ಪ್ರತಿಭಾವಂತೆ ಶರ್ಮಿಳಾ ಉಡುಪ ರಂಗ ಪ್ರವೇಶ ಯಶಸ್ವಿ
ಬೆಂಗಳೂರು, ಆಗಸ್ಟ್ 20: ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ ಶರ್ಮಿಳಾ ಅವರು ಇತ್ತೀಚೀಗೆ ರಂಗ ಪ್ರವೇಶ ಯಶಸ್ವಿಯಾಗಿದೆ. ವಿದ್ಯೆ, ಉದ್ಯೋಗದ ಜತೆಗೆ ಕಲೆಗೂ ಒತ್ತು ನೀಡಬೇಕು ಎಂಬ ದನಿಗೆ ಶರ್ಮಿಳಾ ಸಾಕ್ಷಿಯಾಗಿದ್ದಾರೆ.
ರಮೇಶ್ ಉಡುಪ ಮತ್ತು ಸುಜಾತ ರಮೇಶ್ ಇವರ ಪುತ್ರಿ ಶರ್ಮಿಳಾ ಉಡುಪ. ಇವಳ ವಿದ್ಯಾಭ್ಯಾಸ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ನಲ್ಲಿ ಮಾಡಿದ್ದಾರೆ.

ಎಸ್ಎಸ್ಎಲ್ಸಿ ನಂತರ ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ್ದಾರೆ. 2003 ರಿಂದ 2007ರವರೆಗೆ ವಿದುಷಿ "ಶುಭ ಧನಂಜಯ" ಇವರ ಬಳಿ ಅಭ್ಯಾಸ ಮಾಡಿ ಅಲ್ಲೇ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕೆಎಲ್ಇ ಕಾಲೇಜಿನಲ್ಲಿ 3 ವರ್ಷ ಪದವಿ ಪೂರ್ವ ಶಿಕ್ಷಣವನ್ನು, ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿ ನಂತರ ಎಂಬಿಎ ಸಹ ಮುಗಿಸಿದ್ದಾರೆ.
ವಿದುಷಿ ಚಂದ್ರಿಕಾ ರಾಘವೇಂದ್ರ ರವರು ನಡೆಸುತ್ತಿರುವ "ಭರತ ಕಲಾ ಯೋಗ ಸ್ಕೂಲ್ ಆಫ್ ಆರ್ಟ್ಸ್" ನಲ್ಲಿ ಅಭ್ಯಾಸ ಮಾಡಿ ಸೀನಿಯರ್ ಪರೀಕ್ಷೆ ಮುಗಿಸಿದ್ದಾರೆ.

ಈಗ ರಂಗಪ್ರವೇಶದ ತಯಾರಿಯನ್ನು ಗುರು ಚಂದ್ರಿಕಾ ರಾಘವೇಂದ್ರ ಅವರ ಬಳಿಯೇ ಕಲಿತು ನೃತ್ಯವನ್ನು ಇತ್ತೀಚೆಗೆ ಪ್ರದಶಿಸಿದ್ದಾರೆ.
ಪೋಷಕರ ಪ್ರೋತ್ಸಾಹ ಮತ್ತು ಗುರು ಚಂದ್ರಿಕಾ ರಾಘವೇಂದ್ರ ಅವರ ಸರಿಯಾದ ತರಬೇತಿ, ಮಾರ್ಗದರ್ಶನ ಇವಳ ನೃತ್ಯ ಕಲೆಗೆ ಸಹಕಾರಿಯಾಗಿದೆ.

ನೃತ್ಯಕಲೆ ಮನುಷ್ಯನ ವಾಸ್ತವಿಕತೆ ಮತ್ತು ಜೀವನದಲ್ಲಿ ನಡೆಯುವ ಕಷ್ಟಸುಖಗಳ ಸಮಾಗಮವನ್ನು ನೃತ್ಯದಲ್ಲಿ ತೋರಿಸುವ ಮಾರ್ಗ. ಅಂತ ಕಲೆಯನ್ನು ಚಂದ್ರಿಕಾ ರಾಘವೇಂದ್ರ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಶಿಷ್ಯರೆಲ್ಲರಿಗೂ ಧಾರೆಯೆರೆಯುತ್ತಿದ್ದರೆ. ಅಂಥ ಗುರುವಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು. ನೃತ್ಯವೇ ಇವರ ಜೀವನಾಡಿ ಎಂದರೆ ಸುಳ್ಳಲ್ಲ .
ಇನ್ನು ಶರ್ಮಿಳಾ ಅವರು ಇಸ್ಕಾನ್, ಅಪೋಲೋ, ಐಐಎಂ ನಲ್ಲಿ ಕೆಲಸ ಮಾಡಿದ್ದಾಳೆ. ಪ್ರಸ್ತುತ ವಾತ್ಸಲ್ಯ ಸೆಂಟರ್ ಫಾರ್ ಓರಲ್ ಹೆಲ್ತ್ ನಲ್ಲಿ ಹೆಡ್ ಆಪರೇನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications