ಬೆಳ್ಳಂದೂರಿನಲ್ಲಿ ತ್ಯಾಜ್ಯ ವಿಲೇವಾರಿ ಆಶ್ವಾಸನೆ: ಪ್ರತಿಭಟನೆ ಕೈಬಿಟ್ಟ ಸ್ಥಳೀಯರು
ಬೆಂಗಳೂರು, ಫೆಬ್ರವರಿ 24 : ಬೆಳ್ಳಂದೂರು ಕೆರೆ ಹಾಗೂ ಅಪಾರ್ಟ್ ಮೆಂಟ್ ಗಳ ಪಕ್ಕದಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದುದರಿಂದ ಸ್ಥಳೀಯರು ಶನಿವಾರ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಶಾಸಕ ಅರವಿಂದ ಲಿಂಬಾವಳಿ ಅವರು ಮೂರು ದಿನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಪಡೆದಿದ್ದಾರೆ.
ಸತತ ಬೆಂಕಿಗೆ ಆಹುತಿಯಾಗಿ ಸುದ್ದಿ ಮಾಡಿದ್ದ ಬೆಳ್ಳಂದೂರು ಕೆರೆ ಸುತ್ತಲಿನ ನಿವಾಸಿಗಳಿಗೆ ಇದೀಗ ಹೊಸದೊಂದು ಸಮಸ್ಯೆ ಎದುರಾಗಿತ್ತು. ಕೆರೆ ಹಾಗೂ ಅಲ್ಲಿನ ಅಪಾರ್ಡ್ ಮೆಂಟ್ ಬಳಿಯಲ್ಲಿ ತ್ಯಾಜ್ಯ ತಂದು ಸುರಿಯುವುದರಿಂದ ಜನರು ಮೂಗುಮುಚ್ಚಿಕೊಂಡೇ ಜೀವನ ಸಾಗಿಸಬೇಕಾಗಿತ್ತು.

ಈಗಾಗಲೇ ಜನವಸತಿಗೆ ಅಯೋಗ್ಯ ಎನಿಸಿರುವ ಈ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾಗುತ್ತಿದೆ ಆದರೂ ಈ ಪ್ರದೇಶಕ್ಕೆ ಬೇರೆಡೆಯಿಂದ ತ್ಯಾಜ್ಯವನ್ನು ತಂದು ಸಂಗ್ರಹಿಸಲಾಗುತ್ತಿದೆ. ಬಳಿಕ ಈ ಯತ್ಯಾಜ್ಯವನ್ನು ವಿಲೇವಾರಿ ಮಾಡಲು ಕೊಟ್ಟ ಗುತ್ತಿಗೆದಾರರು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.











Click it and Unblock the Notifications