10 ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದ ಆಟೋ ಡ್ರೈವರ್
ಬೆಂಗಳೂರು, ನವೆಂಬರ್ 2: ಕಳ್ಳರನ್ನು ಹಿಡಿಯುವುದು ಪೊಲೀಸರ ಕೆಲಸ, ನಮ್ಮಿಂದ ಎಲ್ಲಾಗುತ್ತೆ ಎನ್ನುವ ಮನಸ್ಸು ಮಾಡದೆ, ಕಳ್ಳಿಯರನ್ನು ಹಿಡಿಯಲೇ ಬೇಕು ಎನ್ನುವ ನಿರ್ಧಾರ ಮಾಡಿ ಹತ್ತು ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಒಬ್ಬ ಆಟೋ ಡ್ರೈವರ್ನ ನಿಜವಾದ ಕತೆ ಇದೆ.
ಕೈಲಿದ್ದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರ ಹಿಂದೆ 10 ಕಿ.ಮೀ ಓಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಬ್ರಮಣಿ ಎಂಬ ಆಟೋ ಚಾಲಕರು ಹಲಸೂರಿನಿಂದ ಇಂದಿರಾನಗರದವರೆಗೂ ಬೈಕ್, ಆಟೋ, ಬಸ್ ನಲ್ಲಿ ಬೆನ್ನಟ್ಟಿ ಹೋಗಿ ಮೂರು ಕಳ್ಳಿಯರನ್ನು ಹಿಡಿದಿದ್ದಾರೆ. ಚಿಮನ್, ರೇಖಾ, ಸೋನಮ್ ಬಂಧಿತ ಆರೋಪಿಗಳು.
ಸುಬ್ರಮಣಿ, ತನ್ನ ಪತ್ನಿ ವಿದ್ಯಾ ಮತ್ತು ಮಗನ ಜೊತೆ ಕೆಜಿಎಫ್ ತೆರಳಲು ಹಲಸೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅತ್ತೆಯ ಆಸ್ಪತ್ರೆ ಖರ್ಚಿಗಾಗಿ ಡ್ರಾ ಮಾಡಿದ್ದ 30 ಸಾವಿರ ರೂಪಾಯಿಯನ್ನು ವಿದ್ಯಾ ತನ್ನ ಪರ್ಸಿನಲ್ಲಿ ಇರಿಸುತ್ತಿದ್ದಾಗ ಮೂವರು ಕಳ್ಳಿಯರು ಬಂದು ಆ ಹಣವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು.

ಈ ವಿಷಯ ಗೊತ್ತಾದ ತಕ್ಷಣ ಹೆಂಡತಿ-ಮಗನನ್ನು ಬಸ್ನಲ್ಲಿಯೇ ಬಿಟ್ಟು ಕೆಳಗಿಳಿದು ಬೈಕ್ ಸವಾರನ ಸಹಾಯದಿದ, ಬೈಯಪ್ಪನಹಳ್ಳಿಯಲ್ಲಿ ಕಳ್ಳಿಯರು ಹತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ಲಿಸಿದ್ದರು.
ಆದರೆ ಅವರು ಇಂದಿರಾ ನಗರದಲ್ಲಿಯೇ ಇಳಿದುಕೊಂಡಿದ್ದಾರೆ ಎಂಬುದು ತಿಳಿದ ತಕ್ಷಣ ತನ್ನ ಸ್ನೇಹಿತನ ಆಟೋದಲ್ಲಿ ಬೆನ್ನಟ್ಟಲು ಶುರು ಮಾಡಿದ್ದರು. ಬಳಿಕ ಕದಿರನಪಾಳ್ಯದಲ್ಲಿ ಮೂವರನ್ನು ತಡೆದು ನಿಲ್ಲಿಸಿದ ಅವರಲ್ಲಿದ್ದ ಹಣವನ್ನು
ತೆಗೆದುಕೊಂಡರು. ಈ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳಿಕ ಕಳ್ಳಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications