Namma Metro: ಮೆಟ್ರೋ ನಿಲ್ದಾಣದಿಂದ ಶುಲ್ಕ ರಹಿತ ಆದಾಯ ಸಂಗ್ರಹಕ್ಕೆ ನಿರ್ಧಾರ, ಪೂರ್ಣ ಮಾಹಿತಿ ತಿಳಿಯರಿ
ಬೆಂಗಳೂರು ನಮ್ಮ ಮೆಟ್ರೋ ಶುಲ್ಕ ವಿಲ್ಲದೇ ಆದಾಯವನ್ನು ಗಳಿಸುವ ಮೆಟ್ರೋ ನಿಲ್ದಾಣಗಳಲ್ಲಿ ವಿನೂತನ ಪ್ರಯತ್ನವೊಂದನ್ನು ಮಾಡಲು ಮುಂದಾಗಿದೆ. ಈ ಸಂಬಂಧ ಟೆಂಡರ್ ಕರೆದಿದೆ. ಏನು ಈ ಯೋಜನೆ ಎಂಬ ಮಾಹಿತಿ ನಿಮ್ಮ ಮುಂದೆ.
ಬೆಂಗಳೂರು, ಫೆಬ್ರವರಿ 08: ಬೆಂಗಳೂರು ನಮ್ಮ ಮೆಟ್ರೋ ಶುಲ್ಕ ವಿಲ್ಲದೇ ಆದಾಯವನ್ನು ಗಳಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ಸಂಬಂಧ ಟೆಂಡರ್ ಕರೆದಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಜಾಗ ಅಭಿವೃದ್ಧಿಪಡಿಸವುದು ಸೇರಿದಂತೆ ಹೊಸ ಯೋಜನೆಗೆ ಅಗತ್ಯ ಸಲಹೆಗಾರರನ್ನು ಆಯ್ಕೆ ಮಾಡಲು ಅಲ್ಪಾವಧಿಯ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪಡೆಯುವವರು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಜಾಗವನ್ನು ಯೋಜನೆಗೆ ಬೇಕಾದಂತೆ ಇನ್ನಷ್ಟು ಅಭವೃದ್ಧಿಗೊಳಿಸುವ ಜೊತೆಗೆ ನಿಲ್ದಾಣಗಳಲ್ಲಿ ಹೆಚ್ಚಿನ ಚಿಲ್ಲರೆ ಮಾರಾಟ ಮಳಿಗೆ ವ್ಯವಸ್ಥೆ ಮಾಡಲಿದೆ. ಒಳಾಂಗಣ ಜಾಹೀರಾತುಗಳಿಗೆ ಅವಕಾಶ ನೀಡುವುದು ಸೇರಿದಂತೆ ಹಲವು ಉಪಕ್ರಮಗಳನ್ನು ನಮ್ಮ ಮೆಟ್ರೋ ಪರಿಚಯಿಸಲಿದೆ.

ಈ ಕುರಿತು ಟೆಂಡರ್ ಮುಂದಿನ ತಿಂಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕವೆ ಸಲಹೆಗಾರು ಆಯ್ಕೆಯಾಗುತ್ತಾರೆ. ಅವರು ನಿಲ್ದಾಣದ ವಿಶ್ಲೇಷಣೆ, ಉಪಕ್ರಮದ ಪರಿಕಲ್ಪನೆ ಯೋಜನೆ, ಖಾಸಗಿ ವಲಯದ ಸಹಭಾಗಿತ್ವದ ಮೂಲಕ ನಿಲ್ದಾಣದ ಜಾಗವನ್ನು ಅಭಿವೃದ್ಧಿಪಡಿಸುತ್ತಾರೆ. ನಂತರ ಶುಲ್ಕ ರಹಿತ ಆದಾಯ ಸಂಗ್ರಹ ಯೋಜನೆ ಅನುಷ್ಠಾನ, ಮೌಲ್ಯಮಾಪನ ಸೇರಿದಂತೆ ಮಾರುಕಟ್ಟೆ ಮತ್ತು ಬೇಡಿಕೆಯ ಮೌಲ್ಯಮಾಪನದ ಜವಾಬ್ದಾರಿ ಹೊರುತ್ತಾರೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
12 ವರ್ಷಗಳ ಪರವಾನಗಿ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಗರದ ಒಟ್ಟು 22 ಮೆಟ್ರೋ ನಿಲ್ದಾಣಗಳಲ್ಲಿ ಚಿಲ್ಲರೆ ಮಳಿಗೆಗಳ ಸ್ಥಾಪನೆಗೆ ಆಸಕ್ತರಿಗೆ ಸ್ಥಳಾವಕಾಶ ಒದಗಿಸಲು ಪರವಾನಗಿ ನೀಡಲು ಮುಂದಾಗಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದೆ.
ವಿವಿಧೆಡೆ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುವ 1.4 ಲಕ್ಷ ಚದರ ಅಡಿ ಖಾಲಿ ಜಾಗಗಳಿಗೆ (97 ಸ್ಥಳಗಳು) ಪರವಾನಗಿ ನೀಡಲು ಆಸಕ್ತ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಟೆಂಡರ್ ಪರವಾನಗಿ ಅವಧಿಯು 12 ವರ್ಷ ಎಂದು ತಿಳಿಸಲಾಗಿದೆ. ಪರವಾನಗಿ ಜೊತೆಗೆ ಉಪಪರವಾನಗಿ ಇಲ್ಲವೇ ಉಪಗುತ್ತಿಗೆಯನ್ನು ನೀಡುವುದಿಲ್ಲ ಎಂದು ನಮ್ಮ ಮೆಟ್ರೋ ಸ್ಪಷ್ಟಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆ 22 ಮೆಟ್ರೋ ನಿಲ್ದಾಣಗಳು ಯಾವವು?
ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್, ವಿಜಯನಗರ, ಕೆಂಗೇರಿ ಬಸ್ ಟರ್ಮಿನಲ್, ಬೈಯಪ್ಪನಹಳ್ಳಿ, ಎಸ್ವಿ ರಸ್ತೆ, ಇಂದಿರಾನಗರ, ಹಲಸೂರು, ಟ್ರಿನಿಟಿ, ಎಂಜಿ ರಸ್ತೆ, ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ರಾಜಾಜಿನಗರ, ಶ್ರೀರಾಂಪುರ, ಮಂತ್ರಿಮಾಲ್-ಸಂಪಿಗೇ ರಸ್ತೆ, ಯಶವಂತಪುರ, ಮಹಾಲಕ್ಷ್ಮಿ, ನ್ಯಾಷನಲ್ ಕಾಲೇಜು, ಜಯನಗರ, ಬನಶಂಕರಿ ಮತ್ತು ಜೆಪಿ ನಗರಗಳಲ್ಲಿ ಈ ಮಳಿಗೆ ಸ್ಥಾಪನೆ, ಒಳಾಂಗಣ ಜಾಹೀರಾತು ಸೇರಿದಂತೆ ನಮ್ಮ ಮೆಟ್ರೋ ಯೋಜನೆ ಜಾರಿಬರಲಿದೆ.
ಒಳಾಂಗಣ ಜಾಹೀರಾತು: ಆಹ್ವಾನ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮೆಟ್ರೋ ನಿಲ್ದಾಣಗಳಲ್ಲಿ ಒಳಾಂಗಣ ಜಾಹೀರಾತು ಅಳವಡಿಕೆ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಶುಲ್ಕವಿಲ್ಲದೇ ಆದಾಯ ಸಂಗ್ರಹಿಸುವ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಲು ಆಸಕ್ತರನ್ನು ಆಹ್ವಾನಿಸಿದೆ. ಈ ಬಗ್ಗೆ ಒಂದಷ್ಟು ಅಭಿಪ್ರಾಯಗಳು ಮೊದಲ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಒಳಾಂಗಣ ಜಾಹೀರಾತು ಅಳವಡಿಕೆಗಾಗಿ ಅಧಿಕಾರಿಗಳು ಪರ್ಪಲ್ ಮತ್ತು ಗ್ರೀನ್ ಕಾರಿಡಾರ್ ನಲ್ಲಿ ನಾಲ್ಕು ಭಾಗಗಳನ್ನು ವಿಂಗಡಿಸಿದ್ದಾರೆ. ಈ ಉಪಕ್ರಮ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂದು ಅನುಷ್ಠಾನದ ಬಳಿಕವೇ ತಿಳಿಯಲಿದೆ.
-
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications