ಬೆಂಗಳೂರು: ರೇಪ್ ಮಾಡಿದ ಆಟೋ ಚಾಲಕ ಪರಾರಿ

ಆಟೋ ಚಾಲಕ, 22 ವರ್ಷದ ಸೂರ್ಯ ಎಂಬ ಯುವಕ ಆರೋಪಿ. ಯುವತಿಯ ಪೋಷಕರು ನೀಡಿದ ದೂರಿನನ್ವಯ ಜೆಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವಕನ ತಲಾಶೆಯಲ್ಲಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಹದಿಹರೆಯದ ಯುವತಿ ಕಾಟನ್ ಪೇಟೆಯ ಆಂಜನಪ್ಪ ಗಾರ್ಡನ್ ನಿವಾಸಿ. ಈಕೆ ಗಾರ್ಮೆಂಟ್ಸ್ ಉದ್ಯೋಗಿ. 2 ತಿಂಗಳ ಹಿಂದೆ ಆರೋಪಿ ಸೂರ್ಯನ ಪರಿಚಯವಾಗಿದೆ. ಮುಂದೆ ಅದು ಪ್ರೇಮಕ್ಕೆ ತಿರುಗಿದೆ.
ಇಬ್ಬರೂ ಒಟ್ಟಾಗಿ ಊಟಿ, ಕನ್ಯಾಕುಮಾರಿ ಪ್ರವಾಸಕ್ಕೂ ಹೋಗಿಬಂದಿದ್ದರು ಎನ್ನಲಾಗಿದೆ. ಈ ವಿಷಯ ಯುವತಿಯ ಪೋಷಕರಿಗೆ ಗೊತ್ತಾಗಿ ಗಲಾಟೆಯಾಗಿದೆ. ನಂತರ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿಯೂ ನಡೆದಿತ್ತು.
ಈ ಮಧ್ಯೆ, ಸೂರ್ಯ ರಂಗನಾಥ ಕಾಲೊನಿಯಲ್ಲಿ ಹೊಸ ಮನೆ ಮಾಡಿದ್ದು, ಫೆ. 16 ರಂದು ಹಾಲುಕ್ಕಿಸುವ ಶಾಸ್ತ್ರವಿಟ್ಟುಕೊಂಡಿದ್ದಾನೆ. ಪೂಜೆಗೆಂದು ಯುವತಿ ಮತ್ತು ಆಕೆಯ ಪಾಲಕರು ಅಲ್ಲಿಗೆ ತೆರಳಿದ್ದರು. ಸಮಯ ಸಾಧಿಸಿ, ಸೂರ್ಯ ಯುವತಿಯನ್ನು ಬೆಡ್ ರೂಮಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾಳೆ.
ಪೋಷಕರು, ಸೂರ್ಯನನ್ನು ಕರೆಯಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಸೂರ್ಯ ನಿರಾಕರಿಸಿದ್ದಾನೆ. ಒತ್ತಾಯ ಹೆಚ್ಚಾಗುತ್ತಿದ್ದಂತೆ ಅಪಾಯದ ಸುಳಿವರಿತ ಸೂರ್ಯ ಸಮಯ ಸಾಧಿಸಿ ಯಾರಿಗೂ ಹೇಳದೆ ಪರಾರಿಯಾಗಿದ್ದಾನೆ. ಪೊಲೀಸರು ಇದೀಗ ಅವನ ಬೆನ್ನು ಹತ್ತಿದ್ದಾರೆ.












Click it and Unblock the Notifications