ಉಗ್ರಪ್ಪ ಅವರ ಹೆಸರನ್ನು ಹೀಗಾ ಅನುವಾದ ಮಾಡೋದು? ಫೇಸ್ಬುಕ್ ಅವಾಂತರ
ಬೆಂಗಳೂರು, ನವೆಂಬರ್ 7: ವಿರೋಧಪಕ್ಷಗಳ ವಿರುದ್ಧ ನಡೆಸುವ ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ಉಗ್ರ ಪ್ರತಾಪವನ್ನು ತೋರಿಸುವ ವಿ.ಎಸ್. ಉಗ್ರಪ್ಪ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.
ಹೆಸರಿಗೆ ಅನ್ವರ್ಥದಂತೆ ಅವರು ಮಾತಿನಲ್ಲಿ ತಮ್ಮ ಉಗ್ರಸ್ವರೂಪವನ್ನು ಪ್ರದರ್ಶಿಸುತ್ತಿರುತ್ತಾರೆ. ಬಳ್ಳಾರಿ ಉಪ ಚುನಾವಣೆ ಕದನವನ್ನು ಅನೇಕರು ನಿಜವಾದ ಪೈಪೋಟಿ ಎಂದು ಅನೇಕರು ಕರೆದಿದ್ದರು. ಏಕೆಂದರೆ ಕಣದಲ್ಲಿ ಇದ್ದವರ ಹೆಸರಿನಲ್ಲಿಯೇ ಉಗ್ರ ಮತ್ತು ಶಾಂತ ಎರಡೂ ಇತ್ತು. ಕೊನೆಗೆ ಗೆಲುವು 'ಉಗ್ರ'ಪ್ಪ ಅವರ ಪಾಲಾಯಿತು.
ಉಗ್ರಪ್ಪ ಅವರ ಹೆಸರೇ ಸೂಚಿಸುವಂತೆ ಅವರೊಬ್ಬ ಉಗ್ರ. ಅವರಿಗೆ ಬಳ್ಳಾರಿ ಜಿಲ್ಲೆ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಶ್ರೀರಾಮುಲು ಲೇವಡಿ ಮಾಡಿದ್ದರು.

ಉಗ್ರಪ್ಪ ನಿಜಕ್ಕೂ ಉಗ್ರರೇ? ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ತಮ್ಮ ವಾಗ್ ಉಗ್ರತನವನ್ನು ಪ್ರದರ್ಶಿಸಬಲ್ಲರು. ಆದರೆ, ಅಂತರ್ಜಾಲ ಅನುವಾದದ ಯಡವಟ್ಟು ಕೂಡ ಉಗ್ರಪ್ಪ ಅವರನ್ನು 'ಉಗ್ರ' ಎಂದೇ ಪರಿಗಣಿಸಿದೆ.
ಉಗ್ರಪ್ಪ ಅವರನ್ನು ಅಭಿನಂದಿಸಿ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಅವರು ಮಾಡಿರುವ ಫೇಸ್ಬುಕ್ ಪೋಸ್ಟ್ ಈಗ ಎಲ್ಲಡೆ ಹರಿದಾಡುತ್ತಿದೆ.
ಎಂಬಿ ಪಾಟೀಲ್ ಅವರು ಬಳ್ಳಾರಿಯಲ್ಲಿ ಜಯಭೇರಿ ಭಾರಿಸಿದ ಉಗ್ರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ ಕನ್ನಡದಲ್ಲಿ ಪೋಸ್ಟ್ ಮಾಡಿದ್ದರು.
ಆದರೆ, ಅದನ್ನು ಕೆಲವರು ಫೇಸ್ಬುಕ್ ಕಾಮೆಂಟ್ ಕೆಳಗೆ ಇರುವ ಟ್ರಾನ್ಸ್ಲೇಷನ್ ಆಯ್ಕೆ ಕ್ಲಿಕ್ ಮಾಡಿದ್ದಾಗ ಕಾಣಿಸಿದ್ದೇ ಬೇರೆ. ಕನ್ನಡದಿಂದ ಇಂಗ್ಲಿಷ್ಗೆ ಇಡೀ ಪೋಸ್ಟ್ಅನ್ನು ಅನುವಾದ ಮಾಡಿದ್ದ ಟ್ರಾನ್ಸ್ಲೇಷನ್ ಆಯ್ಕೆಯು, ಉಗ್ರಪ್ಪ ಅವರ ಹೆಸರನ್ನೂ ಅನುವಾದ ಮಾಡಿ ಅವಾಂತರ ಸೃಷ್ಟಿಸಿದೆ.

ಶ್ರೀ ಉಗ್ರಪ್ಪ ಅವರಿಗೆ ಅಭಿನಂದನೆಗಳು ಎಂಬುದು ಇಂಗ್ಲಿಷ್ನಲ್ಲಿ ಕಂಗ್ರಾಜುಲೇಷನ್ಸ್ ಟು ಶ್ರೀ ಟೆರರಿಸ್ಟ್ಸ್ ಎಂದು ಅನುವಾದಗೊಂಡಿದೆ. ಇದು ಎಲ್ಲೆಡೆ ತಮಾಷೆಯ ವಸ್ತುವಾಗಿದೆ. ಗೂಗಲ್ ಮತ್ತು ಈ ರೀತಿ ಆಪ್ ಅನುವಾದಗಳನ್ನು ನಂಬಿಕೊಂಡರೆ ಇಂತಹ ಯಡವಟ್ಟುಗಳಾಗುತ್ತವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಗ್ರಪ್ಪ ಅವರ ಹೆಸರು ಮಾತ್ರವಲ್ಲದೆ, ಸ್ವಯಂಚಾಲಿತ ಅನುವಾದದಲ್ಲಿ ವಾಕ್ಯಗಳೂ ತಪ್ಪಾಗಿ ಮೂಡಿಬಂದಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications