ಯುಗಾದಿ : ಬೆಂಗಳೂರಲ್ಲಿ ಜಪಾನ್+ ಕನ್ನಡ ನೃತ್ಯ ವೈಭವ
ಬೆಂಗಳೂರು, ಮಾ.20: ಯುಗಾದಿ ಹಬ್ಬದ ಸಂದರ್ಭದಲ್ಲಿ 'ಬಹುರಂಗ್' ವಿಭಿನ್ನ ನೃತ್ಯ ಕಾರ್ಯಕ್ರಮವನ್ನು ಸದಾಶಿವ ನಗರದ ಫ್ಲವರ್ ಪಾರ್ಕ್ ಸಮಿತಿ ಆಯೋಜಿಸಿದೆ. ಮಾ.21ರ ಶನಿವಾರ ಲೋ ಲೆವಲ್ ಪಾರ್ಕ್, ಸ್ಯಾಂಕಿ ರಸ್ತೆಯಲ್ಲಿ ಆಸಕ್ತರಿಗೆ ರಸದೌತಣ ಸಿಗಲಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಅಭಿನವ ನೃತ್ಯ ಸಂಸ್ಥೆಯ ಖ್ಯಾತ ನೃತ್ಯಪಟುಗಳಾದ ನಿರುಪಮಾ ಹಾಗೂ ರಾಜೇಂದ್ರ ಮತ್ತು ದಿ ರಾಯಲ್ ಎಕೋ ಗ್ರೂಪ್, ಬೆಂಗಳೂರು (ಜಪಾನೀಸ್) ತಂಡಗಳು ಜಪಾನ್ ಹಾಗೂ ಕನ್ನಡ ಸಾಂಸ್ಕೃತಿಕ ನೃತ್ಯ ವೈಭವವನ್ನು ಪ್ರದರ್ಶಿಸಲಿದ್ದಾರೆ.[ಯುಗಾದಿ ಪ್ರಯುಕ್ತ ವಿಶೇಷ ಕೆಎಸ್ಆರ್ಟಿಸಿ ಬಸ್ಸು]
'ಬಹುರಂಗ್' -ಹೆಸರೇ ಸೂಚಿಸುವಂತೆ ಇದು ಹಲವು ರಂಗುಗಳ ಜೋಡಣೆ. ನೃತ್ಯ ಹಾಗೂ ಸಂಗೀತಗಳ ಸಮ್ಮೀಲನ, ಹೊಸತನದ ಹುರುಪನ್ನು ತುಂಬುವ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಯುಗಾದಿಯ ಸಂದರ್ಭದಲ್ಲಿ ಹೊಸ ಉತ್ಸಾಹ ತುಂಬಲು ಇಂಥ ಕಾರ್ಯಕ್ರಮ ಅವಶ್ಯಕ.

ಖ್ಯಾತ ನೃತ್ಯಪಟು ನಿರುಪಮಾ ಹಾಗೂ ರಾಜೇಂದ್ರ ಅವರು 1994ರಲ್ಲಿ ಅಭಿನವ ಗುಪ್ತ ಹೆಸರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ ಅಭಿನವ ನೃತ್ಯ ಕಂಪನಿ ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಲೋಟಸ್ ಹಾಗೂ ಕ್ರಿಸಾಂಥಮಮ್ ಟ್ರಸ್ಟ್, ವ್ಯಾಸ ಇಂಟರ್ ನ್ಯಾಷನಲ್ ಸ್ಕೂಲ್, ವಿಜಯ ಬ್ಯಾಂಕ್, ಸತ್ವಂ, ಹಾಗೂ ಹರೀಶ್ ಅಪ್ಪರೆಡ್ಡಿ ಆಯೋಜಿಸಿದ್ದಾರೆ.
ಸದಾಶಿವನಗರದ ಪಾರ್ಕ್ ಸಮಿತಿ ಕೈಗೊಂಡಿರುವ ಕ್ರಮಗಳಿಗೆ ಇಂಬು ನೀಡಲು ಈ ಕಾರ್ಯಕ್ರಮದ ಮೂಲಕ ಸ್ವಚ್ಛ ಮನಸ್ಸು, ಸುಂದರ ಹಸಿರು ವಿಶ್ವ ಎಂಬ ಕಲ್ಪನೆ ಮೂಡಿಸಲಾಗುವುದು. ಸ್ವಚ್ಛತೆ ಅಭಿಯಾನ, ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 98458 24725
ವೆಬ್ ಸೈಟ್: www.bookurevent.com
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications