ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸಂಸ್ಥೆ ಅಂದ್ರೆ ನಮ್ಮ ಬೆಸ್ಕಾಂ!
ಒಂದೇ ಒಂದು ಹನಿ ಧರೆಗೆ ಮುತ್ತಿಕ್ಕುತ್ತಿದ್ದಂತೆಯೇ ಪವರ್ ಗೆ ಕತ್ತರಿ ಹಾಕುವ ಬೆಸ್ಕಾಂ ಅನ್ನು ಶಪಿಸಿಕೊಳ್ಳುವ ನೂರಾರು ಜನರ ನಡುವಲ್ಲೇ, ಆ ನೆಪದಲ್ಲಾದರೂ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ದೊರಕುತ್ತಲ್ಲ ಎಂದು ಹಿರಿಹಿಗ್ಗುವ ಜನರೂ ಇದ್ದಾರೆ.
ಬೆಂಗಳೂರು, ಮೇ 24: ಸಂಜೆಯಾಗುತ್ತಲೇ ಕವಿಯುವ ಕಾರ್ಮೋಡ, ಸುಯ್ಯಂತ ಬೀಸೋ ಗಾಳಿ, ಮನೆಸೇರಿಕೊಂಡರೆ ಸಾಕು ಅನ್ನಿಸುವಂಥ ವಿಲಕ್ಷಣ ವಾತಾವರಣ... ಲಗುಬಗೆಯಿಂದ ಮನೆಗೆ ಓಡಿ, ಬಿಸಿ-ಬಿಸಿ ಬಜ್ಜಿ-ಬೋಂಡಾ ತಿಂತಾ, ಟೀವಿ ನೋಡೋಣಂತ ಕೂತ್ರೆ, ಹೊರಗೆ ಬೀಳೋಕೆ ಶುರು ಮಳೆ ಹನಿ! ಆಗಷ್ಟೇ ಒಂದು ಹನಿ ಬಿತ್ತು ನೋಡಿ, ಥಟ್ಟಂತ ಹೋಗುತ್ತೆ ಕರೆಂಟು!
ಪವರ್ ಬ್ಯಾಕ್ ಅಪ್ ಇಲ್ಲದವರ ಮನೆಯಲ್ಲಿ ಆವತ್ತು ಕ್ಯಾಂಡಲ್ ಲೈಟ್ ಡಿನ್ನರ್ ಗ್ಯಾರಂಟಿ! ಪ್ರತಿದಿನ ಡೈನಿಂಗ್ ಟೇಬಲ್ ಹತ್ತಿರವೂ ಸುಳಿಯದೆ, ಟೀವಿ ಮುಂದೆ ಸೋಫಾದಲ್ಲಿ ಕೂತೋ, ರೂಮಿನಲ್ಲಿ ಕಂಪ್ಯೂಟರ್ ಮುಂದೇ ಕೂತೋ ಊಟ ಮಾಡುವವರು ಆವತ್ತು ಹಳೇ ಗಂಡನ ಪಾದವೇ ಗತಿ ಅಂತ ಡೈನಿಂಗ್ ಟೇಬಲ್ಲಿಗೆ ಬರಲೇಬೇಕು, ಕ್ಯಾಂಡಲ್ ಲೈಟ್ ಡಿನ್ನರ್ ಮಾಡಲೇಬೇಕು![ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆಗೆ ಬಿತ್ತು ಕತ್ತರಿ!]

ಮುನಿಸುಕೊಂಡ ಪತಿ-ಪತ್ನಿಯರನ್ನು ಒಂದುಗೂಡಿಸುವ ಈ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ಕಲ್ಪಿಸುವ ಬೆಸ್ಕಾಂ ಅನ್ನು ರೋಮ್ಯಾಂಟಿಕ್ ಸಂಸ್ಥೆ ಅನ್ನದೆ ಇರೋದಕ್ಕಾಗುತ್ತದೆಯೇ?! ವಿದ್ಯುತ್ ವ್ಯತ್ಯಯವೆಂಬ ಗಂಭೀರ ಸಮಸ್ಯೆಯ ನಡುವಲ್ಲೂ ಹಾಸ್ಯ ಪ್ರಜ್ಞೆ, ಸೌಂದರ್ಯ ಪ್ರಜ್ಞೆಯನ್ನು ಮೆರೆವ ಬೆಸ್ಕಾಂ ಗೆ ಹ್ಯಾಟ್ಸ್ ಆಫ್ ಹೇಳಲೇಬೇಕು!
ಮುಂಗಾರು ಆರಂಭವಾಗುತ್ತಿದ್ದಂತೆಯೇ ಉದ್ಯಾನ ನಗರಿಯಲ್ಲೂ ಶುರುವಾಗುತ್ತೆ ವಿದ್ಯುತ್ ಸಮಸ್ಯೆ. ಆದರೆ ದುಬಾರಿ ಹೊಟೇಲ್ ಗಳಲ್ಲಿ ಸಾವಿರಾರು ರೂಪಾಯಿ ತೆತ್ತು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೋಗುವ ಕಷ್ಟ ಮಳೆಗಾಲದಲ್ಲಂತೂ ಬೆಂಗಳೂರಿಗರಿಗಿಲ್ಲ. ಯಾಕಂದ್ರೆ ಆ ಭಾಗ್ಯ ಮನೆಯಲ್ಲೇ ಸಿಕ್ಕುತ್ತೆ!
ಹಳ್ಳಿಗಳಂತೆ ವಾರಗಟ್ಟಲೆ ಪವರ್ ಇಲ್ಲದೆ ಪರಿತಪಿಸುವ ಸನ್ನಿವೇಶ ಇಲ್ಲಿ ಸೃಷ್ಟಿಯಾಗದಿದ್ದರೂ, ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದೋ, ಇನ್ನೇನೋ ಸಮಸ್ಯೆಯಾಗಿಯೋ ಪವರ್ ಇಲ್ಲವೆಂದರೆ ಮನೆಯ ಡೈನಿಂಗ್ ಟೇಬಲ್ ಮೇಲೆ ಉರಿವ ಮಿಣುಕು ಮೊಂಬತ್ತಿಯ ಬೆಳಕಲ್ಲೇ ನೂರಾರು ರೋಮ್ಯಾಂಟಿಕ್ ಸನ್ನಿವೇಶಗಳು ನಿರ್ಮಾಣವಾಗುತ್ತದೆ.

ಆಗಲೋ, ಈಗಲೋ ಮುಗಿದುಹೋಗುವಂತಿರುವ ಮೊಬೈಲ್ ನ ಬ್ಯಾಟರಿಯ ಕ್ಷೀಣಸ್ವರವೂ, 'ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...' ಹಾಡನ್ನು ಗುನುಗುತ್ತಿರುತ್ತದೆ.[ಬೆಂಗಳೂರಲ್ಲಿ ಭಾರೀ ಗಾಳಿ ಸಹಿತ ಮಳೆ, ವಿದ್ಯುತ್ ವ್ಯತ್ಯಯ]
ಒಂದೇ ಒಂದು ಹನಿ ಧರೆಗೆ ಮುತ್ತಿಕ್ಕುತ್ತಿದ್ದಂತೆಯೇ ಪವರ್ ಗೆ ಕತ್ತರಿ ಹಾಕುವ ಬೆಸ್ಕಾಂ ಅನ್ನು ಶಪಿಸಿಕೊಳ್ಳುವ ನೂರಾರು ಜನರ ನಡುವಲ್ಲೇ, ಆ ನೆಪದಲ್ಲಾದರೂ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ದೊರಕುತ್ತಲ್ಲ ಎಂದು ಹಿರಿಹಿಗ್ಗುವ ಜನರೂ ಇದ್ದಾರೆ. ಅಂಥವರೆಲ್ಲರ ಪಾಲಿಗೆ ನಮ್ಮ ಬೆಸ್ಕಾಂ ನಿಜಕ್ಕೂ ರೊಮ್ಯಾಂಟಿಕ್ ಸಂಸ್ಥೆಯೇ!
-
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications