BBMP e-Khata: ಗ್ರಾಮ ಪಂಚಾಯಿತಿಯ 2500 ಸತ್ತುಗಳಿಗೆ ಬಿಬಿಎಂಪಿ ಇ-ಖಾತಾ ರಚನೆ
ಬೆಂಗಳೂರು, ಸೆಪ್ಟಂಬರ್ 13: ಬೆಂಗಳೂರು ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೊಂದಿಗೆ ವಿಲೀನಗೊಳಿಸುವ ಮೊದಲು ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಆಸ್ತಿಗಳಿಗೆ ಇದೀಗ ಬಿಬಿಎಂಪಿಯು ಸ್ವಯಂಚಾಲಿತ ಇ-ಖಾತಾ ರಚನೆ ಮಾಡಿದೆ. ಇದನ್ನು ಪಡೆಯುವಂತೆ ಆಸ್ತಿ ಮಾಲೀಕರಿಗೆ ಕೋರಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜರಾಜೇಶ್ವರಿ ನಗರ ವಲಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಇ-ಸ್ವತ್ತು ತಂತ್ರಾಂಶದಿಂದ ಹಳೆಯ ಗ್ರಾಮ ಪಂಚಾಯಿತಿಯ ಇ-ಖಾತಾ ಹೊಂದಿರುವ ಆಸ್ತಿಗಳಿಗೆ ಸ್ವಯಂಚಾಲಿತವಾಗಿ ಬಿಬಿಎಂಪಿ ಇ-ಖಾತಾ ಪಡೆಯಬಹುದು. ಈ ಕುರಿತು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

2500 ಸ್ವತ್ತುಗಳಿಗೆ ಪಾಲಿಕೆಯಿಂದ ಇ-ಖಾತಾ
ಬಿಬಿಎಂಪಿಯೊಂದಿಗೆ ವಿಲೀನಗೊಳಿಸುವ ಮೊದಲು ಗ್ರಾಮ ಪಂಚಾಯಿತಿಯಿಂದ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳಲ್ಲಿನ ಸುಮಾರು 2500 ಸ್ವತ್ತುಗಳಿದ್ದವು. ಅವುಗಲಿಗೆ ಬಿಬಿಎಂಪಿಯು ಸ್ವಯಂಚಾಲಿತವಾಗಿ ಎಸ್.ಎ.ಎಸ್. ಆಸ್ತಿತೆರಿಗೆ ಅರ್ಜಿ ಸಂಖ್ಯೆಗಳು ಮತ್ತು ಬಿಬಿಎಂಪಿ ಇ-ಖಾತಾಗಳನ್ನು ರಚನೆ ಮಾಡಿದೆ. ಈ ಮಲ್ಲಸಂದ್ರ ಮತ್ತು ಕಾವಲ್ ಗ್ರಾಮಗಳ ಆಸ್ತಿ ಮಾಲೀಕರು ಪಾಲಿಕೆ ಇ-ಖಾತಾ ಪಡೆಯಬಹುದಾಗಿದೆ.
ಸದರಿ ಗ್ರಾಮಗಳ ಸ್ವತ್ತುಗಳಿಗೆ ಪಂಚಾಯಿತಿ ವತಿಯಿಂದ ಈಗಾಗಲೇ ನೀಡಿರುವ ಇ-ಸ್ವತ್ತು (ಇ-ಖಾತಾ) ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಸ್ವತ್ತಿನ ಆಸ್ತಿತೆರಿಗೆಯ ಎಸ್.ಎ.ಎಸ್. ಅರ್ಜಿ ಸಂಖ್ಯೆಯನ್ನು ಹುಡುಕಿಕೊಂಡು ಪಾಲಿಕೆಯ ಆಸ್ತಿತೆರಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಒಮ್ಮೆ ನೀವು ಪ್ರಸ್ತುತ ಸಾಲಿನವರೆಗಿನ ಆಸ್ತಿ ತೆರಿಗೆಯನ್ನು ಪಾವತಿಸಿದ ನಂತರ ತಾವು ಬಿಬಿಎಂಪಿಯಿಂದ ಇ-ಖಾತಾವನ್ನು ಪಡೆಯಬಹುದಾಗಿರುತ್ತದೆ. ಒಂದು ಬಾರಿ ಪರಿಹಾರ ಯೋಜನೆ ಅಡಿಯಲ್ಲಿ ನೀವು ಸಂಪೂರ್ಣ ಬಡ್ಡಿ ಮನ್ನಾವನ್ನು ಪಡೆಯುತ್ತೀರಿ ಎಂದು ಅವರು ವಿವರಿಸಿದರು.
ಹೊಸಬರು ಇ-ಖಾತಾ ಹೇಗೆ ಪಡೆಯಬೇಕು
ಇ-ಖಾತಾ ರಚನೆಯ ಮಾಹಿತಿಯನ್ನು ನೀವು ಅಕ್ಕಪಕ್ಕದವರಿಗೂ ತಿಳಿಸಬೇಕು. ಪ್ರತಿಯೊಬ್ಬರಿಗೂ ಈ ಮಾಹಿತಿ ಆಧರಿಸಿಪ್ರಸ್ತುತ ಸಾಲಿನವರೆಗೆ ಆಸ್ತಿ ತೆರಿಗೆಯನ್ನು (bbmptax.karnataka.gov.in) ಪಾವತಿಸುವ ಮೂಲಕ ತಮ್ಮ ಬಿಬಿಎಂಪಿ ಇ-ಖಾತಾವನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ಸದರಿ ಪಟ್ಟಿಯಲ್ಲಿ ಸ್ವತ್ತುಗಳು ಇಲ್ಲದಿರುವವರು ಹೊಸ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದರಿ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಲೇಮಾಡಿ ಇ-ಖಾತಾವನ್ನು ನೀಡಲಾಗುತ್ತದೆ. ಇದರೊಂದಿಗೆ ಆಸ್ತಿ ತೆರಿಗೆ ಪಾವತಿಸಬೇಕಾದವರು, ಶೀಘ್ರವೇ ಪಾವತಿಸಿ, ಇ-ಖಾತಾ ಕುರಿತು ಖಚಿತತೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications