಚೇತನರಿಗೆ ನೀಡುವ ಬೈಕ್ ಗಳು ತುಕ್ಕುಹಿಡಿಯುತ್ತಿದೆ
ದೊಡ್ಡಬಳ್ಳಾಪುರ, ಫೆಬ್ರವರಿ 2: ವಿಕಲಾಂಗ ಚೇತನರ ಕೈ ಸೇರಿ ಅವರ ಜೀವನಕ್ಕೆ ಅನುಕೂಲವಾಗುವಾಗಬೇಕಿದ್ದ ದ್ವಿಚಕ್ರವಾಹನಗಳು ಇದೀಗ ಸೂಕ್ತ ರಕ್ಷಣೆ ಇಲ್ಲದೆ ತುಕ್ಕುಹಿಡಿದಿವೆ.
ಶಾಸಕರ ರಾಜಕೀಯ ಕಾರಣಗಳಿಗಾಗಿ ಮಳೆ ಗಾಳಿ ಎನ್ನದೆ ಸೂಕ್ತ ರಕ್ಷಣೆ ಇಲ್ಲದೆ ತುಕ್ಕುಹಿಡಿಯುವ ಹಂತಕ್ಕೆ ಬರುತ್ತಿವೆ. ಅದಕ್ಕೆ ರಕ್ಷಣೆ ಇಲ್ಲದಿರುವುದರಿಂದ ಈಗಾಗಲೇ ಕೆಲ ಬೈಕ್ ಗಳ ಮಿರರ್ಗಳು ಕಳ್ಳರ ಪಾಲಾಗಿವೆ. ಸೀಟ್ಗಳನ್ನೂ ಕೂಡ ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಹಾಗಾದರೆ ರಾಜಕೀಯ ಪ್ರತಿಷ್ಟೆಯಿಂದಾಗಿ ಯೂಸ್ಲೇಸ್ ಆಗಿರುವ ಬೈಕ್ ಗಳ ಸ್ಟೋರಿ ಒಮ್ಮೆ ಓದಿ.
ಬಡ ವಿಕಲಚೇತನರು ಜೀವನ ರೂಪಿಸಿಕೊಳ್ಳಲು ಸಹಾಯವಾಗಲಿ ಎಂದು ರಾಜ್ಯ ಸರ್ಕಾರ ಅಂಗವೈಕಲ್ಯವುಳ್ಳವರಿಗೆ ಬೈಕ್ ಗಳನ್ನು ನೀಡುವ ಯೋಜನೆ ಜಾರಿಗೆ ತಂದಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಫುರ ತಾಲೂಕಿಗೂ ಕೂಡ ೩೮ ಫಲಾನುಭವಿಗಳಿಗೆ ಬೈಕ್ ಗಳು ಬಂದಿದ್ದವು.

ಆದರೆ ಬೈಕ್ ಗಳ ವಿತರಣೆಗೆ ಸ್ಥಳೀಯ ಶಾಸಕ ವೆಂಕಟರಮಣಯ್ಯರ ಸಮಯಾಭವದಿಂದ ಹಾಗೂ ಸೂಕ್ತ ರಾಜಕೀಯ ವೇದಿಕೆ ಇಲ್ಲದೆ ಈ ಬೈಕ್ ಗಳು ಕಳೆದ ೩ ತಿಂಗಳಿಂದ ನಿಂತಲ್ಲಿಯೇ ನಿಂತಿವೆ. ಮಳೆ ಗಾಳಿಗೆ ರಕ್ಷಣೆ ಇಲ್ಲದಂತಾಗಿ ಕಬ್ಬಿಣಗಳು ತುಕ್ಕು ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಕೂಡಲೇ ಶಾಸಕರು ಫಲಾನುಭವಿಗಳಿಗೆ ವಿತರಣೆ ಮಾಡಿದರೇ ನಮ್ಮ ಜೀವನಕ್ಕೆ ಅನುಕೂಲವಾಗಲಿದೆ ಅಂತಿದ್ದಾರೆ ಇಲ್ಲಿನ ಸ್ಥಳೀಯರು.
ಇನ್ನೂ ಬಗ್ಗೆ ಶಾಸಕ ವೆಂಕಟರಮಣ್ಯರನ್ನು ಪ್ರಶ್ನೆ ಮಾಡಿದರೆ ಇನ್ನೂ ಫಲಾನುಭವಿಗಳ ಆಯ್ಕೆ ನಡೆಯಬೇಕಿದೆ. ಅಲ್ಲದೆ ಸಂಬಂಧ ಪಟ್ಟ ಇಲಾಖೆಯಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬಂದ ಕೂಡಲೇ ವಿತರಣೆ ಮಾಡುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಅಂತಾ ಜಾರಿಕೆ ಉತ್ತರ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಾಲೂಕಿಗೆ ಬರಲಿದ್ದಾರೆ ಆ ವೇಳೆ ಹಂಚಿಕೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ ಅಂತಾ ಪರೋಕ್ಷವಾಗಿ ತಮ್ಮ ರಾಜಕೀಯ ನಡೆಯನ್ನೂ ಕೂಡ ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮ ಯೋಜನೆ ಜಾರಿಗೆ ತಂದರೆ ಇತ್ತ ಅವರೇ ಸರ್ಕಾರದ ಶಾಸಕರ ನಿರ್ಲಕ್ಷ್ಯ ಹಾಗೂ ರಾಜಕೀಯ ನಡೆಯಿಂದಾಗಿ ಈ ಬೈಕ್ ಗಳ ಅನಾಥವಾಗಿ ಕೊಳೆಯುವ ಪರಿಸ್ಥಿತಿಗೆ ಬಂದಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications