ಜಲಮಂಡಳಿಯ ದಕ್ಷಿಣ, ವಾಯುವ್ಯ ವಿಭಾಗದಲ್ಲಿ ಇಂದು ನೀರಿನ ಅದಾಲತ್
ಬೆಂಗಳೂರು, ಮಾರ್ಚ್ 26: ಜಲಮಂಡಳಿಯ ದಕ್ಷಿಣ-4, ವಾಯುವ್ಯ -1 ಉಪವಿಭಾಗಗಳಲ್ಲಿ ಸೋಮವಾರ ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನೀರಿನ ಅದಾಲತ್ ನಡೆಯಲಿದೆ.
ದಕ್ಷಿಣ-4 ವಿಭಾಗದ ಎಚ್.ಎಸ್.ಆರ್. ಲೇಔಟ್, ಕೋಡಿಚಿಕ್ಕನಹಳ್ಳಿ ಸೇವಾಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಬಿಟಿಎಂ 2ನೇ ಹಂತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 080-22945143,22945392 ಸಂಪರ್ಕಿಸಬಹುದು.
ವಾಯುವ್ಯ-1 ವಿಭಾಗದ ಕೇತಮಾರನಹಳ್ಳಿ, ಮಾಹಲಕ್ಷ್ಮೀ ಲೇಔಟ್, ರಾಜಾಜಿನಗರ, ನಂದಿ ಲೇಔಟ್ ಸೇವಾ ಠಾಣೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಕೇತಮಾರನಹಳ್ಳಿ ವಿದ್ಯಾವರ್ಧಕ ಶಾಲೆ ಹಿಂಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಆಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 080-23491123, 22945176ಕ್ಕೆ ಸಂಪರ್ಕಿಸಬಹುದಾಗಿದೆ.













Click it and Unblock the Notifications