ಯುಗಾದಿ : ಬೆಂಗಳೂರಲ್ಲಿ ಜಪಾನ್+ ಕನ್ನಡ ನೃತ್ಯ ವೈಭವ
ಬೆಂಗಳೂರು, ಮಾ.20: ಯುಗಾದಿ ಹಬ್ಬದ ಸಂದರ್ಭದಲ್ಲಿ 'ಬಹುರಂಗ್' ವಿಭಿನ್ನ ನೃತ್ಯ ಕಾರ್ಯಕ್ರಮವನ್ನು ಸದಾಶಿವ ನಗರದ ಫ್ಲವರ್ ಪಾರ್ಕ್ ಸಮಿತಿ ಆಯೋಜಿಸಿದೆ. ಮಾ.21ರ ಶನಿವಾರ ಲೋ ಲೆವಲ್ ಪಾರ್ಕ್, ಸ್ಯಾಂಕಿ ರಸ್ತೆಯಲ್ಲಿ ಆಸಕ್ತರಿಗೆ ರಸದೌತಣ ಸಿಗಲಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಅಭಿನವ ನೃತ್ಯ ಸಂಸ್ಥೆಯ ಖ್ಯಾತ ನೃತ್ಯಪಟುಗಳಾದ ನಿರುಪಮಾ ಹಾಗೂ ರಾಜೇಂದ್ರ ಮತ್ತು ದಿ ರಾಯಲ್ ಎಕೋ ಗ್ರೂಪ್, ಬೆಂಗಳೂರು (ಜಪಾನೀಸ್) ತಂಡಗಳು ಜಪಾನ್ ಹಾಗೂ ಕನ್ನಡ ಸಾಂಸ್ಕೃತಿಕ ನೃತ್ಯ ವೈಭವವನ್ನು ಪ್ರದರ್ಶಿಸಲಿದ್ದಾರೆ.[ಯುಗಾದಿ ಪ್ರಯುಕ್ತ ವಿಶೇಷ ಕೆಎಸ್ಆರ್ಟಿಸಿ ಬಸ್ಸು]
'ಬಹುರಂಗ್' -ಹೆಸರೇ ಸೂಚಿಸುವಂತೆ ಇದು ಹಲವು ರಂಗುಗಳ ಜೋಡಣೆ. ನೃತ್ಯ ಹಾಗೂ ಸಂಗೀತಗಳ ಸಮ್ಮೀಲನ, ಹೊಸತನದ ಹುರುಪನ್ನು ತುಂಬುವ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಯುಗಾದಿಯ ಸಂದರ್ಭದಲ್ಲಿ ಹೊಸ ಉತ್ಸಾಹ ತುಂಬಲು ಇಂಥ ಕಾರ್ಯಕ್ರಮ ಅವಶ್ಯಕ.

ಖ್ಯಾತ ನೃತ್ಯಪಟು ನಿರುಪಮಾ ಹಾಗೂ ರಾಜೇಂದ್ರ ಅವರು 1994ರಲ್ಲಿ ಅಭಿನವ ಗುಪ್ತ ಹೆಸರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ ಅಭಿನವ ನೃತ್ಯ ಕಂಪನಿ ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಲೋಟಸ್ ಹಾಗೂ ಕ್ರಿಸಾಂಥಮಮ್ ಟ್ರಸ್ಟ್, ವ್ಯಾಸ ಇಂಟರ್ ನ್ಯಾಷನಲ್ ಸ್ಕೂಲ್, ವಿಜಯ ಬ್ಯಾಂಕ್, ಸತ್ವಂ, ಹಾಗೂ ಹರೀಶ್ ಅಪ್ಪರೆಡ್ಡಿ ಆಯೋಜಿಸಿದ್ದಾರೆ.
ಸದಾಶಿವನಗರದ ಪಾರ್ಕ್ ಸಮಿತಿ ಕೈಗೊಂಡಿರುವ ಕ್ರಮಗಳಿಗೆ ಇಂಬು ನೀಡಲು ಈ ಕಾರ್ಯಕ್ರಮದ ಮೂಲಕ ಸ್ವಚ್ಛ ಮನಸ್ಸು, ಸುಂದರ ಹಸಿರು ವಿಶ್ವ ಎಂಬ ಕಲ್ಪನೆ ಮೂಡಿಸಲಾಗುವುದು. ಸ್ವಚ್ಛತೆ ಅಭಿಯಾನ, ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 98458 24725
ವೆಬ್ ಸೈಟ್: www.bookurevent.com
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications