Bengaluru: ಕೊಲೆ ಮಾಡಿ ಮಗಳು ಮಾನಸಿಕ ಅಸ್ವಸ್ಥೆ ಎಂದ ತಂದೆ
ಉತ್ತರ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ 60 ವರ್ಷದ ತಂದೆ ಮಗಳನ್ನು ಮನೆಯಲ್ಲಿ ನಡೆದ ಗಲಾಟೆಯಲ್ಲಿ ಹೊಡೆದು ಕೊಂದಿದ್ದಾನೆ.
ಬೆಂಗಳೂರು ಮಾರ್ಚ್ 18: ಗಲಾಟೆಯಿಂದಾಗಿ 32 ವರ್ಷದ ಮಗಳನ್ನು ತಂದೆಯೊಬ್ಬ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ಕಲಿಸುತ್ತಿದ್ದ ಪುತ್ರಿ ಆರ್ ಆಶಾ ಕೊಲೆಯಾದ ದುರ್ದೈವಿ.
ನಗರದ ಉತ್ತರ ಬೆಂಗಳೂರಿನ ಕೊಡಿಗೇಹಳ್ಳಿಯ ನಿವಾಸದಲ್ಲಿ ಬುಧವಾರ ತಡರಾತ್ರಿ 60 ವರ್ಷದ ತಂದೆ ಬಿಆರ್ ರಮೇಶ್ ಮನೆಯಲ್ಲಿ ನಡೆದ ಗಲಾಟೆಯಲ್ಲಿ ಆಕೆಯನ್ನು ಹೊಡೆದು ಕೊಂದಿದ್ದಾನೆ. ರಮೇಶ್ ಕಳೆದ ತಿಂಗಳು ನಿವೃತ್ತರಾಗುವ ಮೊದಲು ಬಿಇಎಲ್ನ ಫಾರ್ಮಸಿ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು. ಮೂಲತಃ ಚಿತ್ರದುರ್ಗ ಜಿಲ್ಲೆಯ ರಮೇಶ್, ಕಳೆದ ಕೆಲ ದಿನಗಳಿಂದ ಮನೆಯಲ್ಲೇ ಇದ್ದಾಗ ಈ ಕೃತ್ಯ ಎಸಗಿದ್ದಾನೆ.
ಸದ್ಯ ಬಿಆರ್ ರಮೇಶ್ ಅವರ ಪುತ್ರಿ ಆರ್ ಆಶಾ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಗುರುವಾರ ಬೆಳಗ್ಗೆ ರಮೇಶ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಆಶಾ ಮನೆಯೊಳಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಹೇಳಿದ್ದನು. ಬಳಿಕ ಹೊಯ್ಸಳ ವಾಹನ ಅಲ್ಲಿಗೆ ಧಾವಿಸಿತು. ಪೊಲೀಸರು ಅಪರಾಧದ ಸ್ಥಳವನ್ನು ಪರಿಶೀಲಿಸಿದಾಗ ಮತ್ತು ಮಹಿಳೆಯ ತಲೆಯ ಮೇಲಿನ ಗಾಯಗಳು, ಆಕೆಯನ್ನು ಹೊಡೆದು ಸಾಯಿಸಿರುವುದನ್ನು ಪತ್ತೆಹಚ್ಚಿದರು. ವಿಚಾರಣೆ ನಡೆಸಿದಾಗ ರಮೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನಲಕ್ಷ್ಮಿ ಲೇಔಟ್ನಲ್ಲಿ ಪತ್ನಿ ಮತ್ತು ಹಿರಿಯ ಮಗಳು ಆಶಾ ಅವರೊಂದಿಗೆ ವಾಸವಿದ್ದ ರಮೇಶ್, ಪತಿಯೊಂದಿಗೆ ಬೇರ್ಪಟ್ಟಿದ್ದಕ್ಕೆ ಮನನೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೋಷಕರ ವಿರೋಧದ ನಡುವೆಯೂ, ಆಶಾ 2020 ರಲ್ಲಿ ತನ್ನ ಇಷ್ಟದ ವ್ಯಕ್ತಿಯನ್ನು ವಿವಾಹವಾದರು. ಆದರೆ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಹೀಗಾಗಿ ಆಶಾ ಅವರು ತಮ್ಮ ಪೋಷಕರೊಂದಿಗೆ ವಾಸಿಸಲು ಪ್ರಾರಂಭಿಸಿದರು. ರಮೇಶ್ ಮತ್ತು ಆಶಾ ಆ ಬಗ್ಗೆ ಜಗಳವಾಡುತ್ತಲೇ ಇದ್ದರು.
ಹೀಗಾಗಿ ತಂದೆ ರಮೇಶ್ ಅವರು ಮರದ ದಿಮ್ಮಿಯಿಂದ ಆಕೆಯ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆದಾಗ ರಮೇಶ್ ಅವರ ಪತ್ನಿ ಮತ್ತೊಂದು ಕೋಣೆಯಲ್ಲಿದ್ದರು. ನಂತರ ರಮೇಶ್ ಪತ್ನಿ ನಿದ್ರೆಗೆ ಜಾರಿರುವುದನ್ನು ಖಚಿತ ಪಡಿಸಿಕೊಂಡು ಎಚ್ಚರವಾದಾಗ ಆಶಾ ಹಾಸಿಗೆಯಿಂದ ಬಿದ್ದಿರುವುದು ಕಂಡುಬಂತು.

ಆರಂಭದಲ್ಲಿ ತಂದೆ ರಮೇಶ್ ಮಾನಸಿಕ ಅಸ್ವಸ್ಥೆಯಾದ ಆಶಾ, ಕುಟುಂಬ ಸದಸ್ಯರೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದರು. ಅದೇ ರೀತಿ ಬುಧವಾರ ರಾತ್ರಿ ತಂದೆಯ ಜತೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ, ಹಣ ಕೊಡುವಂತೆ ಪಟ್ಟು ಹಿಡಿದು ತಂದೆಗೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಹೇಳಿಕೊಂಡಿದ್ದರು.
ನೆಲಮಂಗಲಗದಲ್ಲಿ ಇಂತಹದ್ದೇ ಘಟನೆ
ತಾಲೂಕಿನ ಬೈರೇಗೌಡಹಳ್ಳಿ ಸಮೀಪ ಜೂಜಾಟ ನಿರತರು ಹಣಕಾಸು ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನ ಕಾರತ್ತಿಸಿ ಹತ್ಯೆಗ್ಯದಿದ್ದಾರೆ.
ಘಟನೆ ವಿವರ: ಚಂದು ವರ್ಷದ ಹಿಂದಷ್ಟೇ ಸಂಬಂಧಿಕರ ಯುವತಿಯನ್ನು ವಿವಾಹವಾಗಿದ್ದು, ಈತ ಜೂಜಾಡುವುದು ಮತ್ತು ಆಡಿಸುವುದನ್ನು ರೂಢಿಸಿಕೊಂಡಿದ್ದ. ಈತನ ನಡೆಯಿಂದ ಬೇಸತ್ತಿದ್ದ ಪತ್ನಿ ಕಳೆದ ಎರೆಡುಮೂರು ತಿಂಗಳ ಹಿಂದೆ ತವರುಮನೆ ಸೇರಿದ್ದಳು. ಜೂಜಾಟದ ಜತೆಗೆ ಮದ್ಯದ ಚಟಕ್ಕೂ ದಾಸನಾಗಿದ್ದ ಈತ ಕಳೆದ ಕೆಲದಿನಗಳಲ್ಲಿ ಲಕ್ಷಾಂತರ ಹಣವನ್ನು ಜೂಜಿನಲ್ಲಿಗಳಿಸಿದ್ದ ಎನ್ನಲಾಗಿದೆ.
ಜೂಜು ಅಡ್ಡೆಯಲ್ಲಿ ಹಣಕಾಸಿನ ವಿಚಾರವಾಗಿ ಆಗಾಗ ಗಲಾಟೆಗಳಾಗಿವೆ. ಅದೇ ರೀತಿ ಬುಧವಾರ ಸಂಜೆ ನಡೆದ ಗಲಾಟೆ ಅತಿರೇಕಕ್ಕೆ ಹೋಗಿದೆ. ಚಂದು ತನ್ನ ದ್ವಿಚಕ್ರವಾಹನದಲ್ಲಿ ಮನೆಗೆ ಹೋಗಲು ಬೈರೇಗೌಡಹಳ್ಳಿಯ ಕಡೆ ಹೋಗುವುದನ್ನು ಗಮನಿಸಿದ ಹಂತಕರ ತಂಡ ಕಾರಿನಲ್ಲಿ ಹಿಂಬಾಲಿಸಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು, ಆತನ ಮೇಲೆ ಹತ್ತಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಕೊನೆಯುಸಿರೆಳೆದಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ.












Click it and Unblock the Notifications