ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿಗರು ತತ್ತರ
Recommended Video
ಬೆಂಗಳೂರು, ಅಕ್ಟೋಬರ್ 05 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಧ್ಯಾಹ್ನವೇ ಆರಂಭವಾದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಹನ ಸವಾರರು ಪರದಾಡುತ್ತಿದ್ದಾರೆ.
ಚಿತ್ರಗಳು : ಗುರುವಾರ ಮಧ್ಯಾಹ್ನದ ಮಳೆಗೆ ಮುಳುಗಿದ ಬೆಂಗಳೂರು
ಬುಧವಾರ ರಾತ್ರಿ 8 ಗಂಟೆ ಬಳಿಕ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಗಿದ್ದು, ಧಾರಾಕಾರವಾಗಿ ಸುರಿಯುತ್ತಿದೆ. ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿವೆ.
ಮೆಜೆಸ್ಟಿಕ್, ಮಲ್ಲೇಶ್ವರಂ, ಆನೇಕಲ್, ಬೊಮ್ಮನಹಳ್ಳಿ, ಯಶವಂತಪುರ, ರಾಜಾಜಿನಗರ, ಬಿನ್ನಿಮಿಲ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಜೆ.ಪಿ.ನಗರ, ಚಂದಾಪುರ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಮೈಸೂರಿನ ಪಿರಿಯಾಪಟ್ಟಣದಲ್ಲಿ 6 ಜನರ ಬಲಿ ಪಡೆದ ಭೀಕರ ಸಿಡಿಲು
ಮಳೆಯ ನೀರು ರಸ್ತೆಗಳಲ್ಲಿ ತುಂಬಿಕೊಂಡಿದ್ದು, ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಬಿನ್ನಿಮಿಲ್ ಸಮೀಪ ಮನೆಗಳಿಗೆ ನೀರು ನುಗ್ಗಿದೆ.
@blrcitytraffic @AddlCPTraffic @DCPTrEastBCP @AcpSe It has started raining very heavily Koramangala, please drive/ride carefully. pic.twitter.com/z4UZXP4Nf7
— Adugodi Traffic PS (@adugoditraffic1) October 5, 2017
ಬುಧವಾರ ಬೆಂಗಳೂರು ನಗರದಲ್ಲಿ 18.6 ಮಿ.ಮೀ. ಮಳೆಯಾಗಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆ ತಡರಾತ್ರಿ ತನಕ ಸುರಿದಿತ್ತು. ಗುರುವಾರ ಮಧ್ಯಾಹ್ನವೇ ಧಾರಾಕಾರ ಮಳೆ ಆರಂಭವಾಗಿದೆ. ಇನ್ನೂ ಎರಡು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
*
ಎಚ್ಎಸ್ಆರ್
ಲೇಔಟ್ನಲ್ಲಿ
ರಸ್ತೆಗಳು
ಜಲಾವೃತವಾಗಿದ್ದು,
ವಾಹನ
ಸವಾರರು
ಪರದಾಡುತ್ತಿದ್ದಾರೆ
*
ಕೆ.ಆರ್.ಸರ್ಕಲ್
ಬಳಿ
ರಸ್ತೆಯಲ್ಲಿ
ನೀರು
ತುಂಬಿಕೊಂಡು
ವಾಹನ
ಸಂಚಾರ
ನಿಧಾನಗತಿಯಲ್ಲಿ
ಸಾಗಿದೆ
*
ವಿಧಾನಸೌಧದಲ್ಲಿ
ಆಯೋಜಿಸಿದ್ದ
ವಾಲ್ಮೀಕಿ
ಜಯಂತಿ
ಕಾರ್ಯಕ್ರಮಕ್ಕೆ
ಮಳೆ
ಅಡ್ಡಿ
ಮಾಡಿದೆ
*
ಮುಖ್ಯಮಂತ್ರಿ
ಸಿದ್ದರಾಮಯ್ಯ
ತರಾತುರಿಯಲ್ಲಿ
ಭಾಷಣ
ಮುಗಿಸಿದ್ದು,
ಕಾರ್ಯಕ್ರಮ
ಮುಕ್ತಾಯಗೊಂಡಿದೆ
*
ನಾಯಂಡಹಳ್ಳಿಯಲ್ಲಿ
ಭಾರೀ
ಮಳೆಯಿಂದಾಗಿ
ಮನೆಯ
ಗೋಡೆ
ಕುಸಿದುಬಿದ್ದಿದೆ
*
ಕ್ವೀನ್ಸ್
ಸರ್ಕಲ್
ಬಳಿ
ಒಂದು
ಬದಿಯ
ರಸ್ತೆ
ಮಳೆ
ನೀರಿನಿಂದ
ಜಲಾವೃತವಾಗಿದೆ