ಬೆಂಗಳೂರಿನಲ್ಲಿ ಎಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಬೆಸ್ಟ್ ? Bengaluru Property
Bengaluru Property ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರು ನಗರ ಅಥವಾ ಬೆಂಗಳೂರು ಹೊರ ವಲಯದಲ್ಲಿ ಯಾವ ಭಾಗದಲ್ಲಿ ಭೂಮಿ ಖರೀದಿ ಮಾಡಬೇಕು ಮತ್ತು ಪ್ರಾಪರ್ಟಿ ಖರೀದಿ ಮಾಡಿದರೆ ಉತ್ತಮ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಬೆಂಗಳೂರಿನ ದಂಪತಿಯೊಬ್ಬರು ನಗರದ ಹೊರವಲಯದಲ್ಲಿ ಅಪಾರ್ಟ್ಮೆಂಟ್ ಹುಡುಕುವ ಬಗ್ಗೆ ಸೋಷಿಯಲ್ ಮೀಡಿಯಾ ರೆಡ್ಡಿಟ್ ಪೋಸ್ಟ್ ಮಾಡಿದ್ದು. ಇದು ಭಾರೀ ಸ್ವಾರಸ್ಯಕರ ಚರ್ಚೆಗೆ ವೇದಿಕೆ ಕಲ್ಪಿಸಿದೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಿನದಿಂದಕ್ಕೆ ಬೂಸ್ಟ್ ಆಗುತ್ತಿದೆ. ಆದರೆ ಭೂಮಿ ಮತ್ತು ಪ್ರಾಪರ್ಟಿ ಬೆಲೆಯು ಏಕಾಏಕಿ ₹1.5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಜನ ಬೆಂಗಳೂರಿನಿಂದ ಹೊರ ಭಾಗದಲ್ಲಿ ಹಾಗೂ ಬೆಂಗಳೂರಿನ ಹೊರ ವಲಯದಲ್ಲಿ ಭೂಮಿ, ಪ್ರಾಪರ್ಟಿ ಹುಡುಕುವುದಕ್ಕೆ ಮತ್ತು ಖರೀದಿ ಮಾಡುವುದಕ್ಕೆ ಮುಂದಾಗಿದ್ದಾರೆ. ನಗರ ಕೇಂದ್ರ ಪ್ರದೇಶಗಳಲ್ಲಿನ ಹಳೆಯ ಮನೆಗಳು ಹೊಸ ಉಪನಗರ ಯೋಜನೆಗಳಿಗಿಂತ ಉತ್ತಮ ದೀರ್ಘಕಾಲೀನ ಮೌಲ್ಯವನ್ನು ನೀಡಲಿದೆಯೇ ಎಂದು ಜನ ಚರ್ಚೆ ಮಾಡುತ್ತಿದ್ದಾರೆ.

ನನ್ನ ಪತಿ (36) ಮತ್ತು ನಾನು (32) ಬೆಂಗಳೂರಿನ ಮಹದೇವಪುರದಲ್ಲಿ ವಾಸಿಸುತ್ತಿದ್ದೇವೆ ಮತ್ತು ಕೆಲಸ ಮಾಡುತ್ತೇವೆ. ಐಟಿ ವಲಯದಲ್ಲಿ ಅಲ್ಲ. ಕೈಯಲ್ಲಿ ತಿಂಗಳಿಗೆ ಒಟ್ಟು 5 ಲಕ್ಷ ಆದಾಯ ಮತ್ತು ಮಾಸಿಕ ವೆಚ್ಚಗಳು ಸರಿಸುಮಾರು 1.5 ಲಕ್ಷ. ನಾವು ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಫ್ಲಾಟ್ ನಿರ್ಮಾಣ ಜಾಗಕ್ಕೆ ಭೇಟಿ ನೀಡಿದ್ದೇವೆ ಏಕೆಂದರೆ ಅದು ಹೊಸದು, ಕ್ಯಾಟ್ ಎ ಬಿಲ್ಡರ್ ಮತ್ತು ನಮ್ಮ ಬಜೆಟ್ನಲ್ಲಿ ಸ್ವಲ್ಪಮಟ್ಟಿಗೆ ಇದೆ ಎಂದು ಅನಿಸುತ್ತದೆ ಎಂದು ರೆಡಿಟರ್ನಲ್ಲಿ ದಂಪತಿ ಪೋಸ್ಟ್ ಮಾಡಿದ್ದಾರೆ.
ಮುಂದುವರಿದು ಈ ಭಾಗದಲ್ಲಿ ರಸ್ತೆಗಳು ತುಂಬಾ ಕೆಟ್ಟದಾಗಿವೆ. ಎಲ್ಲೆಡೆ ಗುಂಡಿಗಳಿವೆ, ರಸ್ತೆಗಳು, ಹೆದ್ದಾರಿ ಕೂಡ ಬದಿಗಳಲ್ಲಿ ಕಸದಿಂದ ತುಂಬಿದ್ದು, ದಾರಿಯಲ್ಲಿ ರೈಲ್ವೆ ಕ್ರಾಸಿಂಗ್ ಇತ್ತು. ಬೆಲೆಗೆ ತಕ್ಕ ಜಾಗವಾಗಿ ಏನು ಕಾಣಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಮಹದೇವಪುರದಲ್ಲಿ ವಾಸಿಸುತ್ತಿರುವ ಈ ದಂಪತಿಯು ಈ ಭಾಗದಲ್ಲಿ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಂದು ಯೋಜನೆಯೂ ಕೈಗೆಟುಕುವಂತಿಲ್ಲ ಅಥವಾ ಕಳಪೆ ಸಂಪರ್ಕ ಹೊಂದಿದೆ ಎಂದಿದ್ದಾರೆ. ತಮ್ಮ ಮನೆಯಿಂದ ಸುಮಾರು 17 ಕಿಮೀ ದೂರದಲ್ಲಿರುವ ಹೊಸಕೋಟೆಯಲ್ಲಿ ಹೊಸ ಯೋಜನೆಗೆ ಭೇಟಿ ನೀಡಿದ್ದು, ಮೂಲಸೌಕರ್ಯ ಹಾಗೂ ತುಂಬಾ ದೂರ ಎಂದಿದ್ದಾರೆ.
ಪ್ರತಿ ಚದರ ಅಡಿಗೆ ಸುಮಾರು ₹10,000 ಬೆಲೆಯ 1,200 ಚದರ ಅಡಿಯಲ್ಲಿ 2029 ರಲ್ಲಿ ಸ್ವಾಧೀನದಲ್ಲಿ ಸುಮಾರು ₹1.5-1.6 ಕೋಟಿ ವೆಚ್ಚವಾಗುತ್ತದೆ ಎಂದು ಲೆಕ್ಕಹಾಕಲಾಗುತ್ತದೆ. ಮುಂದಿನ 20 ವರ್ಷಗಳ ಕಾಲ EMI ಗಳಲ್ಲಿ ₹2 ಕೋಟಿಗಿಂತ ಹೆಚ್ಚಿನ ಫ್ಲಾಟ್ಗಳನ್ನು ಖರೀದಿಸುವ ಬಗ್ಗೆ ಹೇಳಲಾಗಿದೆ.
ಬೆಂಗಳೂರಿನಲ್ಲಿ ಆಸ್ತಿ ಖರೀದಿ ಸುಲಭವಲ್ಲ
ಇನ್ನು ಬೆಂಗಳೂರಿನಲ್ಲಿ ಆಸ್ತಿ ಮತ್ತು ಪ್ರಾಪರ್ಟಿ ಖರೀದಿ ಮಾಡುವುದು ಸುಲಭವಲ್ಲ. ಅದರಲ್ಲೂ ನಮ್ಮ ಬಜೆಟ್ನಲ್ಲಿ ಮನೆ, ಪ್ರಾಪರ್ಟಿ ಹುಡುಕುವುದು ಸುಲಭವಲ್ಲ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications