ಮಧ್ಯಾಹ್ನ 3ಗಂಟೆ ತನಕ ಬಿಬಿಎಂಪಿ ಕಚೇರಿಗೆ ಬರಬೇಡಿ
ಬೆಂಗಳೂರು, ನ. 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಇನ್ನು ಮುಂದೆ ಸಮಯ ನಿಗದಿ ಮಾಡಲಾಗುತ್ತದೆ. ಹೌದು, ಬಿಬಿಎಂಪಿ ಲೆಕ್ಕಪತ್ರ ವಿಭಾಗದ ಎಲ್ಲ ವ್ಯವಹಾರಗಳು ಡಿ.1ರಿಂದ ಆನ್ಲೈನ್ ಮೂಲಕ ನಡೆಯಲಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 3ರವರೆಗೆ ಬಿಬಿಎಂಪಿ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಬಿಬಿಎಂಪಿ
ಮೇಯರ್
ಎನ್.ಶಾಂತಕುಮಾರಿ
ಅವರು
ಶುಕ್ರವಾರ
ಪಾಲಿಕೆಯ
ಇಲಾಖಾವಾರು
ವಿಶ್ಲೇಷಣಾ
ಸಭೆ
ನಡೆಸಿದರು,
ನಂತರ
ಮಾಧ್ಯಮಗಳೊಂದಿಗೆ
ಮಾತನಾಡಿದ
ಅವರು,
ಲೆಕ್ಕಪತ್ರ
ವಿಭಾಗದ
ವ್ಯವಹಾರದಲ್ಲಿ
ಪಾರದರ್ಶಕತೆ
ಇಲ್ಲ
ಎಂಬ
ಆರೋಪವಿದೆ.
ಆ
ಹಿನ್ನೆಲೆಯಲ್ಲಿ
ಡಿ.1ರಿಂದ
ವೇತನ
ವಿತರಣೆ,
ಗುತ್ತಿಗೆದಾರರಿಗೆ
ಬಿಲ್
ಪಾವತಿ
ಸೇರಿದಂತೆ
ಎಲ್ಲ
ಪ್ರಕ್ರಿಯೆ
ಆನ್ಲೈನ್ನಲ್ಲಿ
ನಡೆಯಲಿದೆ
ಎಂದರು.
[ಮೇಯರ್
ಸಂದರ್ಶನ
ಓದಿ]
ಮುಖ್ಯ ಲೆಕ್ಕಾಧಿಕಾರಿ ವಿಭಾಗ ಸೇರಿದಂತೆ ಇತರ ಕಚೇರಿಗಳಿಗೆ ದಿನವಿಡೀ ಸಾರ್ವಜನಿಕರು, ಇತರರು ಭೇಟಿ ನೀಡುವುದರಿಂದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಿದೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನ 3ರವರೆಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಕಚೇರಿ ಆವರಣದಲ್ಲಿ ದೇವಾಲಯವಿರುವುದರಿಂದ ಭಕ್ತರ ನಿಯಂತ್ರಣ ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೇಯರ್, ಕಚೇರಿ ಸಮಯ ಆರಂಭವಾಗುವ ಹೊತ್ತಿಗೆ ನಿರ್ಬಂಧ ವಿಧಿಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಶಿಸ್ತು ತರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿ ಉಳಿದವರಿಗೆ 3 ಗಂಟೆ ಬಳಿಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. 3 ಗಂಟೆಗೆ ಎಲ್ಲ ಅಧಿಕಾರಿಗಳು ಕಚೇರಿಯಲ್ಲಿರುವಂತೆ ಸೂಚಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.