Bengaluru: ಕಂಡೆಕ್ಟರ್ ಕಣ್ ಸನ್ನೆಗೆ ಬಿದ್ಲು ಹುಡುಗಿ- ಬಿಎಂಟಿಸಿ ಪ್ರೇಯಸಿಯನ್ನ ಗರ್ಭಿಣಿ ಮಾಡಿ ಒಲ್ಲೆ ಎಂದ
ಬೆಂಗಳೂರು ಜನವರಿ 14: ತನಗೆ ಮೋಸ ಮಾಡಿದ ಗಂಡ ಬೇಕು, ತನ್ನ ಮಗುವಿಗೆ ತಂದೆ ಬೇಕು ಎಂದು ಯುವತಿಯೊಬ್ಬಳು ಬೆಂಗಳೂರು ಕಮಿಷನರ್ ಕಚೇರಿ ಕದ ತಟ್ಟಿದ್ದಾಳೆ. ಬಿಎಂಟಿಸಿ ಬಸ್ ಕಂಡೆಕ್ಟರ್ ಕಣ್ ಸನ್ನೆಗೆ ಬಿದ್ದು ಮೋಸ ಹೋದ ಯುವತಿ ಇಂದು ನ್ಯಾಯ ಕೊಡಿ ಎಂದು ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಅಷ್ಟಕ್ಕೂ ಯಾರೀಕೆ? ಏನಾಯ್ತು? ಕಡೆಕ್ಟರ್ ಮಾಡಿದ್ದೇನು? ಇದೆಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.
ಬಿಎಂಟಿಸಿ ಬಸ್ ಡ್ರೈವರ್ ಕಮ್ ಕಂಡೆಕ್ಟರ್ ಆಗಿದ್ದ ಮಂಜುನಾಥ ಎಂಬಾತ ಮೇಲೆ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಎಂ.ಎಸ್.ಪಾಳ್ಯದಿಂದ ಯಲಹಂಕ ಕಡೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳನ್ನು ಬಸ್ ಕಂಡೆಕ್ಟರ್ ಪಟಾಯಿಸಿದ ಘಟನೆ ನಡೆದಿದೆ. ಕೇವಲ ಪ್ರೀತಿಗೀತಿ ಅಂದುಕೊಂಡಿದ್ದರೆ ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತಿರಲಿಲ್ಲ. ಆದರೆ ಬಸ್ ಕಂಡೆಕ್ಟರ್ ಮಂಜುನಾಥ್ ವಿಚ್ಚೇದಿತ ಯುವತಿಗೆ ಬಾಳು ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಕೆಯನ್ನು ಗರ್ಭಿಣಿ ಮಾಡಿ ಸದ್ಯ ಆಕೆಯನ್ನು ತಿರಸ್ಕರಿಸಿದ್ದಾನೆ.

ಹೌದು... ಕಂಡೆಕ್ಟರ್ ಮಂಜುನಾಥ್ಗೆ ಬಸ್ನಲ್ಲಿ ಪರಿಚಯವಾದ ಯುವತಿಗೆ ಈಗಾಗಲೇ ಮದುವೆಯಾಗಿ ವಿಚ್ಚೇಧನವಾಗಿತ್ತು. ಬಸ್ನಲ್ಲಿ ಪರಿಚಯವಾದ ಈಕೆಯ ನಂಬರ್ ಅನ್ನು ಮಂಜುನಾಥ್ ತೆಗೆದುಕೊಂಡಿದ್ದನು. ಬಳಿಕ ಆಕೆಗೆ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದನು. ಈ ಮಾತು ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಯುವತಿಗೆ ಈಗಾಗಲೇ ವಿಚ್ಚೇದನವಾಗಿದೆ ಎಂದು ತಿಳಿದು ಕೂಡ ಕಂಡೆಕ್ಟರ್ ಮಂಜುನಾಥ್ ಬಾಳು ಕೊಡುವುದಾಗಿ ನಂಬಿಸಿ ಆಕೆಯೊಂದಿಗೆ ಊರು ಊರು ಸುತ್ತಾಡಿದ್ದಾನೆ.
ಮೂರು ತಿಂಗಳು ಇಬ್ಬರು ಒಟ್ಟಿಗೆ ಪ್ರವಾಸ ಹೋಗಿ ಜಾಲಿಯಾಗಿ ಸುತ್ತಾಡಿದ್ದಾರೆ. ಜೊತೆಯಾಗಿ ಇರಲು ಆರಂಭಿಸಿದ್ದರು. ಅಲ್ಲದೆ ಯುವತಿ ಮನೆಯವರ ವಿರೋಧದ ನಡುವೆಯೂ ಮಂಜುನಾಥನನ್ನು ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಳು. ಮೂರು ತಿಂಗಳ ಬಳಿಕ ಯುವತಿಗೆ ಮಂಜುನಾಥ್ ನಿಜ ಬಣ್ಣ ಗೊತ್ತಾಗಿದೆ.
ಮಂಜುನಾಥ್ಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳೂ ಕೂಡ ಇರುವುದು ಸಂತ್ರಸ್ತ ಯುವತಿಗೆ ಗೊತ್ತಾಗಿದೆ. ಇದೆಲ್ಲಾ ಗೊತ್ತಾದ ಬಳಿಕ ಕಂಡೆಕ್ಟರ್ ಮಂಜುನಾಥ್ ಯುವತಿಯನ್ನು ಕಡೆಗಣಿಸಲು ಶುರುಮಾಡಿ, ತಲೆ ಮರೆಸಿಕೊಂಡಿದ್ದಾನೆ. ಅಲ್ಲದೆ ಯುವತಿ ಪ್ರಸ್ತುತ ಗರ್ಭಿಣಿ ಕೂಡ ಆಗಿದ್ದು ಆಕೆ ತನ್ನ ಗಂಡನನ್ನು ಹುಡುಕಿ ಕೊಡಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ.
ಕಂಡಕ್ಟರ್ ಮಂಜುನಾಥ್ ಈಗಾಗಲೇ ಮದುವೆಯಾಗಿದ್ದು ನೆಲಮಂಗಳದಲ್ಲಿ ಆತನ ಮೊದಲ ಪತ್ನಿ ಹಾಗೂ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಈತನ ಮತ್ತೊಂದು ಕುಟುಂಬದ ಬಗ್ಗೆ ತಿಳಿದ ಯುವತಿ ಕಂಗಾಲಾಗಿದ್ದಾಳೆ. ಇದೆಲ್ಲಾ ವಿಚಾರ ಗೊತ್ತಾಗುವ ವೇಳೆ ಯುವತಿ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಯುವತಿ ಗರ್ಭಿಣಿ ಆದ ಬಳಿಕ ಕಂಡೆಕ್ಟರ್ ಮಂಜುನಾಥ್ ಯುವತಿ ಬೇಡ ಎನ್ನುತ್ತಿದ್ದಾನಂತೆ.
ಹೀಗಾಗಿ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಯಲ್ಲಿ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ. ತನಗೆ ತನ್ನ ಗಂಡ ಬೇಕು, ಹೊಟ್ಟೆಯಲ್ಲಿ ಇರುವ ನನ್ನ ಮಗುವಿಗೆ ತಂದೆ ಬೇಕು ಅಂತ ಯುವತಿ ಹಠ ಹಿಡಿದಿದ್ದಾಳೆ. ಆದರೆ ಮೋಸ ಮಾಡಿದ ಮಂಜುನಾಥ್ ಮಾತ್ರ ಯುವತಿಯನ್ನು ಕಾಣಲು ಇಚ್ಚಿಸುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications