BMTC: ಹೊಸ ಮಾರ್ಗದಲ್ಲಿ ಹೆಚ್ಚುವರಿ ಬಸ್ ಕಾರ್ಯಾಚರಣೆ: ಮಾಹಿತಿ
ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸದಾ ಕಾರ್ಯ ನಿರತವಾಗಿರುವ ಸಾರಿಗೆ ಇಲಾಖೆಯು ನಗರದಲ್ಲಿ ಹೊಸ ಮಾರ್ಗಗಳಲ್ಲಿ ಬಸ್ಗಳ ಕಾರ್ಯಾಚರಣೆ ಆರಂಭಿಸಿದೆ.
ಹೌದು, ಬೆಂಗಳೂರಿನ ಹೊರವಲಯ ಮತ್ತು ನಗರದೊಳಗಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಟ್ರಾಫಿಕ್ ಇಳಿಕೆಯ ದೃಷ್ಟಿಯಿಂದ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್ಗಳನ್ನು ಮಂಗಳವಾರ (ಫೆ.20ರಿಂದ) ಆರಂಭಿಸಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಬಿಎಂಟಿಸಿ ಬಸ್ ಹೆಚ್ಚುವರಿ ಮಾರ್ಗಗಳ ವಿವರ
ನಗರದ ಸರ್ಜಾಪುರದಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ಗೆ ನಾಲ್ಕು ವಾಯು ವಜ್ರ ಬಸ್ಗಳು 30 ಟ್ರಿಪ್ ಸಂಚರಿಸಲಿವೆ. ಇಲ್ಲಿಂದಲೇ ಹೆಬ್ಬಾಳಕ್ಕೆ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತ್ಹಳ್ಳಿ ಮೇಲ್ಸೇತುವೆ ಮಾರ್ಗವಾಗಿ ನಿತ್ಯ 4 ವಜ್ರ ಬಸ್ಗಳು ನಿತ್ಯ 16 ಟ್ರಿಪ್ ಹೊಡೆಯಲಿವೆ.
ನಗರದ ಸರ್ಜಾಪುರದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿತ್ಯ 4 ವಾಯುವಜ್ರ ಬಸ್ಗಳು ಸಂಚರಿಸಲಿವೆ. ಪ್ರತಿ ನಿತ್ಯ ಈ ಬಸ್ಗಳು ಇಲ್ಲಿಂದ ನಾಲ್ಕು 4 ಟ್ರಿಪ್ ಹೊಡೆಯಲಿವೆ. ಈ ಭಾಗದ ಸಾವಿರಾರು ಜನರಿಗೆ ಸಹಾಯವಾಗಲಿದೆ. ಈ ಭಾಗದಲ್ಲಿ ಸಂಚಾರ ದಟ್ಟಣೆಯು ಕಡಿಮೆ ಆಗಲಿದೆ.

ವಾಯುವಜ್ರ ಬಸ್ಗಳು ಸರ್ಜಾಪುರ, ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ಜಂಕ್ಷನ್, ಮಾರತ್ಹಳ್ಳಿ ಮೇಲ್ಸೇತುವೆ ಮೂಲಕ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಲಿವೆ. ವಾಯು ವಜ್ರಬಸ್ಗಳಿಗೆ ಕಿಲೋ ಮೀಟರ್ ಆಧಾರದಲ್ಲಿ ಹೇಗೆ ಟಿಕೆಟ್ ದರ ನಿಗದಿ ಆಗಿರುತ್ತದೆಯೋ ಇಲ್ಲಿ ಅದೇ ರೀತಿಯ ಪ್ರಯಾಣದ ದರ ಇರಲಿದೆ.
ಬಿಎಂಟಿಸಿ ಸಾಮಾನ್ಯ ಬಸ್ಗಳು ಹೊರವಲಯದ ಸರ್ಜಾಪುರ ದಿಂದ ಹೆಬ್ಬಾಳಕ್ಕೆ ದೊಮ್ಮಸಂದ್ರ, ಕೊಡತಿ ಗೇಟ್, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್ಹಳ್ಳಿ ಮೇಲ್ಸೇತುವೆ ಮೂಲಕ ಶಿವಾಜಿನಗರಕ್ಕೆ ಹಾಗೂ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಶಾಂತಿನಗರ ಟಿಟಿಎಂಸಿ ಮೂಲಕ ಡೈರಿ ಸರ್ಕಲ್, ಗುರಪ್ಪನಪಾಳ್ಯ ಮಾರ್ಗದಲ್ಲಿ ಓಡಾಡುತ್ತವೆ.
ಬಿಎಂಟಿಸಿಗೆ 1300 ಬಸ್ ಸೇರ್ಪಡೆ
ಕರ್ನಾಟಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಆದಷ್ಟು ಶೀಘ್ರವೇ 5800 ಬಸ್ಗಳ ಸೇರ್ಪಡೆ ಆಗಲಿವೆ. ಇವು ಎಲ್ಲ ನಾಲ್ಕು ನಿಗಮಗಳಿಗೂ ಹಂಚಿಕೆ ಆಗಲಿವೆ. ಏಪ್ರೀಲ್ ವೇಳೆಗೆ 5000 ಬಸ್ಗಳನ್ನು ಖರೀದಿಸಲಾಗುವುದು. ಇದಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ.
ಇತ್ತೀಚಿನ ಬಜೆಟ್ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಸಾರಿಗೆ ಸುಧಾರಣೆಗೆ ಹೊಸ ಬಸ್ ಸೇರ್ಪಡೆ ಬಗ್ಗೆ ಘೋಷಿಸಿದ್ದಾರೆ. ಒಟ್ಟು 1300 ಅಧಿಕ ಎಲೆಕ್ಟ್ರಿಕ್ ಬಸ್ ಹಾಗೂ 820 ಬಿಎಸ್ 6ನ ಡೀಸೆಲ್ ಇಂಧನ ಬಳಕೆಯ ಹೊಸ ಬಸ್ಗಳನ್ನು ಬಿಎಂಟಿಸಿ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದರು.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications