Benglauru Highway Toll: ಹೆದ್ದಾರಿ ಟೋಲ್ನಲ್ಲಿ ವ್ಯಕ್ತಿಯನ್ನು 50 ಮೀ. ಎಳೆದೊಯ್ದ ಕಾರು: Road Rage Viral
ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನಲ್ಲಿನ ಹಾಡಹಗಲೇ ರೋಡ್ ರೇಜ್ ಘಟನೆ ನಡೆದಿದೆ. ಟೋಲ್ ಪ್ಲಾಜಾದಲ್ಲಿ ಈ ಘಟನೆ ನೋಡಿದ ಅಕ್ಕಪಕ್ಕದವರು ಅರೆಕ್ಷಣ ಭಯಭೀತರಾದ ದೃಶ್ಯ ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ನೋಡ ನೋಡುತ್ತಿದ್ದಂತೆ ಕಾರೊಂದು ವ್ಯಕ್ತಿಯೊಬ್ಬನನ್ನು 50 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಘಟನೆ ಹಿಂದೆ ನಡೆದದ್ದು ಏನು ಎಂಬ ಮಾಹಿತಿ ಇಲ್ಲಿದೆ.
ನೆಲಮಂಗಲ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಎಂದಿನಂತೆ ವಾಹನಗಳು ಸಾಲುಗಟ್ಟಿ ಬರತೊಡಗಿದ್ದವು. ಆದರೆ ಒಂದು ಕಾರು ಮಾತ್ರ ಟೋಲ್ ಕಟ್ಟುವ ಸ್ಥಳಲ್ಲಿ ನಿಂತಿತ್ತು. ಟೋಲ್ ಗೇಟ್ ಓಪನ್ ಆಗುತ್ತಿದ್ದಂತೆ ಕಾರಿನ ಪಕ್ಕ ವಾಗ್ವಾದ ಮಾಡುತ್ತ ನಿಂತಿದ್ದ ವ್ಯಕ್ತಿಯನ್ನು ಕಾರು ಸುಮಾರುಮಾರು 50 ಮೀಟರ್ಗಳಷ್ಟು ಎಳೆದೊಯ್ದಿದೆ. ಇದು ನೆಲಮಂಗಲ ಹೆದ್ದಾರಿಯ ಯೆಂಟಗನಹಳ್ಳಿ ಬಳಿಯ ಲ್ಯಾಂಕೊ ದೇವನಹಳ್ಳಿ ಟೋಲ್ನಲ್ಲಿ ನಡೆದಿದೆ.

ಓವರ್ ಟೇಕಿಂಗ್ ಕುರಿತು ನಡೆದ ವಾಗ್ವಾದವೇ ಘರ್ಷಣೆಗೆ ಕಾರಣವಾಯ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಅಮಾನವೀಯ ಘಟನೆಗೆ ಖಂಡನೆಯು ವ್ಯಕ್ತವಾಗುತ್ತಿದೆ.
ಟೋಲ್ ಪ್ಲಾಜಾದಲ್ಲಿ ಸಾಲು ಗಟ್ಟಿ ನಿಲ್ಲುವ ಮೊದಲು ಓವರ್ಟೇಕಿಂಗ್ ವಿಚಾರವಾಗಿ ಕಾರಿನ ಮಾಲೀಕ ಹಾಗೂ ಮತ್ತೊಂದು ವಾಹನದ ವ್ಯಕ್ತಿಯ ಜೊತೆಗೆ ಜಗಳ ಶುರುವಾಗಿದೆ. ವಾಹನಗಳು ಟೋಲ್ ಬೂತ್ ಸಮೀಪಿಸುತ್ತಿದ್ದಂತೆ, ಲೈನ್ ಪ್ರಕಾರ ಬರಬೇಕು. ಈ ವೇಳೆ ಕಾರು ಓವರ್ ಟೆಕ್ ಮಾಡಿದ್ದಕ್ಕೆ ಮತ್ತೊಂದು ವಾಹನದ ವ್ಯಕ್ತಿ ಚಕಾರವೆತ್ತಿದ್ದಾರೆ.
ಎಳೆದೊಯ್ದ ಕಾರಿನ ಚಾಲಕನ ಶರ್ಟ್ ಹಿಡಿದು ವ್ಯಕ್ತಿ ಜಗಳ ಆಡುತ್ತಿದ್ದ. ವಾಗ್ವಾದ ನಡೆದಿತ್ತು. ಇದೆಲ್ಲವು ಟೋಲ್ ಹತ್ತಿರ ಬಂದು ವಾಹನ ನಿಧಾನವಾಗುತ್ತಿದ್ದಂತೆ ನಡೆದಿದೆ. ಬಳಿಕ ಟೋಲ್ ಬ್ಯಾರಿಕೇಡ್ ಮೇಲಕ್ಕೆ ಎತ್ತಿದಾಗ, ಕಾರಲಿಲ್ಲ ಚಾಲಕ ಕಾರನ್ನು ಓಡಿಸಿದ್ದಾರೆ. ಚಾಲಕ ಕಾಲರ್ ಹಿಡಿದ್ದ ವ್ಯಕ್ತಿಯು ಆ ಕಾರಿನ ಜೊತೆಗೆ ಸುಮಾರು 50 ಮೀಟರ್ಗಳಷ್ಟು ದೂರು ಹೋಗಿ ಬಿದ್ದಿದ್ದಾನೆ. ಬಳಿಕ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾರೆ.
ಅಮಾನವೀಯ ಘಟನೆ: ಪ್ರಕರಣ ದಾಖಲು
ಇದೆಲ್ಲ ಆಘಾತಕಾರಿ ಪ್ರಸಂಗಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ಸದ್ಯ ಸಂಚಾರಿ ಪೊಲೀಸರು, ಅಧಿಕಾರಿಗಳು ಮಾಹಿತಿ, ಸಾಕ್ಷಿ ಕಲೆ ಹಾಕುತ್ತಿದ್ದಾರೆ. ಕಾರಿನಿಂದ ಎಳೆದೊಯ್ದು ರಸ್ತೆ ಬಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿಲ್ಲ. ಇಂತಹ ಘಟನೆ ಅಮಾನವೀಯ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಕರಣವನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ಈ ರೋಡ್ ರೇಜ್ ಘಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ. ಆರ್ಟಿಒ ಜೊತೆಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಟೋಲ್ ಪ್ಲಾಜಾ ಸಿಬ್ಬಂದಿ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
-
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ












Click it and Unblock the Notifications