ಬೆಂಗಳೂರಿನ ಕೆಲವೆಡೆ ಇಂದು ನೀರು ಬರೋಲ್ಲ
ಬೆಂಗಳೂರು, ಅ.24: ದೀಪಾವಳಿ ಸಂಭ್ರಮದಲ್ಲಿರುವ ಮಹಾನಗರದ ಕೆಲವೊಂದು ಏರಿಯಾಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನೀರು ಸರಬರಾಜು ಪೈಪ್ ಒಡೆದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು ರಿಪೇರಿಯಾಗುವವರೆಗೆ ಕೆಲ ಬಡಾವಣೆಗಳಿಗೆ ನೀರು ಸರಬರಾಜು ಸಾಧ್ಯವಿಲ್ಲ.
ನಗಗರದ ಮಾಗಡಿ ರಸ್ತೆ ಸಮೀಪದ ಬೆಗ್ಗರ್ಸ್ ಕಾಲೋನಿ ಬಳಿ ನೀರಿನ ಪೈಪ್ ಒಡೆದಿದ್ದು ಹಲವೆಡೆ ನೀರು ಪೂರೈಕೆ ವ್ಯತ್ಯಯವಾಗಲಿದೆ. ಪೈಪ್ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.[ಮಗುವಿನ ಮೇಲೆ ಅತ್ಯಾಚಾರ ಮಾಡಿದವನು ಗುಂಡಣ್ಣ?]

ಪೈಪ್ ಒಡೆದಿರುವ ಪರಿಣಾಮ ನಂದಿನಿ ಲೇಔಟ್, ರಾರಾಜಿನಗರ, ಮಾಗಡಿ ರಸ್ತೆ, ಮಹಾಲಕ್ಷ್ಮೀ ಲೇಔಟ್ ಮತ್ತು ಜೆಪಿ ನಗರದ ಸುತ್ತಮುತ್ತಲ ಭಾಗದಲ್ಲಿ ಅಕ್ಟೋಬರ್ 24 ರಂದು ನೀರು ಪೂರೈಕೆ ಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ ನೀರು ಸರಬರಾಜು ಮಾಡುತ್ತಿದ್ದ 80 ವರ್ಷ ಹಳೆಯ ಪೈಪ್ ಗುರುವಾರ ಮಧ್ಯರಾತ್ರಿ ಒಡೆದು ಹೋಗಿದೆ. ತಕ್ಕಣ ಪರಿಹಾರಕ್ಕೆ ಮುಂದಾದರೂ ನೀರಿನ ರಭಸ ತಡೆಯಲಾಗಲಿಲ್ಲ. ಟ್ಯಾಂಕ್ ನಲ್ಲಿದ್ದ ಸುಮಾರು 90 ದಶಲಕ್ಷ ಲೀಟರ್ ನೀರು ಖಾಲಿಯಾದ ಮೇಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.[ಆರ್ಕಿಡ್ಸ್ ಶಾಲೆಯಲ್ಲಿ ಅತ್ಯಾಚಾರ, ಆರೋಪಿ ಎಲ್ಲಿ?]
ಅತ್ಯಂತ ಹಳೆಯ ಮಾದರಿ ಪೈಪ್ ಸಿಗುವುದು ದುಸ್ತರವಾಗಿದ್ದು ಜಲಮಂಡಳಿ ಕಂಪನಿಯೊಂದಕ್ಕೆ ಕೂಡಲೇ ತಯಾರು ಮಾಡಿ ನೀಡುವಂತೆ ತಿಳಿಸಿದೆ. ಒಂದು ವೇಳೆ ಶುಕ್ರವಾರ ಸಂಪೂರ್ಣ ದುರಸ್ತಿ ಸಾಧ್ಯವಾಗಿದ್ದರೆ ಕೆಲ ಬಡವಣೆಗಳ ಜನರು ಶನಿವಾರವೂ ನೀರಿಗೆ ಪರದಾಡಬೇಕಿದೆ.
ಗುರುವಾರ ರಾತ್ರಿ 36 ಇಂಚಿನ ನೀರಿನ ಪೈಪ್ ಒಡೆದಿತ್ತು. ತಕ್ಷಣ ಕಾರ್ಯನಿರತರಾದರೂ ದುರಸ್ತಿ ಸಾಧ್ಯವಾಗಿಲ್ಲ. ಅಲ್ಲದೇ ಆಗಾಗ ಬೀಳುತ್ತಿದ್ದ ಮಳೆ ಸಹ ಕೆಲಸಕ್ಕೆ ಅಡ್ಡಿಯಾಗಿ ಪರಿಣಿಮಿಸಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications