Chaddi Gang: ಬೆಂಗಳೂರಿಂದ ಹೊರಗೆ ಒಬ್ಬೊಬ್ಬರೇ ಓಡಾಡ್ತೀರಾ? ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು!

ಬೆಂಗಳೂರು: ದಿನದಿಂದ ದಿನಕ್ಕೆ ಕ್ರಿಮಿನಲ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ದರೋಡೆಕೋರರ ಕಾಟಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಹೀಗೆ ಬೆಂಗಳೂರು ಕೂಡ ಹಲವು ಪಾತಕ ಕೃತ್ಯಗಳಿಗೆ ಸಾಕ್ಷಿಯಾಗ್ತಿದ್ದು, ರಾತ್ರಿ ರಸ್ತೆಗಳಲ್ಲಿ ಓಡಾಡುವವರನ್ನು ಅಡ್ಡ ಹಾಕಿ ದರೋಡೆ ಮಾಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಹೊರವಲಯದ ಕಡೆ ನೀವು ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ.

ಬೆಂಗಳೂರು ನಗರ ವಿಶಾಲವಾಗಿ ಬೆಳೆದ ನಂತರ ಹೊರವಲಯ ಕೂಡ ಅಭಿವೃದ್ಧಿ ಆಗಿದೆ. ಅದು ಯಾವ ಮಟ್ಟಿಗೆ ಎಂದರೆ, ಕೇವಲ 10-15 ವರ್ಷದ ಹಿಂದೆ ಕಾಡು, ಹಳ್ಳಿಯಂತಿದ್ದ ಜಾಗಗಳು ಈಗ ಬೆಂಗಳೂರು ನಗರವನ್ನೂ ಮೀರಿಸುವ ಹಂತಕ್ಕೆ ಬೆಳೆದಿವೆ. ಹೀಗಾಗಿ ಜನರು ಕೂಡ ಬೆಂಗಳೂರು ನಗರ ಬಿಟ್ಟು ಹೊರವಲಯದ ಪ್ರದೇಶದಲ್ಲಿ ಜಾಗ, ಇಲ್ಲ ಮನೆಗಳನ್ನ ಕೊಂಡು ಸೆಟಲ್ ಆಗುತ್ತಿದ್ದಾರೆ. ಆದರೆ ಹೀಗೆ ಬೇರೆ ಕಡೆಯಿಂದ ಬಂದು ಸೆಟಲ್ ಆದವರ ಮೇಲೆ ಕಣ್ಣು ಹಾಕಿರುವ ದರೋಡೆಕೋರರ ಗುಂಪು, ರಾತ್ರಿ ವೇಳೆ ಅಡ್ಡ ಹಾಕಿ ದರೋಡೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಬಿಡಿ ಈಗ ಹಗಲು ಹೊತ್ತಲ್ಲೇ ರಾಬರಿ ಶುರುವಾಗಿದೆ!

Attack on a car in outskirts

ಸರ್ಜಾಪುರ-ವರ್ತೂರು ರಸ್ತೆಯಲ್ಲಿ ದರೋಡೆ ಯತ್ನ!

ಹೌದು, ಬೆಂಗಳೂರಿನಿಂದ ಕೇವಲ 30 ಕಿಲೋ ಮೀಟರ್ ಅಂತರದಲ್ಲಿರುವ ಸರ್ಜಾಪುರ-ವರ್ತೂರು ರಸ್ತೆಯಲ್ಲಿ ದರೋಡೆಕೋರರ ಹಾವಳಿ ಮಿತಿಮೀರಿದೆ. ಇಷ್ಟುದಿನ ಬರೀ ರಾತ್ರಿ ವೇಳೆ ಆಕ್ಟಿವ್ ಆಗಿರುತ್ತಿದ್ದ ಇವರೆಲ್ಲಾ, ಈಗ ಹಗಲು ಅಂದ್ರೆ ಬೆಳ್ಳಂಬೆಳಗ್ಗೆ ಆಕ್ಟೀವ್ ಆಗಿ ಕಳ್ಳತನಕ್ಕೆ ನುಗ್ಗುತ್ತಿದ್ದಾರೆ. ಹೀಗೆ ಕಾರ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ಹಿಂಬಾಲಿಸಿದ್ದ ಕೆಲ ದರೋಡೆಕೋರರ ಗುಂಪು ಪೊಲೀಸರ ಅತಿಥಿಯಾಗಿದೆ. ಘಟನೆ ಬಗ್ಗೆ ವಿಡಿಯೋ ಮಾಡಿದ್ದ ಕಾರ್ ಮಾಲೀಕರು, ಬೆಂಗಳೂರು ಪೊಲೀಸರಿಗೆ ಟ್ವೀಟ್ ಟ್ಯಾಗ್ ಮಾಡಿ ಘಟನೆಯ ಮಾಹಿತಿ ನೀಡಿದ್ದರು.

ಸುಮ್ಮನೆ ಹೋಗುತ್ತಿದ್ದಾಗಲೇ ಕಿರಿಕ್!

ಸರ್ಜಾಪುರ-ವರ್ತೂರು ರಸ್ತೆ ಕೆಲ ವರ್ಷದಿಂದ ಅಭಿವೃದ್ಧಿ ಕಾಣುತ್ತಿದೆ. ಹೀಗಾಗಿಯೇ ಇಲ್ಲಿ ಇನ್ನೂ ಹಳ್ಳಿಯ ವಾತಾವರಣ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿ ಗುಂಪು, ನಿತ್ಯವೂ ಅಮಾಯಕರನ್ನ ಹೆದರಿಸಿ & ಬೆದರಿಸಿ ದರೋಡೆ ಮಾಡುತ್ತಿದ್ದಾರೆ. ಹೀಗೆ ಕಾರೊಂದನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಲ್ವರು ಕಿರಾತಕರ ಗುಂಪು, ಮೊದಲಿಗೆ ಕಾರ್‌ಗೆ ಗುದ್ದಿಸಿ ಕಿರಿಕ್ ತೆಗೆಯೋದಕ್ಕೆ ನೋಡಿದೆ. ಆದರೆ ಕಾರು ಚಾಲಕ ಇದನ್ನು ಅರ್ಥ ಮಾಡಿಕೊಂಡು ಬಚಾವ್ ಆಗಿದ್ದಾನೆ. ಮುಂದೆ ಹೋಗಿ ಕಾರನ್ನು ಅಡ್ಡ ಹಾಕಿ ದರೋಡೆಗೆ ಯತ್ನಿಸಿದ್ದು, ತಕ್ಷಣ ಕಾರು ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ.

ದರೋಡೆ ಆರೋಪಿಗಳು ಕಂಬಿ ಹಿಂದೆ!

ಇನ್ನು ಈ ಬಗ್ಗೆ ವಿಡಿಯೋ ಟ್ವೀಟ್ ಮಾಡುತ್ತಿದ್ದಂತೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದರು. ಅಲ್ಲದೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು ಕಂಬಿ ಹಿಂದೆ ತಳ್ಳಿದ್ದಾರೆ. ಅಲ್ಲದೆ ಆರೋಪಿಗಳ ಫೋಟೋ ಟ್ವೀಟ್ ಮಾಡಿ, ಘಟನೆಯಲ್ಲಿ ಸಂತ್ರಸ್ತರಾಗಿದ್ದ ವ್ಯಕ್ತಿಗೂ ಮಾಹಿತಿ ನೀಡಿದ್ದಾರೆ. ಆದರೆ ಈಗ ವಿಡಿಯೋ ನೋಡುತ್ತಿರುವ ಜನ ಭಯಗೊಂಡಿದ್ದು, ಬೆಂಗಳೂರಿನ ಹೊರಗೆ ಹೇಗಪ್ಪಾ ಹೋಗೋದು ಅಂತಾ ಚಿಂತೆ ಮಾಡುವಂತಾಗಿದೆ.

Attack on a car in outskirts

ಚಡ್ಡಿ ಗ್ಯಾಂಗ್ ಹಾವಳಿ ಜೋರು!

ಇದಿಷ್ಟೂ ಒಂದು ಕಡೆಯಾದರೆ, ಇನ್ನೊಂದು ಕಡೆ ಬೆಂಗಳೂರು ಹೊರವಲಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಹಾವಳಿ ಜೋರಾಗುತ್ತಿದೆ. ಸರ್ಜಾಪುರ ರಸ್ತೆ ಸುತ್ತಮುತ್ತಲೂ ಚಡ್ಡಿ ಗ್ಯಾಂಗ್‌ನ ಹಾವಳಿ ಜೋರಾಗಿದೆ. ಕೈಯಲ್ಲಿ ಆಯುಧ ಹಿಡಿದು ಕಳ್ಳತನಕ್ಕೆ ಇಳಿಯುತ್ತಿರುವ ಈ ಗ್ಯಾಂಗ್ ಜನರನ್ನ ಭಯಪಡಿಸುತ್ತಿದೆ. ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಗ್ಯಾಂಗ್‌ನ ಸದಸ್ಯರು ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಹೆಜ್ಜೆ ಹಾಕಿದ್ದಾರೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನ ನಡೆದಿತ್ತು. ಆದರೆ ಕೆಲವು ತಿಂಗಳಿಂದ ಚಡ್ಡಿ ಗ್ಯಾಂಗ್ ಕಾಟ ತಪ್ಪಿತ್ತಾದರೂ ಈಗ ಮತ್ತೆ ಶುರುವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+