ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ
ಬೆಂಗಳೂರು, ಅಕ್ಟೋಬರ್. 11: ಬೆಂಗಳೂರು ಮಹಾನಗರದ ಪ್ರಮುಖ ರಸ್ತೆಗಳಲ್ಲಿ ಒಂದೆಲ್ಲಾ ಒಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೆ ಸಂಬಂಧಿಸಿದ ಆಡಳಿತ ಕೊಂಚ ಚಿಂತನೆ ನಡೆಸಿ ಕಾಮಗಾರಿ ಕೈಗೆತ್ತಿಕೊಂಡರೆ ಉತ್ತಮ ಇಲ್ಲವಾದರೆ ನಾಗರಿಕರು ಸಮಸ್ಯೆಯ ಸುಳಿಗೆ ಸಿಗಬೇಕಾಗುತ್ತದೆ.
ಈಗ ನಾವು ಹೇಳಹೊರಟಿರುವುದು ನಗರದ ಪ್ರಮುಖ ರಸ್ತೆ ರೆಸಿಡೆನ್ಸಿ ರೋಡ್ ಬಗ್ಗೆ. ವಾಹನ ಸವಾರರಿಗೆ ಗುಂಡಿಗಳು ಎದುರಾಗುವುದು ಸರ್ವೇ ಸಾಮಾನ್ಯ, ಆದರೆ ಇಲ್ಲಿ ಪಾದಚಾರಿಗಳು ಯಮಯಾತನೆ ಅನುಭವಿಸುವಂತಾಗಿದೆ.[ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]
ರೆಸಿಡೆನ್ಸಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಫುಟ್ ಪಾತ್ ಕಾಮಗಾರಿ ಆರಂಭಮಾಡಿ ತಿಂಗಳುಗಳೇ ಕಳೆದಿವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಯಲ್ಲಿ ಪಾದಚಾರಿಗಳು ಎಲ್ಲಿ ನಡೆದುಕೊಂಡು ಹೋಗಬೇಕು ಎಂಬುದನ್ನು ಬಿಬಿಎಂಪಿಯೇ ಹೇಳಬೇಕು. ಎರಡೂ ಕಡೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಒಂದೆಡೆ ಖಾಸಗಿ ಶಾಲೆಯೊಂದಕ್ಕೆ ಸೇರಿದ ವಾಹನಗಳ ಸಾಲೇ ಇರುತ್ತದೆ. ಬೆಂಗಳೂರು ಕ್ಲಬ್ ಎದುರು ಬಸ್ ನಿಲುಗಡೆಯೂ ಇದೆ. ಪಾದಚಾರಿಗಳು ಪಡುತ್ತಿರುವ ಸಂಕಷ್ಟ ಕಣ್ಣಾರೆ ನೋಡಿಕೊಂಡು ಬನ್ನಿ...

ವಾಹನಗಳ ಮಧ್ಯೆ ಸಾಗಬೇಕು
ಒಬ್ಬ ಪಾದಚಾರಿಯಾಗಿ ನೀವು ಏನಾದರೂ ಇಲ್ಲಿ ಸಾಗಬೇಕು ಎಂದರೆ ವಾಹನಗಳನ್ನು ದಾಟಿಕೊಳ್ಳುತ್ತ, ಜಿಗಿಯುತ್ತ ಸಾಗಬೇಕು. ಸಿಗ್ನಲ್ ಬಿಟ್ಟ ವೇಳೆ ಮಧ್ಯ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡರೆ ಕತೆ ಮುಗಿದಂತೆಯೇ, ಪಾದಚಾರಿಗಳ ಈ ಪಡಿಪಾಟಿಲನ್ನು ಬಿಬಿಎಂಪಿ ಯಾವಾಗ ಅರಿತುಕೊಳ್ಳುವುದೋ?

ಮೇಯರ್ ಗಮನಕ್ಕೂ ತರಲಾಗಿದೆ
ಸಮಸ್ಯೆಯನ್ನು ನೂತನ ಮೇಯರ್ ಮಂಜುನಾಥ ರೆಡ್ಡಿ ಅವರ ಗಮನಕ್ಕೂ ತರಲಾಗಿದೆ, ಆದರೆ ಪರಿಹಾರ ಮಾತ್ರ ಶೂನ್ಯ. ಇದರ ಪರಿಣಾಮ ಶಾಂತಿನಗರ ಕಡೆಯಿಂದ ಎಂಜಿ ರೋಡ್ ಕಡೆ ಸಂಚರಿಸಬೇಕು ಎಂದರೆ ರಿಚ್ ಮಂಡ್ ಪ್ಲೈ ಓವರ್ ನಲ್ಲಿ ಮುಕ್ಕಾಲು ಗಂಟೆ ಕಾಯಬೇಕಾದ್ದು ಅನಿವಾರ್ಯ.

ಖಾಸಗಿ ಶಾಲೆವಾಹನ ರಸ್ತೆಯಲ್ಲಿ
ಖಾಸಗಿ ಶಾಲೆಗೆ ಸೇರಿದ ಬಸ್, ಟಿಟಿಗಳ ಸಾಲು ರಸ್ತೆಯ ಒಂದು ಭಾಗವನ್ನು ಆಕ್ರಮಿಸಿರುತ್ತದೆ. ಇತ್ತ ಕಾಮಗಾರಿಗೆಂದು ಹೊಂಡ ತೆಗೆಯಲಾಗಿದ್ದು ಬ್ಯಾರಿಕೇಡ್ ಅಳವಡಿಸಲಾಗಿದೆ.

ಮುಂದಾಲೋಚನೆ ಇರಲಿ
ಫುಟ್ ಪಾತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಉತ್ತಮ ಕೆಲಸವೇ. ಆದರೆ ನಾಗರಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡುವ ಚಿಂತನೆ ನಡೆಸಬೇಕು. ಎರಡೂ ಇಕ್ಕೆಲಗಳ ಕಾಮಗಾರಿ ಒಮ್ಮೆಲೆ ಕೈ ಗೆತ್ತಿಕೊಳ್ಳುವ ಬದಲು ಒಂದು ಬದಿಯಲ್ಲಿ ಕೆಲಸ ಆರಂಭಿಸಿ ಮತ್ತೊಂದು ಬದಿಯನ್ನು ಪಾದಚಾರಿಗಳಿಗೆ ಮೀಸಲಿಟ್ಟಿದ್ದರೆ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ.

ಸ್ಕೈ ವಾಕ್ ಗೆ ತೆರಳಲು ದಾರಿಯಿಲ್ಲ
ಒಂದು ವೇಳೆ ರಸ್ತೆ ದಾಟಬೇಕು ಎಂದು ಸ್ಕೈ ವಾಕ್ ಏರಲು ದಾರಿಯಿಲ್ಲ. ಏರುವ ಜಾಗದ ಸುತ್ತ ಮುತ್ತ ಮಣ್ಣು ಹಾಕಲಾಗಿದೆ. ಟೆಂಡರ್ ಶೂರ್ ಕಾಮಗಾರಿಗೆ ಜನ ಹಿಡಿಶಾಪ ಹಾಕುತ್ತಲೇ ತೆರಳಬೇಕಾಗಿದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications