ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು
ಬೆಂಗಳೂರು, ನವೆಂಬರ್ 17 : ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕ ಪಥದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಸಾರ್ವಜನಿಕರಿಗೆ ಪಥದ ಕುರಿತು ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬಸ್ ಆದ್ಯತಾ ಪಥದ ಬಗ್ಗೆ ಜನರಿಗೆ ಮಾಹಿತಿ ನೀಡಿದೆ. ಬಸ್ ಪಥದಲ್ಲಿ ಬೇರೆ ವಾಹನಗಳು ಸಂಚಾರ ಮಾಡಬಾರದು ಎಂದು ಈ ಮೂಲಕ ಮನವಿ ಮಾಡಲಾಗಿದೆ.
ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ; ಕೆ. ಆರ್. ಪುರ ಬಂಡಾಯ?
ನಾಗರೀಕರಿಗಾಗಿ, ಸುರಕ್ಷಿತ, ಸಮಗ್ರ, ಕೈಗೆಟುಕುವ ಮತ್ತು ವಿಶ್ವಾಸಾರ್ಹವಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸಲು ಬಸ್ ಆದ್ಯತಾ ಪಥವನ್ನು ರಚನೆ ಮಾಡಲಾಗಿದೆ.
ಬಸ್ ಪ್ರಯಾಣಿಕರಿಗೆ ಸರ್ಕಾರದ ಸಿಹಿ ಸುದ್ದಿ: ದರ ಇಳಿಕೆಗೆ ಚಿಂತನೆ
ಬಸ್ಗಳ ಆದ್ಯತಾ ಮಾರ್ಗದಿಂದ ಬಸ್ಸುಗಳಿಗೆ ಅಗತ್ಯವಾದ ರಸ್ತೆ ಹಾಗೂ ವೇಗವನ್ನು ಸುಧಾರಿಸಲು ಅನುಕೂಲವಾಗುತ್ತದೆ. ಇದರಿಂದಾಗಿ ರಸ್ತೆಗಳಲ್ಲಿ ದಟ್ಟಣೆ ನಿವಾರಣೆಯಾಗಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಸಹಾಯಕವಾಗಲಿದೆ.
ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್ಗೆ ಚೆಂದದ ಹೆಸರು
ಈ ಯೋಜನೆಯನ್ನು ನಗರದ 12 ಹೈಡೆನ್ಸಿಟಿ ಕಾರಿಡಾರ್ಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ಹಂತವಾದ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ನಿಂದ ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿವರೆಗೆ ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲಾಗಿದೆ.
ಸೌಲಭ್ಯಗಳು : ಪ್ರತ್ಯೇಕ ಬಸ್ ಪಥದಲ್ಲಿ ಹಲವು ಸೌಲಭ್ಯಗಳಿವೆ. ಯಾವ-ಯಾವ ಸೌಲಭ್ಯಗಳಿವೆ ಎಂಬುದನ್ನು ಬಿಎಂಟಿಸಿ ಪಟ್ಟಿ ಮಾಡಿದೆ.
*
ರಸ್ತೆಯ
ಎರಡೂ
ದಿಕ್ಕಿನಲ್ಲಿ
ಬಿಎಂಟಿಸಿ
ಬಸ್ಗಳಿಗೆ
ಮೀಸಲಾದ
ಒಂದು
ಪಥ
*
800ಕ್ಕೂ
ಅಧಿಕ
ಬಸ್ಗಳ
ಕಾರ್ಯಾಚರಣೆ
*
ಪಥದಲ್ಲಿ
ಸಂಚಾರ
ನಡೆಸುವ
ಬಸ್ಗಳಿಗೆ
ಪ್ರತ್ಯೇಕ
ಪಥ
ಮತ್ತು
ಲಾಂಛನ
*
ಸುಲಲಿತ
ಸಂಚಾರಕ್ಕಾಗಿ
ಜಂಕ್ಷನ್
ಮರು
ವಿನ್ಯಾಸ
*
ಗುರುತು
ಪಟ್ಟಿಗಳು
ಹಾಗೂ
ಸೂಚನಾ
ಪಟ್ಟಿಗಳ
ಅಳವಡಿಕೆ
*
ಪ್ರಯಾಣಿಕರ
ಸುರಕ್ಷತೆ
ಮತ್ತು
ಅನುಕೂಲಕ್ಕಾಗಿ
ಸುಧಾರಿತ
ಬಸ್
ತಂಗುದಾಣಗಳು,
ಪಾದಚಾರಿ
ಸ್ಕೈವಾಕ್
ಮತ್ತು
ಪಾರ್ಕಿಗ್
ವ್ಯವಸ್ಥೆ
*
ಬಸ್
ಸಂಚಾರದ
ಆನ್ಲೈನ್
ಮೇಲ್ವಿಚಾರಣೆ
ಮತ್ತು
ವೇಳಾಪಟ್ಟಿ,
ಸಿಸಿಟಿವಿ
ವ್ಯಾಪ್ತಿ
*
ಸದರಿ
ಪಥದಲ್ಲಿ
ಬಿಎಂಟಿಸಿ
ಬಸ್,
ತುರ್ತು
ವಾಹನಗಳಾದ
ಆಂಬುಲೆನ್ಸ್,
ಅಗ್ನಿ
ವಾಹಕಗಳನ್ನು
ಹೊರತುಪಡಿಸಿ
ಉಳಿದ
ಎಲ್ಲಾ
ರೀತಿಯ
ವಾಹನಗಳ
ಪ್ರವೇಶ,
ನಿಲುಗಡೆ
ನಿಷೇಧ