ಅನುಪಮಾ ಶೆಣೈ ಫೇಸ್ಬುಕ್ ಗೆ ರೀ ಎಂಟ್ರಿ, ಮರುನೇಮಕಾತಿಗಾಗಿ ಅರ್ಜಿ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರು ಫೇಸ್ಬುಕ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಹಿತೈಷಿಗಳ ಸಲಹೆಯಂತೆ ಉದ್ಯೋಗಕ್ಕೆ ಮರಳಲಿದ್ದು, ಮರುನೇಮಕಾತಿಗಾಗಿ ಅರ್ಜಿ ಹಾಕಿದ್ದೇನೆ ಎಂದಿದ್ದಾರೆ.
ಬೆಂಗಳೂರು, ಜನವರಿ 15: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಫೇಸ್ಬುಕ್ ಗೆ ರೀ ಎಂಟ್ರಿ ಕೊಟ್ಟಿರುವ ಶೆಣೈ ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ ಉದ್ಯೋಗಕ್ಕೆ ಮರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಿತೈಷಿಗಳ ಸಲಹೆಯಂತೆ ಉದ್ಯೋಗಕ್ಕೆ ಮರಳಲಿದ್ದು, ಮರುನೇಮಕಾತಿಗಾಗಿ ಅರ್ಜಿ ಹಾಕಿದ್ದೇನೆ ಎಂದಿದ್ದಾರೆ.
ಹಾಗೆ ನೋಡಿದರೆ, ಪೊಲೀಸ್ ಇಲಾಖೆಗೆ ಮರಳುವ ಪ್ರಯತ್ನ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಲಹೆ ಪಡೆದಿದ್ದರು. [ರಾಜೀನಾಮೆ ಹಿಂಪಡೆಯುವ ಬಗ್ಗೆ ಅನುಪಮಾ ಶೆಣೈ ಸುಳಿವು]

ನಂತರ ಐದಾರು ತಿಂಗಳುಗಳ ಕಾಲ ಯೋಜನೆಯೊಂದರಲ್ಲಿ ತೊಡಗಿಕೊಂಡಿದ್ದರು. ಈಗ ಹಿತೈಷಿಗಳ ಸಲಹೆಯಂತೆ ಇಲಾಖೆಯಲ್ಲಿ ಮರು ನೇಮಕಾತಿಗಾಗಿ ಅರ್ಜಿ ಹಾಕಿದ್ದಾರೆ.
ಫೇಸ್ ಬುಕ್ ಗೆ ರೀ ಎಂಟ್ರಿ ಕೊಟ್ಟ ಬಳಿಕ ಸೈನಿಕರ ಬವಣೆ, ಅಮೆಜಾನ್ ವಿಕೃತಿ ಸೇರಿದಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಇಲಾಖೆಗೆ ಮರಳುತ್ತಿರುವ ಬಗ್ಗೆ ಬರೆದುಕೊಂಡಿದ್ದು, ಹಾಲಿವುಡ್ ನಟ ವಿಲ್ ಸ್ಮಿತ್ ಅಭಿನಯದ The_Pursuit_of_Happiness! ಚಿತ್ರ ಹಾಗೂ ಚಿತ್ರದ ಡೈಲಾಗ್ ಉಲ್ಲೇಖಿಸಿದ್ದಾರೆ.
ಶೆಣೈ ಅವರ ಮರು ಎಂಟ್ರಿಗೆ ಅಭಿಮಾನಿಗಳಿಂದ ಮುಕ್ತ ಸ್ವಾಗತ ಕೂಡಾ ಸಿಕ್ಕಿದೆ. ಶೆಣೈ ಅವರ ಫೇಸ್ ಬುಕ್ ಪೋಸ್ಟ್ ಯಥಾವತ್ತಾಗಿ ಇಲ್ಲಿ ಕೊಡಲಾಗಿದೆ. ಜತೆಗೆ ಮತ್ತೊಂದು ಪೋಸ್ಟ್ ಕೂಡಾ ಇದೆ ಓದಿ..
Facebook ಮಿತ್ರರೆ, ಬಹಳ ದಿನಗಳ ಬಳಿಕ ನಿನ್ನೆಯಷ್ಟೇ ಮತ್ತೆ facebookಗೆ ವಾಪಸ್ ಬಂದೆ, ಕೆಲಸಕ್ಕೆ ರಾಜಿನಾಮೆ ನೀಡಿದ ಬಳಿಕ ಏನ್ ಮಾಡೋದು ಅಂತ ಇದ್ದೆ. ಬಹಳ ಆತ್ಮೀಯರು, ಹಿತೈಷಿಗಳು ಮಾರ್ಗದರ್ಶನ ಮಾಡಿ, 'ಈಗೋ' ಬಿಡು ವಾಪಾಸ್ ಕೆಲಸಕ್ಕೆ ಸೇರು, ನಾವೆಲ್ಲ ಇದ್ದೇವೆ ಎಂದರು. ಅವರೆಲ್ಲರ ಪ್ರೀತಿಗೆ ತಲೆಬಾಗಿ ಮರುನೇಮಕಾತಿಗಾಗಿ ಸರಕಾರಕ್ಕೆ ಅರ್ಜಿ ನೀಡಿದೆ. ಒಬ್ಬ ಹಿರಿಯಣ್ಣನಂತೂ ನನಗೇ ಗೊತ್ತಿಲ್ಲದಂತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಕೆಲಸ ಕೊಡಿ ಇಲ್ಲಾಂದ್ರೆ ಸಿಡಿ ಬಿಡ್ತೀನಿ' ಅಂತ ಬೆದರಿಸಿದ (ಯಾವ ಸಿಡಿ ಅನ್ನುವುದು ಸಸ್ಪೆನ್ಸ್!). ಆದರೆ ಸರಕಾರಿ ಕೆಲಸ ದೇವರ ಕೆಲಸ. ದೇವರ ಪೂಜೆಯಂತೆ ಬಹಳ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯ ವರೆಗೂ ಮನೆಯಲ್ಲೇ ಇರಲು ಬೇಸರವಾಗಿ ಏನಾದರೂ ಸಣ್ಣ projectನಲ್ಲಿ ಕೆಲಸ ಮಾಡೋಣವೆಂದು ಅಂದುಕೊಂಡೆ. ಒಂದು project ಸಿಕ್ಕಿತು. ಹತ್ತಿರ ಹತಿರ ಸುಮಾರು ೫ ತಿಂಗಳುಗಳ ಕಾಲ ಅದರಲ್ಲಿ ಕೆಲಸ ಮಾಡಿದೆ. ಕಳೆದ ಒಂದು ತಿಂಗಳು ಬಹಳ ಕೆಲಸವಿದ್ದುದರಿಂದ facebookಗೆ ರಜೆ ಹೇಳಿದ್ದೆ. Project ವಿಚಾರವನ್ನು ಮುಂದಿನ statusನಲ್ಲಿ ತಿಳಿಸುತ್ತೇನೆ. #ಎಲ್ಲರಿಗೂ_Happy_Sun_Day! #In_The_Pursuit_of_Happiness!
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications