ಬೆಂಗಳೂರು: 2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ
ಬೆಂಗಳೂರು, ಸೆಪ್ಟೆಂಬರ್. 11: ಉದ್ಯಾನನಗರಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ ಬುಧವಾರ ಸ೦ಜೆ 6 ಕಡೆ ಕೈಚಳಕ ತೋರಿಸಿದ್ದವರು ಗುರುವಾರ ನಾಲ್ಕು ಕಡೆ ಸರಗಳ್ಳತನ ಮಾಡಿದ್ದಾರೆ. ಎರಡು ದಿನದಲ್ಲಿ 10 ಪ್ರಕರಣಗಳು ನಡೆದಂತೆ ಆಗಿದೆ.
ಮನೆ ಎದುರು ವಾಕಿಂಗ್ ಮಾಡುತ್ತಿದ್ದ, ದೇವಾಲಯಕ್ಕೆ ತರಳುತ್ತಿದ್ದ ಮಹಿಳೆಯರನ್ನೇ ಗುರುತಾಗಿಸಿಕೊಂಡು ಕೃತ್ಯ ಎಸಗಲಾಗಿದೆ. ಕಪ್ಪು ಬಣ್ಣದ ಪಲ್ಸರ್ ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಸರ ಎಗರಿಸಿದ್ದಾರೆ. ಇರಾನಿ ಗ್ಯಾಂಗ್ ಹೆಸರಿನಲ್ಲಿ ಸರಗಳ್ಳತನ ಮಾಡಲಾಗಿದ್ದರೂ ಇದರ ಹಿಂದೆ ಸ್ಥಳೀಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.[ಮೊಬೈಲ್ ಕದಿಯಲು ಬಂದವನಿಗೆ ಯುವತಿಯರಿಂದ ಸರಿಯಾಗೇ ಬಿತ್ತು!]
ಎರಡು ದಿನದಲ್ಲಿ ನಡೆದ ಸರಗಳ್ಳತನಕ್ಕೆ ಗುರಿಯಾದವರು
*
ಸೆಪ್ಟೆಂಬರ್,
10
ಬೆಳಗ್ಗೆ:
ಮನೆ
ಮುಂದೆ
ವಾಕಿಂಗ್
ಮಾಡುತ್ತಿದ್ದ
ಕಾಮಾಕ್ಷಿಪಾಳ್ಯ
ಸಮೀಪದ
ಕೆಎಚ್
ಬಿ
ಕಾಲನಿಯ
ಸಾವಿತ್ರಿ
(59)
(90
ಗ್ರಾ೦
ಸರ)
*
ಸೆಪ್ಟೆಂಬರ್,
10
ಬೆಳಗ್ಗೆ
10.30:
ತಾವರೆಕೆರೆ
ಸಮೀಪದ
ಪ್ಯೆಪ್ಲ್ಯೆನ್
ರಸ್ತೆಯಲ್ಲಿ
ತರಕಾರಿ
ತರಲು
ತೆರಳುತ್ತಿದ್ದ
ರತ್ನನಗರ
ನಿವಾಸಿ
ಪುಷ್ಪಾ
(33)(60
ಗ್ರಾ೦)
*
ಸೆಪ್ಟೆಂಬರ್,
10
ಬೆಳಗ್ಗೆ
10.45ಕ್ಕೆ
ವಿನಾಯಕನಗರದಲ್ಲಿ
ಟೈಲರಿ೦ಗ್
ತರಗತಿಗೆ
ಹೋಗುತ್ತಿದ್ದ
ವಿಶಾಲಾಕ್ಷಿ
(31)
(35
ಗ್ರಾ೦ನ
ಸರ)*
ಸೆಪ್ಟೆಂಬರ್,
10
ಬೆಳಗ್ಗೆ
11ಕ್ಕೆ
ಉಳ್ಳಾಲ
ಲೇಔಟ್ನಲ್ಲಿ
ಹೂವು
ಖರೀದಿ
ಮಾಡುತ್ತಿದ್ದ
ಸುನೀತಾ
(42)
(100
ಗ್ರಾ೦
ಸರ)
*
ಸೆಪ್ಟೆಂಬರ್
9
ರಂದು
ಮಧ್ಯಾಹ್ನ
2.35
ರಿಂದ
ರಾತ್ರಿ
8
ಗಂಟೆ
ಅವಧಿಯಲ್ಲಿ
ಮಹದೇವಪುರ,
ಕೆ.ಆರ್.ಪುರ,
ಬಾಣಸವಾಡಿ,
ಜೆ.ಪಿ.ನಗರ,
ಯಲಹಂಕ
ನ್ಯೂ
ಟೌನ್
ಮತ್ತು
ಸುಬ್ರಹ್ಮಣ್ಯಪುರದಲ್ಲಿ
ಅಂದರೆ
6
ಕಡೆ
ಸರಗಳ್ಳತನ
ಮಾಡಲಾಗಿತ್ತು.
#BewareChainSnatcher
@CPBlr
Please
share
the
Chain
Snatching
&
Attention
diversion
Prevention
Videohttps://t.co/Q01cafM3oS
—
BengaluruCityPolice
(@BlrCityPolice)
July
4,
2015
* ಸೆಪ್ಟೆಂಬರ್ 9 ಬುಧವಾರ ಎಇಸಿಎಸ್ಲೇಔಟ್ನಲ್ಲಿ ಮೇರಿಸ್ಟೆರ್ಲ(57) (70 ಗ್ರಾಂ ಸರ), ಗಾಯತ್ರಿಲೇಔಟ್ಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರತ್ನಾ (50) (50 ಗ್ರಾಂ ಚಿನ್ನದ ಸರ), ಅದೇ ದಿನ ಸಂಜೆ 6.15ರ ವೇಳೆಗೆ ಶ್ರೀನಿಧಿಲೇಔಟ್ ನಿವಾಸಿ ಜಯಶ್ರೀ (60) ಎಂಬುವರು ಕಳ್ಳರ ಕೃತ್ಯಕ್ಕೆ ಬಲಿಯಾಗಿದ್ದರು.
* ಜೆ.ಪಿ.ನಗರ 5ನೇ ಹಂತದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಮಂಜುಳಾ (48), ಕಲ್ಯಾಣನಗರ 1ನೇ ಬ್ಲಾಕ್ನಲ್ಲಿ ಮುನಿವೆಂಕಟಮ್ಮ (68), ಯಲಹಂಕ ಉಪನಗರ ಮಣಿ (37) ಎಂಬುವರ ಸರ ಹರಿದುಕೊಂಡ ಚೋರರು ನಾಪತ್ತೆಯಾಗಿದ್ದಾರೆ.
ನಿಯಂತ್ರಣಕ್ಕೆ ಬಂದಿದ್ದ ಸರಗಳ್ಳತನ ಪ್ರಕರಣಗಳು ಮತ್ತೆ ಹೆಚ್ಚಿಕೊಂಡಿದ್ದು ಬೆಂಗಳೂರು ನಾಗರಿಕರು ಎಚ್ಚರಿಕೆ ವಹಿಸಬೇಕಾಗಿದೆ. ಪೊಲೀಸರು ಸಹ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.