'ಬಸವನಗುಡಿ' ಉಳಿಸಲು ಸ್ಥಳೀಯರ ಸಹಿ ಸಂಗ್ರಹ
ಬೆಂಗಳೂರು, ಅಕ್ಟೋಬರ್ 23: ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಬಡಾವಣೆಗಳು ತಮ್ಮ ಹೆಸರುಗಳಿಂದ ಸಾಕಷ್ಟು ವೈಶಿಷ್ಟ್ಯವನ್ನು ಹೊಂದಿವೆ. ಈ ಪೈಕಿ 130ಕ್ಕೂ ಅಧಿಕ ವರ್ಷಗಳ ಇತಿಹಾಸ ವಿರುದ್ಧ ಬಸವನಗುಡಿ ಇಲ್ಲಿನ ದೇವಸ್ಥಾನ, ಕಡಲೆಕಾಯಿ ಪರಿಷೆ ಸೇರಿದಂತೆ ಐತಿಹಾಸಿಕವಾಗಿ ಮನೆ ಮಾತಾಗಿದೆ. ಇಂತಹ ಬಡಾವಣೆಗೆ ಇದೀಗ ಸರ್ಕಾರ ಕುತ್ತು ತರುವ ಕೆಲಸ ಮಾಡುತ್ತಿದ್ದು, ಅದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರ ವಾರ್ಡ್ಗಳ ಮರು ವಿಂಗಡಣೆ ವೇಳೆ ಕರಡು ಪಟ್ಟಿಯಲ್ಲಿ ರಾಜಧಾನಿಯ 12 ವಾರ್ಡ್ಗಳ ಹೆಸರು ಬದಲಾಯಿಸಲಾಗಿದೆ. ಈ ಪೈಕಿ ಇತಿಹಾಸ ಸುಪ್ರಸಿದ್ಧ 'ಬಸವನಗುಡಿ' ವಾರ್ಡ್ ಹೆಸರು ಸಹ ಇದೆ. ಸರ್ಕಾರದ ಹೆಸರು ಬದಲಾವಣೆ ವಿರುದ್ಧ 'ಬಸವನಗುಡಿ' ಸ್ಥಳೀಯರು 10,000ಕ್ಕೂ ಸಹಿ ಸಂಗ್ರಹಿಸಿದ್ದಾರೆ. ಈ ಅಭಿಯಾನ ಮುಂದುವರಿದಿದೆ.

ನಗರದ ಕೆಲವು ವಾರ್ಡ್ಗಳಂತೆ ಬಸವನಗುಡಿ ವಾರ್ಡ್ ಹೆಗ್ಗುರುತಿಗೂಕುತ್ತು ಬಂದಿದೆ. ಈ ವಾರ್ಡ್ 'ದೊಡ್ಡಗಣಪತಿ ವಾರ್ಡ್' ಆಗಿ ಬದಲಾಯಿಸಲಾಗಿದೆ. ಇನ್ನು ಬಡಾವಣೆಯ ಗಡಿಯನ್ನು ಮಾರ್ಪಾಡು ಮಾಡಲಾಗಿದೆ. ಹೊಸ ಹೆಸರು ಬೇಡ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಸವನಗುಡಿ ವಾರ್ಡ್ ಹೆಸರು ಬದಲಾವಣೆ ಮಾಡಿದರೆ ಇಲ್ಲಿನ ನಿವಾಸಿಗಳ ಭಾವನೆಗಳಿಗೆ ತೊಂದರೆ ಆಗಲಿದೆ. ಇದು ಪ್ರಸಿದ್ಧ ಬಡಾವಣೆ ಆಗಿದ್ದು, ಪಾರಂಪರಿಕ ತಾಣ, ದೇವಸ್ಥಾನಗಳು ಈ ವಾರ್ಡ್ ವ್ಯಾಪ್ತಿಗೆ ಬರಲಿದೆ. ದೇಶ ವಿದೇಶದಲ್ಲೂ ಈ ಬಡಾವಣೆಗೆ ಹೆಸರುವಾಸಿಯಾಗಿದೆ.
ಬಡಾವಣೆಯಲ್ಲಿ ಬಸವನ ದೇವಸ್ಥಾನ (ಗುಡಿ)ಯಿಂದ ಈ ಪ್ರದೇಶದಕ್ಕೆ ಬಡವನಗುಡಿ ಎಂದು ಹೆಸರು ಬಂದಿದೆ. ಆದ್ದರಿಂದ ಸರ್ಕಾರ ವಾರ್ಡ್ ಹೆಸರು ಬದಲಾಯಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಹಿ ಸಂಗ್ರಹ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಮನವಿ ಮೂಲಕ ಒತ್ತಾಯಿಸಲಿದ್ದಾರೆ ಎಂದು ವಿಜಯವಾಣಿ ವರದಿ ಮಾಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications