Bengaluru Property: ಬೆಂಗಳೂರಲ್ಲಿ ಭೂಮಿ & ಜಾಗ ಖರೀದಿ: "ರಿಯಾಲಿಟಿ ಚೆಕ್"ಗೆ ಇದು ಬೆಸ್ಟ್ ಟೈಮ್ ?!
Bengaluru Property: ಬೆಂಗಳೂರು ಇಲ್ಲವೇ ಕರ್ನಾಟಕದ ಯಾವುದೇ ಭಾಗದಲ್ಲಿ ಪ್ರಾಪರ್ಟಿ ಹಾಗೂ ಜಾಗ ಖರೀದಿ ಮಾಡುವುದಕ್ಕೆ ಇಲ್ಲೊಂದು ಬೆಸ್ಟ್ ಟಿಪ್ಸ್ ಇದೆ. ಬೆಂಗಳೂರಿನಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಆದರೆ, ಎಲ್ಲಿ ಭೂಮಿ ಹಾಗೂ ಜಾಗ ಖರೀದಿ ಮಾಡಿದರೆ ಒಳ್ಳೆಯದು, ಎಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದರೆ ಲಾಭ ಎನ್ನುವ ಚರ್ಚೆ ನಡೆಯುತ್ತಲ್ಲೇ ಇರುತ್ತದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ಯಾವುದಾದರೂ ಹೊಸ ಯೋಜನೆಗಳು ಬಂದರೂ ಭೂಮಿಗೆ ಬಂಪರ್ ಬೆಲೆ ಬರುತ್ತದೆ. ಇದೀಗ ರಿಯಲ್ ಎಸ್ಟೇಟ್ ವಿಚಾರದಲ್ಲಿ ಈ ಸರಳ ವಿಷಯವನ್ನು ನೋಡಿದರೆ ಸಾಕು ಅಂತಿದ್ದಾರೆ ನೆಟ್ಟಿಗರು ಅದೇನು ಎನ್ನುವ ಡೀಟೆಲ್ಸ್ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ ನಿಜ. ಆದರೆ, ಎಲ್ಲಿ ಭೂಮಿ ಖರೀದಿ ಮಾಡಬೇಕು ಹಾಗೂ ಎಲ್ಲಿ ಖರೀದಿ ಮಾಡಬಾರದು ಎನ್ನುವ ಬಗ್ಗೆ ಜನರಲ್ಲಿ ಇಂದಿಗೂ ಗೊಂದಲ ಇದ್ದೇ ಇದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾದ ಮೇಲೆ ಜನ ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿ ಜನ ಪರದಾಡಿದ್ದಾರೆ. ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳನ್ನು ಖರೀದಿ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಈಗ ಮಳೆಯಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ.

ನೀವು ಎಲ್ಲಿಯಾದರೂ ಭೂಮಿ ಅಥವಾ ಜಾಗವನ್ನು ಖರೀದಿ ಮಾಡಬೇಕು ಎಂದಾದರೆ, ಸಿಂಪಲ್ ಆ ಜಾಗ ಅಥವಾ ಪ್ರದೇಶಕ್ಕೆ ಮಳೆಗಾಲದಲ್ಲಿ ಭೇಟಿ ನೀಡಿದರೆ ಸಾಕು ನಿಮಗೆ ಆ ಜಾಗದ ಎಲ್ಲಾ ವಿಷಯಗಳೂ ತಿಳಿಯಲಿದೆ. ಇದೊಂದು ಅತ್ಯುತ್ತಮ ರಿಯಲ್ ಎಸ್ಟೇಟ್ನ ಸಿಂಪಲ್ ಪರೀಕ್ಷೆ. ನೀವು ಜಾಹೀರಾತು ಅಥವಾ ಮತ್ಯಾವುದೇ ವೆಬ್ಸೈಟ್ ಪರೀಕ್ಷೆ ಮಾಡುವುದಕ್ಕಿಂತ ಸಿಂಪಲ್ ಹಾಗೂ ಉತ್ತಮ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಆಸ್ತಿ ಖರೀದಿ ಮಾಡುವುದಕ್ಕೆ ಮುಂಚೆ ಮಳೆಗಾಲದಲ್ಲಿ ಭೇಟಿ ನೀಡಿ, ಒಳಚರಂಡಿ ಹಾಗೂ ಡ್ರೈನೇಜ್ ಸಿಸ್ಟಂಗಳನ್ನು ಪರಿಶೀಲನೆ ಮಾಡಿ ಇಷ್ಟು ನೋಡಿದರೆ ಸಾಕು ನೀವು ಆಸ್ತಿ ಖರೀದಿ ಮಾಡಬೇಕೋ ಬೇಡವೋ ಅಂತ ತಿಳಿಯಲಿದೆ. ಸುಮ್ಮನೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟುವುದಕ್ಕಿಂತಲೂ ಇದೊಂದು ಬೆಸ್ಟ್ ಆಪ್ಷನ್ ಅಂತ ನೆಟ್ಟಿಗರು ಹೇಳಿದ್ದಾರೆ. ಅಲ್ಲದೇ ರಿಯಲ್ ಎಸ್ಟೇಟ್ ತಜ್ಞರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಯಾವೆಲ್ಲಾ ಪ್ರದೇಶಗಳು ಹೆಚ್ಚು ಪ್ರವಾಹ ಪೀಡಿತವಾಗಿವೆ. ಅಲ್ಲದೇ ಯಾವ ಭಾಗದಲ್ಲಿ ಭೂಮಿ, ಮನೆ ಹಾಗೂ ಜಾಗವನ್ನು ಖರೀದಿ ಮಾಡಬಾರದು ಎನ್ನುವ ಬಗ್ಗೆ ಜನ ರಿಯಾಕ್ಟ್ ಮಾಡುತ್ತಿದ್ದಾರೆ. ಸರ್ಜಾಪುರ ರೋಡ್, ವರ್ತೂರು, ಐಐಎಂ ಹಾಗೂ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಭೂಮಿ ಅಥವಾ ಜಾಗ ಖರೀದಿ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಅದರೊಂದಿಗೆ ಆ ಪ್ರದೇಶ ಮುಂದಿನ ದಿನಗಳಲ್ಲಿ ಹೇಗೆ ಇರಲಿದೆ. ಪ್ರವಾಹ ಪರಿಸ್ಥಿತಿಗಳು ಎದುರಾದರೆ ಉಳಿದುಕೊಳ್ಳಲು ಯೋಗ್ಯವೇ ಹಾಗೂ ಭಾರೀ ಮಳೆಯಾದರೆ ಆಸ್ತಿಗೆ ಹಾನಿಯಾಗಲಿದೆಯೇ ಎನ್ನುವುದನ್ನು ನೋಡಿಕೊಳ್ಳಿ ಎನ್ನುತ್ತಾರೆ ನೆಟ್ಟಿಗರು.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications