ದೇವರ ಭಕ್ತಿ, ನಂಬಿಕೆ ಬಗ್ಗೆ ಗೌರಿ ಲಂಕೇಶ್ ಹೇಳಿದ್ದ ಮಾತೇನು ಗೊತ್ತೆ?
Recommended Video

ಬೆಂಗಳೂರು, ಸೆಪ್ಟೆಂಬರ್ 6 : ಗೌರಿ ಲಂಕೇಶ್ ಪ್ರಬಲ ಎಡಪಂಥೀಯ ಪ್ರತಿಪಾದಕರಾಗಿದ್ದರು. ತಮ್ಮ ನಿಲುವು ಹಾಗೂ ಒಲವುಗಳ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ. ತಿಳಿಸಬೇಕಾದ ವಿಚಾರವನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಅವರಿಗೆ ಆ ನಂತರದ ಪರಿಣಾಮಗಳ ಬಗ್ಗೆ ಲೆಕ್ಕಾಚಾರವೂ ಇರುತ್ತಿರಲಿಲ್ಲ, ಭಯವೂ ಇರಲಿಲ್ಲ.
ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು
-ಇದು ಗೌರಿ ಲಂಕೇಶ್ ರನ್ನು ಸಂದರ್ಶನ ಮಾಡಿದ್ದ ಹಾಗೂ ನಾನಾ ಸಂದರ್ಭಗಳಲ್ಲಿ ಭೇಟಿ ಮಾಡಿ ಮಾತನಾಡಿದ್ದ ಪತ್ರಕರ್ತೆಯೊಬ್ಬರ ಮಾತಿದು. "ಜಯಮಾಲಾ ಶಬರಿಮಲೆ ದೇಗುಲ ಪ್ರವೇಶ ಮಾಡಿದ ವಿವಾದದ ಬಗ್ಗೆ ಗೌರಿ ಅವರ ಅಭಿಪ್ರಾಯ ಪಡೆಯಲು ಕಚೇರಿಗೆ ಹೋಗಿದ್ದೆ. ಆಗ ಅವರು ಹೇಳಿದ ಮಾತು ಅಕ್ಷರಶಃ ಹಾಗೇ ನೆನಪಿದೆ" ಎಂದು ಆ ಪತ್ರಕರ್ತೆ ಹೇಳಿದ್ದಾರೆ.

"ನೋಡು, ನನ್ನಂತಹವರನ್ನು ದೇವಸ್ಥಾನಕ್ಕೆ ಬಿಡಲಿಲ್ಲ ಅಂದರೆ, ಹೋಗ್ರಯ್ಯಾ ಅಂತ ವಾಪಸ್ ಬರ್ತೀನಿ. ಅಸಲಿಗೆ ಅಂಥ ಜಾಗಕ್ಕೆ ಹೋಗುವುದೇ ಇಲ್ಲ. ಆದರೆ ಸಾಮಾನ್ಯ ಮಹಿಳೆಯರ ನಂಬಿಕೆ, ಭಕ್ತಿ ಬೇರೆ ಥರ ಇರುತ್ತದೆ. ಅದರಲ್ಲೂ ಭಾರತೀಯ ಮಹಿಳೆ ಇನ್ನಷ್ಟು ಭಾವುಕಳು. ಅಂಥದ್ದರಲ್ಲಿ ದೇವಸ್ಥಾನದೊಳಗೆ ಬಿಡಲ್ಲ ಅನ್ನೋ ಈ ಜನ ಎಂಥವರು?" ಎಂದಿದ್ದರು ಎಂಬುದನ್ನು ಆಕೆ ನೆನಪಿಸಿಕೊಳ್ಳುತ್ತಾರೆ.
ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭೇಟಿ ಆಗಿದ್ದಾಗ ಗುಬ್ಬಿಯಲ್ಲಿ ನಡೆದಿದ್ದ ದಲಿತ ಯುವಕ ಅಭಿಷೇಕ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಕೇಳಿದ್ದನ್ನು ಹಾಗೂ ಸಿಪಿಐ ಕಾರ್ಯಕರ್ತರ ಮೇಲೆ ಹಾಕಿದ್ದ ದೇಶದ್ರೋಹ ಪ್ರಕರಣದ ಬಗ್ಗೆ ತಾವು ಪರಮೇಶ್ವರ್ ಜತೆಗೆ ಮಾತನಾಡಿದ್ದನ್ನು ಗೌರಿ ಹೇಳಿಕೊಂಡಿದ್ದಾರೆ.
ಗೌರಿ ಲಂಕೇಶ್ ರನ್ನು ನೋಡಿದರೆ ಗುಬ್ಬಚ್ಚಿ ಮರಿಯಂತಾಗಿದ್ದರು. ಮೂಳೆ-ಚಕ್ಕಳ ಕಾಣಿಸುವಂತಾಗಿದ್ದ ಆಕೆಯನ್ನು ನೋಡುವಾಗ, ಆರೋಗ್ಯ ಹೇಗಿದೆ ಎಂದು ಕೇಳುವ ಮನಸ್ಸಾಗುತ್ತಿತ್ತು. ಯಾವುದೇ ಹತ್ಯೆ ಖಂಡನೀಯ. ಅದರಲ್ಲೂ ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆಯ ಹತ್ಯೆ ತೀರಾ ಆತಂಕ ಸೃಷ್ಟಿಸುತ್ತದೆ ಎಂದು ಮೌನಕ್ಕೆ ಶರಣಾದರು ಆ ಪತ್ರಕರ್ತೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications