ಕೆಂಪೇಗೌಡ ವಿ. ನಿಲ್ದಾಣದಲ್ಲಿ ಚೆಕ್ ಇನ್ ಸಮಸ್ಯೆ ಇನ್ನಿಲ್ಲ!
ಬೆಂಗಳೂರು, ಮೇ.15: ಬೆಂಗಳೂರಿನ ಯಾವುದೇ ಮೂಲೆಯಿಂದ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವುದೇ ಕಷ್ಟ. ಟೋಲ್ ಕಟ್ಟಿ ಹಾಗೂ ಹೀಗೂ ತಲುಪಿದರೂ ಚೆಕ್ ಇನ್ ಸಮಸ್ಯೆ ಎದುರಾಗುತ್ತದೆ. ಅದರೆ, ಇನ್ಮುಂದೆ ಕೆಐಎಎಲ್ ನಲ್ಲಿ ಚೆಕ್ ಇನ್ ಸಮಸ್ಯೆ ಇರುವುದಿಲ್ಲ.
ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣ(ಕೆಐಎಎಲ್) ನಲ್ಲಿ ಹೊಸ ಚೆಕ್ ಇನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಚೆನ್ ಇನ್ ಗಾಗಿ ಪ್ರಯಾಣಿಕರು ಕ್ಯೂ ನಿಲ್ಲುವುದು ತಪ್ಪುತ್ತದೆ.
ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಗಳು ಹಾಗೂ ಬ್ಯಾಗೇಜ್ ಟ್ಯಾಗ್ ಗಳನ್ನು ತಾವೇ ಸುಲಭವಾಗಿ ಪಡೆದುಕೊಳ್ಳಬಹುದು.

ಚೆಕ್ ಇನ್ ಸಮಸ್ಯೆಗೆ ತಂತ್ರಜ್ಞಾನದ ನೆರವು ನೀಡಲು ಜಾಗತಿಕ ವಿಮಾನಯಾನ ಐಟಿ ಸಂಸ್ಥೆ SITA ಮುಂದೆ ಬಂದಿದೆ. SITA ಸಂಸ್ಥೆಯೊಂದಿಗೆ ಬಿಐಎಎಲ್ ಏಳು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.
ಸೆಲ್ಫ್ ಸರ್ವೀಸ್ ಚೆಕ್ ಇನ್ ಕಿಯೋಸ್ಕ್ ಗಳನ್ನು ಸ್ಥಾಪಿಸಿ, ನಿಯಂತ್ರಿಸುವ ಹೊಣೆ ಈ ಸಂಸ್ಥೆ ಮೇಲಿರುತ್ತದೆ ಎಂದು ಬಿಐಎಲ್ ವಕ್ತಾರರು ಹೇಳಿದ್ದಾರೆ.
ಸೆಲ್ಫ್ ಚೆಕ್ ಇನ್ ಹಾಗೂ ಬ್ಯಾಗೇಜ್ ಟ್ಯಾಗ್ ಎರಡನ್ನು ನಿಭಾಯಿಸಲು ಈ ಸಂಸ್ಥೆ ಸಮರ್ಥವಾಗಿದೆ. ಸಂಸ್ಥೆ ಇದುವರೆವಿಗೂ ನೀಡಿರುವ ಪ್ರಾತ್ಯಕ್ಷಿಕೆಯಿಂದ ತೃಪ್ತಿ ತಂದಿದೆ. ಕಾಮನ್ ಯೂಸ್ ಸೆಲ್ಫ್ ಸರ್ವೀಸ್ ಕಿಯೋಸ್ಕ್(ಸಿಯುಎಸ್ಎಸ್) ನಿಂದ ಬೋರ್ಡಿಂಗ್ ಪಾಸ್ ಹಾಗೂ ಬ್ಯಾಗೇಜ್ ಟ್ಯಾಗ್ ಪಡೆಯುವುದು ಸುಲಭವಾಗಲಿದೆ ಎಂದು ಬಿಐಎಎಲ್ (ಕಾರ್ಯ ನಿರ್ವಹಣೆ) ಅಧ್ಯಕ್ಷ ಹರಿ ಮರಾರ್ ಹೇಳಿದ್ದಾರೆ. ಈ ಹೊಸ ವ್ಯವಸ್ಥೆ ಜಾರಿಗೊಳ್ಳಲು ಜೂನ್ ತಿಂಗಳಿನಿಂದ ಜಾರಿಗೊಳ್ಳುವ ನಿರೀಕ್ಷೆಯಿದೆ. (ಪಿಟಿಐ)
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications