'ಈಗಷ್ಟೇ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶ ಆಗಿಲ್ಲ ಬಿಟ್ಟು ಬಿಡಿ'

ಬೆಂಗಳೂರು, ಆಗಸ್ಟ್ 06 : 'ನಿಮ್ಮ ಕಾಲಿಗೆ ಬೀಳುವೆ...ಈಗಷ್ಟೇ ಮನೆ ಕಟ್ಟಿದ್ದೇನೆ...ಗೃಹ ಪ್ರವೇಶವನ್ನೂ ಮಾಡಿಲ್ಲ. ದಯವಿಟ್ಟು ಬಿಟ್ಟುಬಿಡಿ' ಎಂದು ಕಸವನಹಳ್ಳಿ ಬಳಿ ರಾಜಾಕಾಲುವೆ ಒತ್ತುವರಿ ತೆರವು ವೇಳೆ ನಿವಾಸಿಯೊಬ್ಬರು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರು.[3 ಕೋಟಿ ವೆಚ್ಚ ಮನೆಯಿದ್ದರೂ ಈಕೆ, ಬೀದಿ ಬದಿ ವ್ಯಾಪಾರಿ!]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಬಿಬಿಎಂಪಿ ನಗರದಲ್ಲಿ ಶನಿವಾರ ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಹಲವು ಜೆಸಿಬಿಗಳು ನಗರದ ವಿವಿಧ ಭಾಗದಲ್ಲಿ ಮುಂಜಾನೆಯೇ ಘರ್ಜನೆ ನಡೆಸುತ್ತಿವೆ.[ರಾಜಾಕಾಲುವೆ ಒತ್ತುವರಿ ತೆರವುಗೊಳಿಸಿ : ಸಿದ್ದರಾಮಯ್ಯ]

bda

ಕಸವನಹಳ್ಳಿ, ಯಲಹಂಕ ಬಳಿಯ ಶಿವನಹಳ್ಳಿ ಸೇರಿದಂತೆ ಬೆಂಗಳೂರು ನಗರದ 8 ಪ್ರದೇಶಗಳಲ್ಲಿ ಇಂದು ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. 'ರಾಜಾಕಾಲುವೆ ಒತ್ತುವರಿಯಾಗಿದ್ದರೂ ತೆರವುಗೊಳಿಸಿ' ಎಂದು ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದು, ಅದರಂತೆ ಇಂದಿನಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.[ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ!]

ಕಸವನಹಳ್ಳಿ ಬಳಿ ತೆರವು ಕಾರ್ಯಾಚರಣೆ ಆರಂಭಿಸಿದಾಗ ನಿವಾಸಿಯೊಬ್ಬರು ಮನೆ ಒಡೆಯಬೇಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. 'ಈಗಷ್ಟೆ ಮನೆ ಕಟ್ಟಿದ್ದೇನೆ, ಗೃಹ ಪ್ರವೇಶವೂ ಆಗಿಲ್ಲ, ನಮ್ಮನ್ನು ಬಿಟ್ಟುಬಿಡಿ' ಎಂದು ಗೋಳು ತೋಡಿಕೊಂಡರು.[ಇಂದು ಬೆಂಗಳೂರು ಕೆರೆಗಳ ಕಥೆ-ವ್ಯಥೆ]

ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಬಿಬಿಎಂಪಿ ರಾಜಾ ಕಾಲುವೆಗಳನ್ನು ನಿರ್ಮಿಸಿದೆ. ಆದರೆ, ಹಲವು ಪ್ರದೇಶಗಳಲ್ಲಿ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಮಳೆ ನೀರು ಹೋಗಲು ಸ್ಥಳವಿಲ್ಲದೇ ಬಡಾವಣೆಗಳು ಜಲಾವೃತವಾಗುತ್ತಿವೆ. ಆದ್ದರಿಂದ, ರಾಜಾಕಾಲುವೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+