ಕಚೇರಿಯಲ್ಲೇ ಬಿಬಿಎಂಪಿ ಅರಣ್ಯ ಅಧಿಕಾರಿ ಮೇಲೆ ಹಲ್ಲೆ !
ಬೆಂಗಳೂರು, ಮಾರ್ಚ್ 12: ಬಿಬಿಎಂಪಿ ಅರಣ್ಯ ಅಧಿಕಾರಿ ಮೇಲೆ ಗುತ್ತಿಗೆದಾರ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಅಧಿಕಾರಿಯನ್ನು ಸರ್ಕಾರಿ ಕಚೇರಿಯಲ್ಲಿಯೇ ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಈ ಸಂಬಂಧ ಅರಣ್ಯ ಅಧಿಕಾರಿ ರಾಜಪ್ಪ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಚನ್ನಪ್ಪ, ಗೋವಿಂದಯ್ಯ ಹಾಗೂ ಶ್ರೀನಿವಾಸ್ ವಿರುದ್ಧ ಹಲಸೂರು ಗೇಟ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದಾಸರಹಳ್ಳಿ ವಲಯದ ಅರಣ್ಯ ಅಧಿಕಾರಿ ರಾಜಪ್ಪ ಕೆಲಸದ ನಿಮಿತ್ತ ಬಿಬಿಎಂಪಿ ಮುಖ್ಯ ಕಚೇರಿಯ ಅರಣ್ಯ ವಿಭಾಗಕ್ಕೆ ಬಂದಿದ್ದರು. ಮಾರ್ಚ್ 04 ರಂದು ಪ್ರಕರಣದ ವಿಚಾರಣೆ ಸಂಬಂಧ ಗುತ್ತಿಗೆದಾರ ಚನ್ನಪ್ಪ, ಗೋವಿಂದಯ್ಯ, ಶ್ರೀನಿವಾಸ್ ಕೂಡ ಬಿಬಿಎಂಪಿ ಮುಖ್ಯ ಕಚೇರಿಗೆ ಬಂದಿದ್ದರು.

ಹಳೇ ಕೇಸ್ ಸಂಬಂಧ ಹಣ ನೀಡುವಂತೆ ಅರಣ್ಯ ಅಧಿಕಾರಿ ರಾಜಪ್ಪ ಅವರ ಬಳಿ ಮಾತುಕತೆ ನಡೆದಿದೆ. ಈ ವೇಳೆ ರಾಜಪ್ಪ ಅವರ ಮೇಲೆ ಮೂವರು ಹಲ್ಲೆ ಮಾಡಿದ್ದು ಸಿಸಿಟಿವಿಯಲ್ಲಿ ದಾಕಲಾಗಿದೆ. ರಾಜಪ್ಪ ಸಿಸಿಟಿವಿ ದೃಶ್ಯ ಆಧರಿಸಿ ಪ್ರಕರಣ ದಾಖಲಿಸಿದ್ದು, ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications