ಲೋಟಕ್ಕಾಗಿ ಜಗಳ: 2 ವರ್ಷದ ಮಗುವನ್ನು ಕೊಂದ ಬಾಲಕ
ಬೆಂಗಳೂರು, ಫೆಬ್ರವರಿ 08: ಒಂದು ಲೋಟಕ್ಕಾಗಿ ನಡೆದ ಜಗಳ ಮಗುವಿನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಮಾರುತಿನಗರದಲ್ಲಿ ಗುರುವಾರ ನಡೆದಿದೆ.
8 ವರ್ಷದ ಬಾಲಕ ಮಂಜುನಾಥ್ ಹಾಗೂ 2 ವರ್ಷದ ಮಗು ವೆಂಕಟೇಶ್ ಅಕ್ಕಪಕ್ಕದ ಮನೆಯವರು, ಒಂದು ಲೋಟಕ್ಕಾಗಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದಾರೆ, ಅದರ ಪರಿಣಾಮ ಮಂಜುನಾಥ್ ಎರಡು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ನಂತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಮಾರುತಿನಗರದ ನೀಲಗಿರಿ ತೋಪಿನಲ್ಲಿ ಈ ಘಟನೆ ನಡೆದಿದೆ. ಮೃತ ಮಗುವಿನ ಪೋಷಕರಾದ ಬಸವರಾಜ್ ಮತ್ತು ವೆಂಕಮ್ಮ ದಂಪತಿಗಳು ಈರಣ್ಣ ಎಂಬುವವರ ಮೇಲೆ ಹತ್ಯೆ ಆರೋಪ ಮಾಡಿ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.












Click it and Unblock the Notifications