ಬೈಯಪ್ಪನಹಳ್ಳಿ ರೈಲ್ವೆ ಓವರ್ಬ್ರಿಡ್ಜ್ ಕಾರ್ಯಕ್ಕೆ ಕೂಡಿಬಂದ ಮುಹೂರ್ತ
ಬೆಂಗಳೂರು, ಜೂನ್ 10: ಕಳೆದ ಏಳು ವರ್ಷಗಳಿಂದ ಅರ್ಧಂಬರ್ಧ ಕಾಮಗಾರಿಯಾಗಿ ಬಾಕಿ ಇರುವ ಬೈಯಪ್ಪನಹಳ್ಳಿ ಓವರ್ ಬ್ರಿಡ್ಜ್ ನಿರ್ಮಾಣ ಕಾರ್ಯವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲಾಗುತ್ತಿದೆ.
ನೈಋತ್ಯ ರೈಲ್ವೆಯು ನಾಳೆ(ಜೂನ್ 11)ಬೆಳಗ್ಗೆ 9.30ಕ್ಕೆ ಭೂಮಿ ಪೂಜೆ ನಡೆಸಲಿದೆ.. ಭಾನುವಾರವಷ್ಟೇ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ ಎಷ್ಟೋ ವರ್ಷಗಳಿಂದ ಕನಸಾಗಿಯೇ ಉಳಿದಿರುವ ರೈಲ್ವೆ ಓವರ್ಬ್ರಿಡ್ಜ್ನ ಕಾರ್ಯವನ್ನು ಜೂನ್ 11ರಿಂದ ಮತ್ತೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
900 ಮೀಟರ್ ಉದ್ದದ ರೈಲ್ವೆ ಓವರ್ ಬ್ರಿಡ್ಜ್ ಇದಾಗಿದೆ. ಮಾರುತಿ ಸೇವಾ ನಗರ ಹಾಗೂ ಓಲ್ಡ್ ಬೈಯಪ್ಪನಹಳ್ಳಿಯಿಂದ ಓಲ್ಡ್ ಮದ್ರಾಸ್ ರೋಡ್ಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಕೇವಲ 400 ಮೀಟರ್ ಅಷ್ಟೇ ಕಾಮಗಾರಿ ಪೂರ್ಣಗೊಂಡಿದೆ.

ರೈಲ್ವೆ ಓವರ್ ಬ್ರಿಡ್ಜ್ ಬೈಯಪ್ಪನಹಳ್ಳಿ ಟರ್ಮಿನಲ್ ಹಾಗೂ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವಂತೆ ನಿರ್ಮಾಣ ಮಾಡಲು ಒತ್ತಾಯಿಸಲಾಗುತ್ತಿದೆ. ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. 2012ರಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.











Click it and Unblock the Notifications