ದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆ
ಬೆಂಗಳೂರು, ಡಿಸೆಂಬರ್ 12 : ಬೆಂಗಳೂರು ನಗರ ಭಾರತದ ಅತೀ ಮಾಲಿನ್ಯಕ್ಕೀಡಾದ ನಗರಗಳ ಪಟ್ಟಿಯಲ್ಲಿ ಸದ್ಯಕ್ಕಂತೂ ಇಲ್ಲ. ಆದರೆ ಸದ್ಯ ಉಂಟಾಗುತ್ತಿರುವ ಮಾಲಿನ್ಯವನ್ನು ಗಮನಿಸಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲೇ ದೇಶದಲ್ಲೇ ಅತಿ ಹೆಚ್ಚು ಮಾಲಿನ್ಯಕ್ಕೀಡಾಗುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಂತೂ ಖಚಿತ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರು ನಗರ ಶೇ. 57 ರಷ್ಟು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳವನ್ನು ಸಾಧಿಸಿದೆ.
2010 ರಿಂದ 2014 ರ ಅವಧಿಯಲ್ಲಿ 10 ಪಿಎಂ ನಷ್ಟು ಹೆಚ್ಚಳ ಕಂಡುಬಂದಿದೆ. ಪಿಎಂ ಎಂದರೆ ಪಾರ್ಟಿಕಲ್ಸ್ ಮೆಜರಿಂಗ್ 2.5 ರಿಂದ 10 ರಷ್ಟು ಎಂದರ್ಥ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ ಅತ್ಯಂತ ಮಾಲಿನ್ಯ ಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದು, ನಂತರದ ಸ್ಥಾನದಲ್ಲಿ ಕೆ.ಆರ್. ರಸ್ತೆ ಹಾಗೂ ಮಣಿಪಾಲ್ ಆಸ್ಪತ್ರೆ ಪ್ರದೇಶವನ್ನು ದಾಖಲಿಸಲಾಗಿದೆ.

ಮೆಟ್ರೋ ಮಾರ್ಗದ ಕೆಳಗೆ ಕಸಕ್ಕೆಬೆಂಕಿ
ಜಯನಗರದ ಮೆಟ್ರೋ ಮಾರ್ಗದ ಬುಡದಲ್ಲೇ ರಸ್ತೆ ಕಸದ ರಾಶಿಗೆ ಬೆಂಕಿ ಹಚ್ಚಿರುವ ದೃಶ್ಯವನ್ನು ನೀವು ನೋಡಬಹುದು. ನಗರದ ಹೊರ ವಲಯ ಅಥವಾ ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ತ್ಯಾಜ್ಯವನ್ನು ಕೊಂಡೊಯ್ಯುವ ಬದಲು ರಸ್ತೆಯ ಪಕ್ಕದಲ್ಲೇ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿದ್ದಾರೆ.
ದೇಶದ ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ ಇದೆಯಾದರೂ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿರುವ ನಿಯಮದ ಪ್ರಕಾರ ಬೆಂಗಳೂರು ನಗರವು ಕೂಡ ವಾಸಕ್ಕೆ ಯೋಗ್ಯವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಚಿಂತೆಗೀಡು ಮಾಡಿರುವ ಸಂಗತಿಯೆಂದರೆ ಕನಿಷ್ಟ ಪಕ್ಷ ಬೆಂಗಳೂರಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ನಗರದ ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಯಾವುದೇ ಪ್ರಯತ್ನವನ್ನು ನಡೆಸಿಲ್ಲ.

ಆಟೋರಿಕ್ಷಾದಿಂದ ಮಾಲಿನ್ಯ
ಬೆಂಗಳೂರಿನಲ್ಲಿ ಹಳೆಯ ಆಟೋ ರಿಕ್ಷಾಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಟೆಂಪೋ ಹಾಗೂ ಆಟೋಗಳು ಉಗುಳುವ ವಿಷಕಾರಕ ಹೊಗೆಯಿಂದ ಟ್ರಾಫಿಕ್ ಪೊಲೀಸರು ಸೇರಿದಂತೆ ಜನ ಸಾಮಾನ್ಯರು ಆರೋಗ್ಯಕ್ಕೆ ಬೆಲೆ ತೆರಬೇಕಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ವೇಳೆ ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ122.4 ಮೈಕೋ ಗ್ರಾಂ. ಕ್ಯೂಬಿಕ್ ಮೀಟರ್ ನಷ್ಟು ಮಾಲಿನ್ಯ ಹೆಚ್ಚಳ ಕಂಡುಬಂದಿದ್ದು ಇದನ್ನು ಪ್ರತಿದಿನ 83.4 ರಷ್ಟು ಮೈಕ್ರೋ ಗ್ರಾಂ ಕ್ಯೂಬಿಕ್ ಮೀಟರ್ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರತಿಯೊಬ್ಬರು ರಸ್ತೆ ಬದಿ ಸುಡುವ ತ್ಯಾಜ್ಯದಿಂದ ಬರುವ ಹೊಗೆಯನ್ನು ಸೇವಿಸುವುದು ಅನಿವಾರ್ಯವಾಗಿದೆ. ಬಿಎಂಟಿಸಿ ಬಸ್ ಗಳು ಉಗುಳುವ ಹೊಗೆಯಂತೂ ಮನುಷ್ಯನಿಗೆ ಅತ್ಯಂತ ಹಾನಿಕಾರಕ ಎಂದೇ ಪರಿಸರ ತಜ್ಞರು ಹೇಳುತ್ತಿದ್ದಾರೆ.
ವೈದ್ಯಕೀಯ ವರದಿಗಳ ಪ್ರಕಾರ ದೆಹಲಿಯಲ್ಲಿ ಇತ್ತೀಚೆಗೆ ಜನಿಸುತ್ತಿರುವ ಮಕ್ಕಳಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚಾಗಿ ಕಂಡುಬರುತ್ತಿದೆ. ಹಲವು ಎಚ್ಚರಿಕೆಗಳ ಮಧ್ಯವೂ ದೆಹಲಿ ಪರಿಸ್ಥಿತಿ ಕ್ಷೀಣಿಸುತ್ತಾ ಸಾಗಿದೆ. ದುರಂತವೆಂದರೆ ಬೆಂಗಳೂರು ಕೂಡ ದೆಹಲಿ ನಗರದ ಹಾದಿಯಲ್ಲೇ ಸಾಗುತ್ತಿದೆ. ಪರಿಸರ ಸಂಬಂಧಿ ಜಾಗೃತಿ ಜನರಲ್ಲಿ ಈಗಲೂ ಮರೀಚಿಕೆಯಾಗಿಯೇ ಉಳಿದಿದೆ.

ರಸ್ತೆ ಬದಿಯಲ್ಲೇ ಕಸಕ್ಕೆ ಬೆಂಕಿ
ಬೆಂಗಳೂರಿನ ಜಯನಗರ ಶುಚಿತ್ವಕ್ಕೆ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಆದರೆ ಇಂದು ಬಿಬಿಎಂಪಿಯಿಂದ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯದ ಕಾರಣ, ಜಯನಗರ ತ್ಯಾಜ್ಯನಗರಗಳ ಪಟ್ಟಿಯಲ್ಲಿ ಸೇರುವ ಸಂಭವ ಎದ್ದುಕಾಣುತ್ತಿದೆ.
ತ್ಯಾಜ್ಯವನ್ನು ರಸ್ತೆಬದಿಗಳಲ್ಲಿ ಅಥವಾ ಬಡಾವಣೆಗಳಲ್ಲಿ ಸುಟ್ಟುಹಾಕುವುದರಿಂದ ಪಾರ್ಟಿಕ್ಯೂಲ್ ಮೆಜರ್ಸ್ 10 ರಷ್ಟು ಪ್ರಮಾಣದಲ್ಲಿ ಪರಿಸರವು ನಿತ್ಯ ಹಾಳಾಗುತ್ತಿದೆ. ಬಿಬಿಎಂಪಿಯ ಪೌರ ಕಾರ್ಮಿಕರು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಎಲ್ಲೆಂದರಲ್ಲಿ ಸುಟ್ಟು ಹಾಕುವುದರಿಂದ ಪರಿಸರಕ್ಕೆ ಭರಿಸಲಾರದಷ್ಟು ನಷ್ಟ ಉಂಟಾಗುತ್ತಿದೆ.

ಕಸದ ತೊಟ್ಟಿಯಲ್ಲೇ ಕಸಕ್ಕೆ ಬೆಂಕಿ
ಈ ರೀತಿ ಸುಟ್ಟು ಹಾಕುವುರಿಂದ ಪರಿಸರದಲ್ಲಿ ಹತ್ತು ಪರ್ಟಿಕಲ್ ಮೆಜರ್ ಪ್ರ,ಆಣದಷ್ಟು ವಾಯು ಮಾಲಿನ್ಯ ಉಂಟಾಗುತ್ತದೆ, ಈ ಬಗ್ಗೆ ಸ್ಥಳೀಯ ಆಡಳಿತವನ್ನು ಮಾತ್ರವನ್ನು ಪೌರಕಾರ್ಮಿಕರನ್ನು ಸುಶಿಕ್ಷಿತಗೊಳಿಸುವ ಅನಿವಾರ್ಯತೆ ನಮ್ಮೆದುರು ಇದೆ. ಬೆಂಗಳೂರು ನಿವಾಸಿಗಳಿಗೆ ಎಚ್ಚೆತ್ತುಕೊಳ್ಳಲು ಇದು ಕೊನೆಯ ಅವಕಾಶ.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ. ಮುಂದೊಂದು ದಿನ ದೆಹಲಿಗಿಂತಲೂ ಭೀಕರವಾದ ಪರಿಸ್ಥಿತಿ ಬೆಂಗಳೂರಿಗೆ ಬಂದೊದಗಲದೆ. ದೆಹಲಿಗೆ ಹೋಲಿಸಿದರೆ ಬೆಂಗಲೂರು ನಗರ ದೆಹಲಿಗಿಂತ ಅತ್ಯಂತ ಇಕ್ಕಟ್ಟಾದ ರಸ್ತೆಗಳನ್ನು ಹೊಂದಿರುವ ನಗರ. ಹೀಗಾಗಿ ವಾಯುಮಾಲಿನ್ಯ ವಿಪರೀತಗೊಂಡರೆ ಇಲ್ಲಿನ ಜನರನ್ನು ಬದುಕಿಸಲು ಯಾರಿದಂದಲೂ ಸಾಧ್ಯವಿಲ್ಲ.

ಖಾಸಗಿ ವಾಹನದ ಹೊಗೆ
ಕೇವಲ ಸಮೂಹ ಸಾರಿಗೆ ವಾಹನ ಮಾತ್ರವಲ್ಲದೆ, ಖಾಸಗಿ ವಾಹನಗಳ ವಾಯು ಮಾಲಿನ್ಯದ ಮಿತಿ ಮೀರಿದ ಪ್ರಮಾಣಕ್ಕೂ ಬ್ರೇಕ್ ಹಾಕುವವರೇ ಇಲ್ಲದಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ನಗರದ ಪ್ರತಿಯೊಬ್ಬರೂ ಪಣತೊಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ದೆಹಲಿಯ ಸ್ಥಿತಿ ಬೆಂಗಳೂರಿಗೆ ಬರುವುದರಲ್ಲಿ ಸಂಶಯವೇ ಇಲ್ಲ.
-
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ











Click it and Unblock the Notifications