ಮದುವೆಯ ಸೂಟ್ ತಲುಪಿಸದ ಕೊರಿಯರ್ ಕಂಪನಿಗೆ ದಂಡ!
ಬೆಂಗಳೂರು,ಆಗಸ್ಟ್ 08: ಹೈದರಾಬಾದ್ನಿಂದ ಬೆಂಗಳೂರಿಗೆ ಮದುವೆ ಸೂಟ್ ತಲುಪಿಸಲು ವಿಫಲವಾದ ಖಾಸಗಿ ಕೊರಿಯರ್ ಸೇವೆ ಡಿಟಿಡಿಸಿ ಎಕ್ಸ್ಪ್ರೆಸ್ ಲಿಮಿಟೆಡ್ಗೆ ದಂಡ ವಿಧಿಸಲಾಗಿದೆ.
ಬೆಂಗಳೂರು (ನಗರ) ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕೊರಿಯರ್ ಕಂಪನಿಗೆ ಶೇಕಡಾ 10 ಬಡ್ಡಿಯ ಜೊತೆಗೆ ಸುಮಾರು 12,000 ಪಾವತಿಸಲು ಆದೇಶಿಸಿದೆ ಎಂದು ವರದಿ ಹೇಳಿದೆ.
ಸಿದ್ದರಾಜು ಎಂಬುವವರು ಬೆಂಗಳೂರಿನ ಪ್ರಮೋದ್ ಲೇಔಟ್ನ ವ್ಯಕ್ತಿ. ಸಿದ್ದರಾಜು ಮತ್ತು ಹೈದರಾಬಾದ್ನ ಮನೀಶ್ ಶರ್ಮಾ ಸಹೋದ್ಯೋಗಿಗಳಾಗಿದ್ದು, 2017ರಲ್ಲಿ ಮನೀಶ್ ಶರ್ಮಾ ಮದುವೆ ಹೈದರಾಬಾದ್ನಲ್ಲಿ ನಿಶ್ಚಯವಾಗಿತ್ತು.

ಈ ವೇಳೆ ಗೆಳೆಯನಿಗೆ ಸೂಟ್ ಉಡುಗೊರೆಯಾಗಿ ನೀಡುತ್ತೇನೆ ಎಂದು ಸಿದ್ದರಾಜು ಮಾತು ನೀಡಿದ್ದರು. ಡಿಟಿಡಿಸಿ ಮೂಲಕ ತನ್ನ ಸ್ನೇಹಿತರಿಗೆ ಮದುವೆಯ ಸೂಟ್ ಕಳುಹಿಸಿದ್ದಾರೆ. ಸ್ನೇಹಿತನ ಮದುವೆಯನ್ನು ಡಿಸೆಂಬರ್ 2019ಕ್ಕೆ ನಿಗದಿಪಡಿಸಲಾಗಿತ್ತು ಆದರೆ ಡಿಟಿಡಿಸಿ ಕೊರಿಯರ್ ಅವರು ಪ್ಯಾಕೇಜ್ ತಲುಪಿಸಲು ವಿಫಲರಾದರು.
ಕಾಣ ಕೇಳಿ ಸಂಪರ್ಕಿಸಿದಾಗ ಡಿಟಿಡಿಸಿಗೆ ಕಳುಹಿಸಿದ್ದ ವಸ್ತು ಕಳೆದುಹೋಗಿದೆ ಅಥವಾ ಕಳ್ಳತನವಾಗಿದೆ ಎಂದು ಹೇಳಿದರು. ಈ ಸಮಸ್ಯೆಯು ದೇವರ ಮಹಿಮೆಯಾಗಿರಬಹುದು. ಹೀಗಾಗಿ ಗ್ರಾಹಕರಿಗೆ ಯಾವುದೇ ಮರುಪಾವತಿ ಅಥವಾ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಡಿಟಿಡಿಸಿ ಹೇಳಿದೆ.
ಬಳಿಕ ಸಿದ್ದೇಶ ದೂರು ಸಲ್ಲಿಸಿದ್ದು, ಗ್ರಾಹಕ ಆಯೋಗವು ಕೊರಿಯರ್ ಕಂಪನಿಗೆ 11,495 ಪಾವತಿಸಲು ಸೂಚಿಸಿತು. ಅಲ್ಲದೆ ದಾವೆಯ ವೆಚ್ಚ 10 ಪ್ರತಿಶತದಷ್ಟು ವಾರ್ಷಿಕ ಬಡ್ಡಿಯೊಂದಿಗೆ ಪೂರ್ವಾನ್ವಯವಾಗಿ ಅನ್ವಯಿಸುವಂತೆ ಅದು ಹೇಳಿತು. 500 ರುಪಾಯಿ ಬುಕಿಂಗ್ ಶುಲ್ಕವನ್ನು ಮರುಪಾವತಿಸುವಂತೆ ಕಂಪನಿಗೆ ಸೂಚಿಸಲಾಯಿತು.

ಇದಲ್ಲದೆ, ಮರುಪಾವತಿಯ ಜೊತೆಗೆ ಆಯೋಗವು ಡಿಟಿಡಿಸಿಗೆ 25,000 ಪರಿಹಾರ ಶುಲ್ಕ ಮತ್ತು 10,000 ವ್ಯಾಜ್ಯ ಶುಲ್ಕವನ್ನು ಪಾವತಿಸಲು ಆದೇಶ ನೀಡಿದೆ.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications