Bengaluru Road Rage: ಕಾರಿಗೆ ಗುದ್ದಿ ಮಾಲೀಕರಿಗೆ ನಿಂದಿಸಿದ ಆಟೋ ಚಾಲಕ, ಆಗಿದ್ದೇನು ವಿಡಿಯೋ ನೋಡಿ
ಬೆಂಗಳೂರು, ಡಿಸೆಂಬರ್ 09: ಬೆಂಗಳೂರಿನಲ್ಲಿ ಆಗಾಗ್ಗೆ ಈ ರೋಡ್ ರೇಜ್ನಂತಹ ಘಟನೆಗಳು ನಡೆಯುತ್ತಲೆ ಇವೆ. ಸಂಚಾರ ನಿಯಮ ಅದೆಷ್ಟೆ ಕಟ್ಟುಟ್ಟಾಗಿ ಜಾರಿಗೆ ತಂದರು ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಪ್ರಕರಣಗಳು ವರದಿ ಆಗುತ್ತಿದೆ. ಬೆಂಗಳೂರಿನ ನಾಯಂಡಹಳ್ಳಿ ಓಆರ್ಆರ್ ರಸ್ತೆಯಲ್ಲಿ ಕಳೆದ ಶನಿವಾರ ಮತ್ತೊಂದು ಘಟನೆ ನಡೆದಿದೆ. ಆಟೋ ರಿಕ್ಷಾ ಚಾಲಕ ಕಾರಿಗೆ ಗುದ್ದಿದ್ದಲ್ಲದೇ ನಿಂದಿಸಿದ ವಿಡಿಯೋ 'ಕರ್ನಾಟಕ ಪೋರ್ಟ್ಫೊಲಿಯೋ' ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಕುಟುಂಬಸ್ಥರು ಇರುವ ಕಾರು, ಬೈಕ್ಗಳ ಮೇಲೆಯೇ ಇಂತಹ ಘಟನೆಗಳು ನಡೆಯುತ್ತಿವೆ. ಬಾಯಿ ಮಾತಿನಲ್ಲಿ ಮುಗಿಯುವ ಚಿಕ್ಕ ಪುಟ್ಟ ಘಟನೆಗಳು ವಾಹನ ಅಡ್ಡಗಟ್ಟಿ ಹಲ್ಲೆಯ ಮಟ್ಟಕ್ಕೆ ಹೋಗಿತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಈ ನಾಯಂಡಹಳ್ಳಿಯ 4ನೇ ಮುಖ್ಯರಸ್ತೆಯಲ್ಲಿ ನಡೆದ ಘಟನೆಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಸುರಕ್ಷತೆ ಕೊರತೆಯನ್ನು ಇದು ಎತ್ತಿ ತೋರಿಸುವಂತಿದೆ. ಇಂತಹ ಘಟನೆಗಳಿಂದ ಜನರು ಆತಂಕಗೊಂಡಿದ್ದಾರೆ.
Another Road Rage Incident Reported in Bengaluru
— Karnataka Portfolio (@karnatakaportf) December 8, 2024
A distressing road rage incident took place on Bengaluru’s 4th Main Road in Nayandahalli, leaving citizens concerned about the growing lack of safety on the city's streets. The incident involved an auto-rickshaw with registration… pic.twitter.com/xfsB1MuB1y
KA01AD**** ನೋಂದಣಿ ಸಂಖ್ಯೆಯ ಆಟೋ-ರಿಕ್ಷಾ ಚಾಲಕ ಕಾರಿನ ಎಡಬದಿಯ ಕಾರಿನ ಮಿರ್ಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದ್ದು ಕಾಣಿಸುತ್ತದೆ. ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಬೈಯುತ್ತಲೇ ಕಾರಿನ ಎಡಬದಿಗೆ ಬಂದು ಕೊಳಕು ಭಾಷೆಯಲ್ಲಿ ನಿಂದಿಸಿದ್ದಾನೆ. ಜವಾಬ್ದಾರಿಯುತಿವಾಗಿ ಕಾಯು ಓಡಿಸುವಂತೆ ತಿಳಿ ಹೇಳಿದ್ದರೆ ಮುಗಿಯುವ ಈ ಘರ್ಷನೆಯನ್ನು ಮತ್ತೊಂದು ಹಂತಕ್ಕೆ ಆತ ಕೊಂಡ್ಯೊಯ್ದಿದ್ದಾನೆ ಎಂದು ತಿಳಿದು ಬಂದಿದೆ.
ಭಯಭೀತರಾದ ಕಾರಿನಲ್ಲಿದ್ದ ಕುಟುಂಬ
ಕಾರಿನಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆಟೋ ಚಾಲಕನ ವರ್ತನೆಗೆ ಅವರು ಭಯಭೀತರಾದರು. ಭದ್ರತೆಯ ಕೊರತೆ, ಬಹಿರಂಗ ನಿಂದನೆಗಳನ್ನು ಕಾರು ಮಾಲೀಕ, ಕುಟುಂಬಸ್ಥರು ಎದುರಿಸಿದ್ದಾರೆ. ಜನನಿಬಿಡ ರಸ್ತೆಗಳಲ್ಲಿಯೇ ಇಂತಹ ಘಟನೆ ನಡೆದಿದೆ. ಕಾರು, ಆಟೋ ಅಕ್ಕಪಕ್ಕ ವಾಹನಗಳು ಸಂಚರಿಸುತ್ತಿದ್ದ ಆಟೋ ಚಾಲಕನ ವರ್ತನೆ ಖಂಡನೀಯವಾಗಿದೆ.
ಕಳೆ ಶನಿವಾರ ಡಿಸೆಂಬರ್ 7ರಂದು ಘಟನೆ ನಡೆದಿದ್ದು, ಟ್ರಾಫಿಕ್ ನಿಯಮ, ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ಅರಿವು, ಕಠಿಣ ಕ್ರಮ ಜಾರಿಗೆ ತರುವ ಅಗತ್ಯವನ್ನು ಇದು ಒತ್ತಿ ಹೇಳುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ. ಈ ಹಿಂದಿನಿಂದಲೂ ನಗರದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ರಾತ್ರಿ, ಬೆಳಗಿನ ಜಾವ ನಡೆಯುತ್ತಿವೆ.
ರೋಡ್ ರೇಜ್ ನಡೆಯದಂತೆ ಕ್ರಮ ವಹಿಸಿ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳಿಗೆ ಶಾಸ್ವತ ಕಾನೂನು ತರಬೇಕು. ನಾಗರಿಕರ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ತಪ್ಪು ಮಾಡಿದವರಿಗೆ ನೀಡುವ ಶಿಕ್ಷ ಇತರರನ್ನು ಇಂತಹ ಕೃತ್ಯ ಮಾಡಲು ಭಯ ಹುಟ್ಟಿಸುವಂತಿರಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಸದರಿ ಪ್ರಕರಣದಲ್ಲಿ ಆಟೋ ಚಾಲಕನ ವರ್ತನೆಯನ್ನು ಅವರು ಖಂಡಿಸಿದ್ದಾರೆ.
ಅಜಾಗರೂಕ ಚಾಲನೆ, ಪಾದಾಚಾರಿ ಮಾರ್ಗದ ಮೇಲೆ ವಾಹನ ಸಂಚಾರ, ಇತರ ವಾಹನ ಸವಾರರಿಗೆ ಬೆದರಿಕೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ವಿರುದ್ಧು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
ಸ್ವಾವಲಂಬಿ ಬದುಕಿಗೆ ರಾಮಲಿಂಗಾ ರೆಡ್ಡಿ ಸಾಥ್: ಮಂಗಳಮುಖಿಯರು ಮತ್ತು ಮಹಿಳೆಯರಿಗೆ 20 EV ಆಟೋ ಭಾಗ್ಯ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications