ಕೆಂಪೇಗೌಡ ವಿ.ನಿಲ್ದಾಣದಲ್ಲಿ 24X 7 ಆರೋಗ್ಯ ಸೇವೆ ಈಗ ಲಭ್ಯ
ಬೆಂಗಳೂರು, ಜುಲೈ 17: ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣ ವ್ಯಾಪ್ತಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಆಸ್ಟೆರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ಮುಂದಾಗಿದೆ. ಈ ಕುರಿತಂತೆ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಬಿಐಎಎಲ್) ಜತೆಗೆ ಏಳು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಯಾಣಿಕರ ಒತ್ತಡವನ್ನು ಗಣನೆಗೆ ತೆಗೆದುಕೊಂಡರೆ ಇದು ದೆಹಲಿ ಮತ್ತು ಮುಂಬೈ ನಂತರ ಮೂರನೇ ಅತಿ ಪ್ರಯಾಣಿಕ ದಟ್ಟಣೆ ಇರುವ ವಿಮಾನ ನಿಲ್ದಾಣವಾಗಿದೆ. [ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ]
24 ಗಂಟೆ ಸೇವೆ: ಒಪ್ಪಂದದ ಅನುಸಾರ ಅಸ್ಟೇರ್ ಡಿಎಂ ಹೆಲ್ತ್ ಕೇರ್ ಬಿಐಎಎಲ್ ನಲ್ಲಿ ದಿನದ 24 ಗಂಟೆಯ ಏರ್ಪೋರ್ಟ್ ಕ್ಲಿನಿಕ್ ಹೊಂದಲು, ತುರ್ತು ಸೇವೆಯನ್ನು ಒದಗಿಸಲು, ಗುಣಮಟ್ಟದ ಆರೋಗ್ಯ ಸೇವೆಯನ್ನು ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ಒದಗಿಸಲು ನೆರವಾಗಲಿದೆ. ಹೆಲ್ತ್ ಕೇರ್ ಗ್ರೂಪ್ ಇದರ ಜೊತೆಗೆ 2017ರ ವೇಳಗೆ ಸ್ಟ್ಯಾಂಡ್ ಅಲೋನ್ ವೈದ್ಯಕೀಯ ಸೇವೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಿದೆ. [ವಿಮಾನ ನಿಲ್ದಾಣಕ್ಕೆ ಚಾಲುಕ್ಯರ, ರಾಷ್ಟ್ರಕೂಟರ ಹೆಸರಿಡಿ: ಪಾಪು]

ಅಸ್ಟೇರ್ ಸಿಎಂಐ ಹಾಸ್ಪಿಟಲ್ ನ ಸಿಇಒ ಡಾ.ನಿತೀಶ್ ಶೆಟ್ಟಿ: ಆಸ್ಟೇರ್ ಸಿಎಂಐ ಹಾಸ್ಪಿಟಲ್ ಉದ್ದೇಶಿತ ಒಡಂಬಡಿಕೆ ಕುರಿತು ಹೆಚ್ಚು ಸಂತಸಕರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯತಾಣಿಕರು ಸೇರಿದಂತೆ ಉತ್ತಮಸೇವೆ ಸಲ್ಲಿಸಲು ಇದೊಂದು ಅವಕಾಶ. ಇದನ್ನು ಬೆಂಗಳೂರು ಅತ್ಯುತ್ತಮ ಆರೋಗ್ಯಸೇವೆ ಒದಗಿಸುವ ನಗರ ಎಂಬುದನ್ನು ಬಿಂಬಿಸಲು ಬಳಸಿಕೊಳ್ಳಲಿದ್ದೇವೆ.[ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಓಲಾ ಜೋನ್]
ಬಿಐಎಎಲ್ ಹಿರಿಯ ನಿರ್ದೇಶಕ (ಹಣಕಾಸು ಮತ್ತು ಸೇವೆಗಳು) ಭಾಸ್ಕರ್ ಬೊಡಪಟಿ : ಬಿಐಎಎಲ್ ಎಂದಿಗೂ ಗುಣಮಟ್ಟ ಮತ್ತು ಸುರಕ್ಷಿತ ಸೇವೆಯನ್ನು ಎಲ್ಲ ಭಾಗಿದಾರರಿಗೆ ಒದಗಿಸಲು, ಮುಖ್ಯವಾಗಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಬದ್ಧವಾಗಿದೆ. ಈ ಕಾರ್ಯತಂತ್ರದ ಒಡಂಬಡಿಕೆ ಮೂಲಕ ಆಸ್ಟೇರ್ ಗ್ರೂಪ್, ಈ ಬದ್ಧತೆಯನ್ನು ಬಲಯುತಗೊಳಿಸುವಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ವಿಮಾನನಿಲ್ದಾಣ ಮೂಲಕ ಪಯಣಿಸುವ ದಿನದ 24 ಗಂಟೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಸ್ವೀಕರಿಸಲಿದ್ದಾರೆ' ಎಂದರು.[ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಸಾಧನೆ ಗರಿ]
ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಬೆಂಗಳೂರು (ಕೆಐಎಬಿ) ಅತ್ಯುತ್ತಮ ಮಾರ್ಗವಾಗಿ ದಕ್ಷಿಣ ಭಾರತದ ಅತ್ಯುತ್ತಮ ಜನನಿಬಿಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದೆ. ಕೆಐಎಬಿ ಶೇ 25.2ರಷ್ಟು ಪ್ರಯಾಣಿಕ ದಟ್ಟಣೆ, ಶೇ 12.7ರಷ್ಟು ವಿಮಾನ ಯಾನ ದಟ್ಟಣೆಯನ್ನು 2015ರಲ್ಲಿ ದಾಖಲಿಸಿದೆ. ಇತ್ತೀಚೆಗೆ ವಿಮಾನ ನಿಲ್ದಾಣವು 100 ಮಿಲಿಯನ್ ಪ್ರಯಾಣಿಕರು, ಎಂಟು ವರ್ಷದ ಅವಧಿಯಲ್ಲಿ ದಾಖಲಿಸಿದೆ ಎಂದರು. ಈ ಗಣನೀಯ ಸಂಖ್ಯೆ ಸುಸಜ್ಜಿತವಾದ ಆರೋಗ್ಯ ಸೇವೆ ಹೊಂದುವುದರ ಅಗತ್ಯ ಪ್ರತಿಪಾದಿಸಿದೆ ಎಂದು ಹೇಳಿದರು.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications