ಶುಕ್ರವಾರ ಬಿಎಂಟಿಸಿ ಬಸ್ ದಿನ ಮಿಸ್ ಮಾಡ್ಬೇಡಿ
ಬೆಂಗಳೂರು, ಜು.3: ಸಾರ್ವಜನಿಕ ಸಾರಿಗೆ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ವಾಹನದಟ್ಟಣೆ ಕಡಿಮೆ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ತಿಂಗಳಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ತನ್ನ 53ನೇ ಬಸ್ ದಿನವನ್ನು ಜು.4 ಶುಕ್ರವಾರದಂದು ಆಚರಿಸಲಿದೆ.
ಈ ದಿನದ ಅಂಗವಾಗಿ ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಮತ್ತು ಹಳೇ ಮದ್ರಾಸ್ ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 7ರಿಂದ ರಾತ್ರಿ 10ರವರೆಗೂ ಸುಮಾರು 1,500ಕ್ಕೂ ಹೆಚ್ಚು ಸಾಮಾನ್ಯ ಪಾಳಿ ಅನುಸೂಚಿಗಳನ್ನು ವಿಸ್ತರಿಸಲಾಗುತ್ತಿದೆ. ಇದರಿಂದ ಅಂದು ಪ್ರಯಾಣಿಕರಿಗೆ ಹೆಚ್ಚುವರಿ ಸೇವೆ ದೊರೆಯಲಿದೆ ಎಂದು ಬಿಎಂಟಿಸಿ ತಿಳಿಸಿದೆ.[ಬಿಎಂಟಿಸಿ ಬಸ್ಸಿನ ಕ್ಷಣ-ಕ್ಷಣದ ಮಾಹಿತಿ ಇನ್ನು ಲಭ್ಯ]

ಹೊಸದಾಗಿ ಪರಿಚಯಿಸಲಾದ ಮಾರ್ಗಸೂಚಿಗಳು:
ಮಾರ್ಗಸಂಖ್ಯೆ 375-ಇ : ಕೆಂಗೇರಿ ಟಿಟಿಎಂಸಿಯಿಂದ ಮೈಲಸಂದ್ರ ಗೇಟ್, ಮೂಕಾಂಬಿಕಾನಗರ, ಬಿಜಿಎಸ್ ಹೆಲ್ತ್ ಸಿಟಿ, ಉತ್ತರಹಳ್ಳಿ, ಕದಿರೇನಹಳ್ಳಿ ವಿಲೇಜ್ ಮಾರ್ಗವಾಗಿ ಬನಶಂಕರಿ ಟಿಟಿಎಂಸಿಗೆ
ಹೊಸ ಮಾರ್ಗಸಂಖ್ಯೆ ಜಿ-3ಎ: ಶಿವಾಜಿನಗರ ಬಸ್ ನಿಲ್ದಾಣದಿಂದ ಮಹಾತ್ಮ ಗಾಂಧಿ ಪ್ರತಿಮೆ, ಕ್ಯಾಷ್ ಪಾರ್ಮಸಿ, ಬ್ರಿಗೇಡ್ ರಸ್ತೆ, ಆಡುಗೋಡಿ ಹಾಗೂ ಬೊಮ್ಮನಹಳ್ಳಿ ಮಾರ್ಗವಾಗಿ ಎಲೆಕ್ಟ್ರಾನಿಕ್ ವಿಪ್ರೋಗೇಟ್ ಗೆ 5.
ಮಾರ್ಗಸಂಖ್ಯೆ 340-ಎಎ : ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೋರೇಷನ್, ಶಾಂತಿನಗರ, ಲಕ್ಕಸಂದ್ರ, ಡೈರಿ ಸರ್ಕಲ್, ಆಡುಗೋಡಿ ಮುಂದುವರೆದು ಮಾರ್ಗಸಂಖ್ಯೆ 171 ರಲ್ಲಿ ಕೋರಮಂಗಲ ಕೊನೆ ನಿಲ್ದಾಣವರೆಗೆ ಬಂದು ನಂತರ ಜಕ್ಕಸಂದ್ರ, ಅಗರ, ಹೆಚ್ಎಸ್ಆರ್ ಬಡಾವಣೆ 24ನೇ ಮುಖ್ಯರಸ್ತೆ, ಸಿ.ಪಿ.ಡಬ್ಲ್ಯೂ.ಡಿ ಕ್ವಾಟರ್ಸ್ ಹಾಗೂ ಪರಂಗಿಪಾಳ್ಯ ಮಾರ್ಗವಾಗಿ ಹೆಚ್ಎಸ್ಆರ್ ಬಡಾವಣೆ 2ನೇ ಸೆಕ್ಟರ್ (ಹಳೇ ಕೇಂಬ್ರಿಡ್ಜ್ ಶಾಲೆ) [810 ಹೊಸ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ]
ಮಾರ್ಗಸಂಖ್ಯೆ 289-ಝಡ್: ಕೆಂಪೇಗೌಡ ಬಸ್ ನಿಲ್ದಾಣದಿಂದ ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ವೆಂಕಟಾಲ, ಸಾತನೂರು ಹಾಗೂ ಬಾಗಲೂರು ಮಾರ್ಗವಾಗಿ ಬಂಡಿಕೊಡಗೆಹಳ್ಳಿಗೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications