10 ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದ ಆಟೋ ಡ್ರೈವರ್
ಬೆಂಗಳೂರು, ನವೆಂಬರ್ 2: ಕಳ್ಳರನ್ನು ಹಿಡಿಯುವುದು ಪೊಲೀಸರ ಕೆಲಸ, ನಮ್ಮಿಂದ ಎಲ್ಲಾಗುತ್ತೆ ಎನ್ನುವ ಮನಸ್ಸು ಮಾಡದೆ, ಕಳ್ಳಿಯರನ್ನು ಹಿಡಿಯಲೇ ಬೇಕು ಎನ್ನುವ ನಿರ್ಧಾರ ಮಾಡಿ ಹತ್ತು ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಒಬ್ಬ ಆಟೋ ಡ್ರೈವರ್ನ ನಿಜವಾದ ಕತೆ ಇದೆ.
ಕೈಲಿದ್ದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ ಕಳ್ಳರ ಹಿಂದೆ 10 ಕಿ.ಮೀ ಓಡಿ ಕೊನೆಗೂ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಬ್ರಮಣಿ ಎಂಬ ಆಟೋ ಚಾಲಕರು ಹಲಸೂರಿನಿಂದ ಇಂದಿರಾನಗರದವರೆಗೂ ಬೈಕ್, ಆಟೋ, ಬಸ್ ನಲ್ಲಿ ಬೆನ್ನಟ್ಟಿ ಹೋಗಿ ಮೂರು ಕಳ್ಳಿಯರನ್ನು ಹಿಡಿದಿದ್ದಾರೆ. ಚಿಮನ್, ರೇಖಾ, ಸೋನಮ್ ಬಂಧಿತ ಆರೋಪಿಗಳು.
ಸುಬ್ರಮಣಿ, ತನ್ನ ಪತ್ನಿ ವಿದ್ಯಾ ಮತ್ತು ಮಗನ ಜೊತೆ ಕೆಜಿಎಫ್ ತೆರಳಲು ಹಲಸೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅತ್ತೆಯ ಆಸ್ಪತ್ರೆ ಖರ್ಚಿಗಾಗಿ ಡ್ರಾ ಮಾಡಿದ್ದ 30 ಸಾವಿರ ರೂಪಾಯಿಯನ್ನು ವಿದ್ಯಾ ತನ್ನ ಪರ್ಸಿನಲ್ಲಿ ಇರಿಸುತ್ತಿದ್ದಾಗ ಮೂವರು ಕಳ್ಳಿಯರು ಬಂದು ಆ ಹಣವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು.

ಈ ವಿಷಯ ಗೊತ್ತಾದ ತಕ್ಷಣ ಹೆಂಡತಿ-ಮಗನನ್ನು ಬಸ್ನಲ್ಲಿಯೇ ಬಿಟ್ಟು ಕೆಳಗಿಳಿದು ಬೈಕ್ ಸವಾರನ ಸಹಾಯದಿದ, ಬೈಯಪ್ಪನಹಳ್ಳಿಯಲ್ಲಿ ಕಳ್ಳಿಯರು ಹತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ಲಿಸಿದ್ದರು.
ಆದರೆ ಅವರು ಇಂದಿರಾ ನಗರದಲ್ಲಿಯೇ ಇಳಿದುಕೊಂಡಿದ್ದಾರೆ ಎಂಬುದು ತಿಳಿದ ತಕ್ಷಣ ತನ್ನ ಸ್ನೇಹಿತನ ಆಟೋದಲ್ಲಿ ಬೆನ್ನಟ್ಟಲು ಶುರು ಮಾಡಿದ್ದರು. ಬಳಿಕ ಕದಿರನಪಾಳ್ಯದಲ್ಲಿ ಮೂವರನ್ನು ತಡೆದು ನಿಲ್ಲಿಸಿದ ಅವರಲ್ಲಿದ್ದ ಹಣವನ್ನು
ತೆಗೆದುಕೊಂಡರು. ಈ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳಿಕ ಕಳ್ಳಿಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications