ಬೆಂಗಳೂರು : ಬುಧವಾರ, ಗುರುವಾರ ಹಲವು ಪ್ರದೇಶದಲ್ಲಿ ನೀರಿಲ್ಲ
ಬೆಂಗಳೂರು, ಅಕ್ಟೋಬರ್ 27 : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ತುರ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಅಕ್ಟೋಬರ್ 28ರ ಬುಧವಾರ ಮತ್ತು ಅಕ್ಟೋಬರ್ 29ರ ಗುರುವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗುರುವಾರ ರಾತ್ರಿ ಅಥವ ಶುಕ್ರವಾರ ನೀರಿನ ಪೂರೈಕೆ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಇದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ಯಾವ ಬಡಾವಣೆಗಳಲ್ಲಿ ನೀರಿಲ್ಲ : ಕತ್ರಿಗುಪ್ಪೆ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಚನ್ನಮ್ಮನಕೆರೆ ಅಚ್ಚುಕಟ್ಟು, ಬಿನ್ನಿಪೇಟೆ, ಜಯನಗರ 3, 4, 6ನೇ ಬ್ಲಾಕ್, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಕೋರಮಂಗಲ, ವಿಲ್ಸನ್ ಗಾರ್ಡನ್, ಶಾಂತಿ ನಗರ, ಆಡುಗೋಡಿ. [ದರ ಹೆಚ್ಚಳ ಮಾಡಲಿದೆ ಜಲ ಮಂಡಳಿ]
ಮಡಿವಾಳ, ದೊಮ್ಮಲೂರು, ಚಿಕ್ಕಲಕ್ಷ್ಮೀಪುರಂ, ರಂಗದಾಸಪ್ಪ ಲೇಔಟ್, ಚಂದಪ್ಪ ನಗರ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ವಿಕ್ಟೋರಿಯಾ ಲೇಔಟ್, ವಿವೇಕ ನಗರ, ರಾಜೇಂದ್ರ ಲೇಔಟ್, ನೀಲಸಂದ್ರ, ಆನೆಪಾಳ್ಯ, ಆಸ್ಟಿನ್ ಟೌನ್, ಗಂಗಾಧರ ನಗರ, ಹರಿ ನಗರ ಮುಂತಾದ ಬಡಾವಣೆಗಳು.












Click it and Unblock the Notifications