ಮಹಿಳಾ ಸಂರಕ್ಷಣೆಯ ಸುರಕ್ಷಾ ಆಪ್ ಗೆ ಈಗ ಸೆಲೆಬ್ರಿಟಿ ಸಾಥ್
ರಾಜಧಾನಿ ಬೆಂಗಳೂರಿನ ಮಹಿಳೆಯರ ರಕ್ಷಣೆಗಾಗಿ ಜಾರಿಯಾದ ಪಿಂಕ್ ಹೊಯ್ಸಳದ ಉಪಯೋಗವನ್ನು ಜನರಿಗೆ ಮನದಟ್ಟುಮಾಡುವ ಸಲುವಾಗಿ ಸರ್ಕಾರ ಸೆಲೆಬ್ರಿಟಿಗಳ ಸಹಾಯ ಕೇಳಿದೆ.
ಬೆಂಗಳೂರು, ಮೇ 04: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ, ಬೆಂಗಳೂರು ಸಿಟಿ ಪೊಲೀಸ್ ಸಹಕಾರದೊಂದಿಗೆ ಪಿಂಕ್ ಹೊಯ್ಸಳ ಪಡೆಯನ್ನು ನಿಯೋಜಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಪಿಂಕ್ ಹೊಯ್ಸಳದ ಉಪಯೋಗವನ್ನು ಜನರಿಗೆ ಮನದಟ್ಟುಮಾಡುವ ಸಲುವಾಗಿ ಸರ್ಕಾರ ಸೆಲೆಬ್ರಿಟಿಗಳ ಸಹಾಯ ಕೇಳಿದೆ.
ಅದರ ಮೊದಲ ಹೆಜ್ಜೆಯಾಗಿ ಕಿರುತೆರೆ ನಟಿ ನಯನಾ ಪುಟ್ಟಸ್ವಾಮಿಯವರು ಸುರಕ್ಷಾ ಆಪ್ ಕುರಿತು ಆಡಿದ ಮಾತಿನ ವಿಡಿಯೋವೊಂದನ್ನು ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟಿನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಮತ್ತಷ್ಟು ಸೆಲೆಬ್ರಿಟಿಗಳ ಮೂಲಕ ಆಪ್ ಕುರಿತು ಜಾಗೃತಿ ಮೂಡಿಸುವ ಇಂಗಿತವನ್ನು ಸರ್ಕಾರ ಹೊಂದಿದೆ.[ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!]

ಮಹಿಳಾ ರಕ್ಷಣೆಗಾಗಿ 51 ಪಿಂಕ್ ಹೊಯ್ಸಳ ವಾಹನಗಳನ್ನು, ಸುರಕ್ಷಾ ಎಂಬ ಆಪ್ ಅನ್ನು ಏಪ್ರಿಲ್ 10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಲಂಡನ್ ಮಾದರಿಯ ಈ ಸೌಲಭ್ಯದಿಂದ ರಾಜಧಾನಿಯಲ್ಲಿ ಹೆಣ್ಣು ಮಕ್ಕಳು ಇನ್ನುಮುಂದೆ ನಿರ್ಭಯವಾಗಿ ಓಡಾಡಬಹುದಾದ ವಾತಾವರಣ ಸೃಷ್ಟಿಸಲಿದೆ ಎಂದು ಭರವಸೆ ಹೊಂದಲಾಗಿದೆ.[ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ]
A post shared by Bengaluru City Police (@blrcitypolice) on












Click it and Unblock the Notifications