ಪ್ರತಿಭಾವಂತೆ ಶರ್ಮಿಳಾ ಉಡುಪ ರಂಗ ಪ್ರವೇಶ ಯಶಸ್ವಿ
ಬೆಂಗಳೂರು, ಆಗಸ್ಟ್ 20: ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ ಶರ್ಮಿಳಾ ಅವರು ಇತ್ತೀಚೀಗೆ ರಂಗ ಪ್ರವೇಶ ಯಶಸ್ವಿಯಾಗಿದೆ. ವಿದ್ಯೆ, ಉದ್ಯೋಗದ ಜತೆಗೆ ಕಲೆಗೂ ಒತ್ತು ನೀಡಬೇಕು ಎಂಬ ದನಿಗೆ ಶರ್ಮಿಳಾ ಸಾಕ್ಷಿಯಾಗಿದ್ದಾರೆ.
ರಮೇಶ್ ಉಡುಪ ಮತ್ತು ಸುಜಾತ ರಮೇಶ್ ಇವರ ಪುತ್ರಿ ಶರ್ಮಿಳಾ ಉಡುಪ. ಇವಳ ವಿದ್ಯಾಭ್ಯಾಸ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಜಾಲಹಳ್ಳಿಯ ಕ್ಲೂನಿ ಕಾನ್ವೆಂಟ್ ನಲ್ಲಿ ಮಾಡಿದ್ದಾರೆ.

ಎಸ್ಎಸ್ಎಲ್ಸಿ ನಂತರ ತಾಯಿಯ ಬಲವಂತಕ್ಕೆ ಭರತನಾಟ್ಯ ಶಾಲೆಗೆ ಹೋಗಲಾರಂಭಿಸಿದ್ದಾರೆ. 2003 ರಿಂದ 2007ರವರೆಗೆ ವಿದುಷಿ "ಶುಭ ಧನಂಜಯ" ಇವರ ಬಳಿ ಅಭ್ಯಾಸ ಮಾಡಿ ಅಲ್ಲೇ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕೆಎಲ್ಇ ಕಾಲೇಜಿನಲ್ಲಿ 3 ವರ್ಷ ಪದವಿ ಪೂರ್ವ ಶಿಕ್ಷಣವನ್ನು, ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿ ನಂತರ ಎಂಬಿಎ ಸಹ ಮುಗಿಸಿದ್ದಾರೆ.
ವಿದುಷಿ ಚಂದ್ರಿಕಾ ರಾಘವೇಂದ್ರ ರವರು ನಡೆಸುತ್ತಿರುವ "ಭರತ ಕಲಾ ಯೋಗ ಸ್ಕೂಲ್ ಆಫ್ ಆರ್ಟ್ಸ್" ನಲ್ಲಿ ಅಭ್ಯಾಸ ಮಾಡಿ ಸೀನಿಯರ್ ಪರೀಕ್ಷೆ ಮುಗಿಸಿದ್ದಾರೆ.

ಈಗ ರಂಗಪ್ರವೇಶದ ತಯಾರಿಯನ್ನು ಗುರು ಚಂದ್ರಿಕಾ ರಾಘವೇಂದ್ರ ಅವರ ಬಳಿಯೇ ಕಲಿತು ನೃತ್ಯವನ್ನು ಇತ್ತೀಚೆಗೆ ಪ್ರದಶಿಸಿದ್ದಾರೆ.
ಪೋಷಕರ ಪ್ರೋತ್ಸಾಹ ಮತ್ತು ಗುರು ಚಂದ್ರಿಕಾ ರಾಘವೇಂದ್ರ ಅವರ ಸರಿಯಾದ ತರಬೇತಿ, ಮಾರ್ಗದರ್ಶನ ಇವಳ ನೃತ್ಯ ಕಲೆಗೆ ಸಹಕಾರಿಯಾಗಿದೆ.

ನೃತ್ಯಕಲೆ ಮನುಷ್ಯನ ವಾಸ್ತವಿಕತೆ ಮತ್ತು ಜೀವನದಲ್ಲಿ ನಡೆಯುವ ಕಷ್ಟಸುಖಗಳ ಸಮಾಗಮವನ್ನು ನೃತ್ಯದಲ್ಲಿ ತೋರಿಸುವ ಮಾರ್ಗ. ಅಂತ ಕಲೆಯನ್ನು ಚಂದ್ರಿಕಾ ರಾಘವೇಂದ್ರ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಶಿಷ್ಯರೆಲ್ಲರಿಗೂ ಧಾರೆಯೆರೆಯುತ್ತಿದ್ದರೆ. ಅಂಥ ಗುರುವಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು. ನೃತ್ಯವೇ ಇವರ ಜೀವನಾಡಿ ಎಂದರೆ ಸುಳ್ಳಲ್ಲ .
ಇನ್ನು ಶರ್ಮಿಳಾ ಅವರು ಇಸ್ಕಾನ್, ಅಪೋಲೋ, ಐಐಎಂ ನಲ್ಲಿ ಕೆಲಸ ಮಾಡಿದ್ದಾಳೆ. ಪ್ರಸ್ತುತ ವಾತ್ಸಲ್ಯ ಸೆಂಟರ್ ಫಾರ್ ಓರಲ್ ಹೆಲ್ತ್ ನಲ್ಲಿ ಹೆಡ್ ಆಪರೇನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications