Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
ಬಹುನಿರೀಕ್ಷಿತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಯಾನ ಕಾರ್ಯಾಚರಣೆ ಆರಂಭವಾಗಲಿದೆ. ಇಲ್ಲಿಂದ ಮೊದಲು ಯಾವ ವಿಮಾನಯಾನ ಸಂಸ್ಥೆ ಸೇವೆ ನೀಡಲಿದೆ? ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 05: ಬಹುನಿರೀಕ್ಷಿತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಯಾನ ಕಾರ್ಯಾಚರಣೆ ಆರಂಭವಾಗಲಿದೆ. ಈ ಸಂಬಂಧ ಏರ್ ಏಷ್ಯಾ ಘೋಷಣೆ ಮಾಡಿದೆ.
ಹೌದು, ಸಾಕಷ್ಟು ವಿಶೇಷತೆಗಳನ್ನು, ಅತೀ ವಿಶಾಲವಾದ ಮತ್ತು ಅತ್ಯಧಿಕ ಪ್ರಯಾಣಿಕರನ್ನು ಹಿಡಿಯುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಟರ್ಮಿನಲ್ 2 ಕೆಲವು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿತ್ತು. ಇದೀಗ ಆ ಟರ್ಮಿನಲ್ಲಿ ಇದೇ ಫೆಬ್ರುವರಿ 15 ರಿಂದ ತನ್ನ ವಿಮಾನಯಾನ ಕಾರ್ಯಾರಂಭಗೊಳಿಸುವುದಾಗಿ ಏರ್ ಏಷ್ಯಾ ವಿಮಾನ ಸಂಸ್ಥೆ ತಿಳಿಸಿದೆ.
ಬೆಂಗಳೂರಲ್ಲಿ ಪ್ರಧಾನ ಕಚೇರಿ ಹೊಂದಿರುವ ಏರ್ ಏಷ್ಯಾ ವಿಮಾನ ಸಂಸ್ಥೆ ಭಾನುವಾರ ಇಂತದ್ದೊಂದು ಘೋಷಿಸಿ ಅದನ್ನು ಟ್ವೀಟ್ ಮಾಡಿದೆ. ಇದರ ಬೆನಲ್ಲೇ ಇನ್ನಿತರ ವಿಮಾನಯಾನ ಸಂಸ್ಥೆಗಳು ಬೆಂಗಳೂರು ಏರ್ಪೋರ್ಟ್ನ ಟಮಿನಲ್ 2 ನಿಂದಲೇ ದೇಶ, ವಿದೇಶಗಳಿಗೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತವಾಗಿ ಅವುಗಳ ತಿಳಿಸಬೇಕಿದೆ.

ಬೆಂಗಳೂರು ಏರ್ಪೋರ್ಟ್ ನಲ್ಲಿ ಪ್ರಯಾಣಿಕರನ್ನು ತನ್ನ ಸೆಳೆಯುತ್ತಿರುವ ಟರ್ಮಿನಲ್ 2 ವಿಮಾನ ಸೇವೆ, ಕಾರ್ಯಚಟವಟಿಕೆಗೆ ಸಜ್ಜಾಗುತ್ತಿದೆ. ಏಕೆಂದರೆ ಅನೇಕ ವಿಮಾನಯಾನ ಸಂಸ್ಥೆಗಳು ಇದನ್ನು ದೇಶೀಯ ನಿರ್ಗಮನ ಮತ್ತು ಆಗಮನಕ್ಕಾಗಿ ಬಳಸುತ್ತವೆ. ಪ್ರಸ್ತುತ ಸ್ಟಾರ್ ಏರ್ವೇಸ್ ನಿಂದ ಸೇವೆ ನೀಡುತ್ತಿರುವ ಏರ್ ಏಷ್ಯಾ ಸಂಸ್ಥೆಯವರು ಫೆಬ್ರವರಿ 15 ರಿಂದ ಟರ್ಮಿನಲ್ 2 ಗೆ ಕಾರ್ಯಾಚರಣೆಯನ್ನು ಬದಲಾಯಿಸುವುದಾಗಿ ನಿರ್ಧಾರ ಪ್ರಕಟಿಸಿದ್ದಾರೆ.
ಟ್ವೀಟ್ನಲ್ಲಿ, 'ಏರ್ ಏಷ್ಯಾ ವಿಮಾನಗಳು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಮನೆಗೆ, ಹೊಸ ಹಾರಾಟದ ಅನುಭವ ಹೊಂದಲು ಕಾತರಾಗಿದ್ದೇವೆ. ಈಗಿರುವ ಟರ್ಮಿನಲ್ ಬದಲಿಸಲಿದ್ದೇವೆ. ಫೆಬ್ರುವರಿ 15ರಿಂದ ಎಲ್ಲಾ i5 ದೇಶೀಯ ಕಾರ್ಯಾಚರಣೆಗಳನ್ನು ನೂತನ ಟರ್ಮಿನಲ್ 2ಗೆ ಸ್ಥಳಾಂತರಿಸಲಿದ್ದೇವೆ. ಅಲ್ಲಿ ನಿಮ್ಮನ್ನು(ಪ್ರಯಾಣಿಕರನ್ನು) ಭೇಟಿ ಮಾಡುವುದಾಗಿ' ತಿಳಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ನಲ್ಲಿ ಸುಮಾರು 1,700 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬ್ಬಂದಿ ನಿಯೋಜನೆಗೆ ಅನುಮತಿ ನೀಡಿತ್ತು. ಜನವರಿ 15 ರಂದು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಟಾರ್ ಏರ್ವೇಸ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಇತ್ತೀಚಿನ ಟರ್ಮಿನಲ್ನಲ್ಲಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಏರ್ಪೋರ್ಟ್ ನಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಸುಗಮ ವಾಹನ ಆಗಮನ ಮತ್ತು ನಿರ್ಗಮನಕ್ಕಾಗಿ ಐದು ಪಥದ ಮಾರ್ಗ ನಿರ್ಮಿಸಲಾಗಿದೆ, ಅದು ಏಪ್ರಿಲ್ನಲ್ಲಿ ಟರ್ಮಿನಲ್ 2 ರಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications