ಬೆಂಗಳೂರು: ಶೂ ನೆಕ್ಕಿಸಿಕೊಂಡು ಈಶಾನ್ಯ ರಾಜ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಬೆಂಗಳೂರು, ಮಾರ್ಚ್. 13 : ಇಲ್ಲಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರುಣಾಚಲ ಪ್ರದೇಶದ ವಿದ್ಯಾರ್ಥಿ ಮೇಲೆ ಮನೆ ಮಾಲೀಕರನೊಬ್ಬ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಈ ಘಟನೆ ಮಾರ್ಚ್ 6ರಂದು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೆಚ್ಚುವರಿ ನೀರು ಪೋಲು ಮಾಡುತ್ತಿದ್ದರೆಂಬ ಕಾರಣಕ್ಕೆ ಅರುಣಾಚಲ ಪ್ರದೇಶದ ಹಿಂಗಿಯೋ ಘಂಟೆ ಎನ್ನುವ ವಿದ್ಯಾರ್ಥಿ ಮೇಲೆ ಹೇಮಂತ್ ಕುಮಾರ್ ಎನ್ನುವ ಮನೆ ಮಾಲೀಕ ಹಲ್ಲೆ ಮಾಡಿದ್ದಾನೆ.

ಹಾಗೂ ಮನೆಗೆ ಬಂದಿದ್ದ ಘಂಟೆ ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರಿಂದ ಬಲವಂತವಾಗಿ ಶೂ ನೆಕ್ಕಿಸಿಕೊಂಡಿದ್ದಾನೆಂದು ಹಲ್ಲೆಗೊಳಗಾದ ಹಿಂಗಿಯೋ ಘಂಟೆ ಆರೋಪಿಸಿ ಜನಾಂಗೀಯ ನಿಂದನೆ ದೂರು ದಾಖಲಿಸಿದ್ದಾನೆ.
Bengaluru: Student from Arunachal Pradesh allegedly beaten & forced to lick house owner's shoes on March 6 for using excessive water.
— ANI (@ANI_news) March 13, 2017












Click it and Unblock the Notifications