ನ.18ಕ್ಕೆ ಕೆ.ಎಸ್.ನ.ಟ್ರಸ್ಟ್ ನಿಂದ ಕವಿಪತ್ನಿ ದಿನಾಚರಣೆ: ವಿಭಿನ್ನ ಕಾರ್ಯಕ್ರಮ

ಕನ್ನಡ ಭಾಷೆಯ ಸೊಗಡನ್ನು ಪರಿಚಯಿಸಿದ, ಅದರ ಹಿರಿಮೆಯನ್ನು ಉತ್ತುಂಗಕ್ಕೇರಿಸಿದ ಹಲವು ಕವಿ, ಸಾಹಿತಿಯರು ಕರ್ನಾಟಕದ ಮಣ್ಣಲ್ಲಿ ತಮ್ಮ ಅಮೂಲ್ಯ ಬದುಕ್ನು ಸವೆಸಿ ಹೋಗಿದ್ದಾರೆ. ಕನ್ನಡ ಭಾಷಾ ಸಂಪತ್ತನ್ನು ಶ್ರೀಮಂತವಾಗಿಸುತ್ತಿರುವ ಕವಿಗಳು ಈಗಲೂ ಹಲವರಿದ್ದಾರೆ. ಆದರೆ ಆ ಎಲ್ಲ ಕವಿಗಳಿಗೆ ಬೆನ್ನೆಲುಬಾಗಿ ನಿಂತು, ಅಡಿಗಡಿಗೆ ಪ್ರೋತ್ಸಾಹ ನೀಡಿ, ಅವರ ಸಾಧನೆಯ ಪಾಲುದಾರರಾದ ಎಷ್ಟೋ ಕವಿಯರ ಪತ್ನಿಯರ ಪರಿಚಯ ಮಾತ್ರ ಯಾರಿಗೂ ಇಲ್ಲ!

ಪ್ರಸಿದ್ಧ ಕವಿಗಳ ಸಾಹಿತ್ಯ ಬದುಕಿಗೆ ಮಾರ್ಗದರ್ಶಿಗಳಾದ, ಸ್ಫೂರ್ತಿಯಾದ ಕವಿಪತ್ನಿಯರಿಗೆ ಗೌರವ ನೀಡುವ ವಿನೂತ ನಾರ್ಯಕ್ರಮವೊಂದನ್ನು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಆರಂಭಿಸಿದೆ. ಕವಿಪತ್ನಿಯರಿಗೆ ಪ್ರತಿವರ್ಷ, ವೆಂಕಮ್ಮ ಕೆ.ಎಸ್.ನರಸಿಂಹಸ್ವಾಮಿ ನೆನಪಿನ 'ನಿನ್ನೊಲುಮೆಯಿಂದಲೇ' ಗೌರವವನ್ನು ನೀಡಿ ಸನ್ಮಾನಿಸುವ ಯೊಜನೆ ಹಮ್ಮಿಕೊಳ್ಳಲಾಗಿದೆ. ದಾಂಪತ್ಯ ಕವಿ.ಕೆ.ಎಸ್.ನ. ಅವರ ಪತ್ನಿ ವೆಂಕಮ್ಮ ಅವರ ಜನ್ಮದಿನದಂದು ಈ ಗೌರವ ಪ್ರದಾನ ಕಾರ್ಯಕ್ರಮವಿರುತ್ತದೆ. ಈ ಗೌರವವನ್ನು ಈ ಬಾರಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕವಿ ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮಾ ಚಂದ್ರಶೇಖರ ಕಂಬಾರರಿಗೆ ನೀಡಲಾಗುತ್ತಿದೆ.

An honour to Kannada poets' wives by K.S.Narasimhaswamy trust

ನವೆಂಬರ್ 18 ರಂದು, ಶನಿವಾರ ಸಂಜೆ 5:30 ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎನ್ ಎನ್ ಮಲ್ಟಿಮೀಡಿಯಾ ಹಾಲ್ ನಲ್ಲಿ 'ನಿನ್ನೊಲುಮೆಯಿಂದಲೇ...' ಗೌರವ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್(ರಿ.) ಅಧ್ಯಕ್ಷರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ವಿಮರ್ಶಕಿ ಎಂ.ಎಸ್.ಆಶಾದೇವಿ, ಎಂ.ವಿ.ವೆಂಕಟೇಶಮೂರ್ತಿ ಉಪಸ್ಥಿತರಿರುತ್ತಾರೆ.

An honour to Kannada poets' wives by K.S.Narasimhaswamy trust

ಕೆ.ಎಸ್.ನರಸಿಂಹಸ್ವಾಮಿ ಅವರ ಮೊಮ್ಮಗಳಾದ ಡಾ.ಮೇಖಲಾ ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಅನುಶ್ರೀ, ಹೇಮಾ ಎಂಬುವವರು ಕೆ.ಎಸ್.ನ. ಅವರ ಪದ್ಯಗಳನ್ನು ಹಾಡಲಿದ್ದಾರೆ.

ದಾಂಪತ್ಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಹಿತ್ಯ ಬದುಕಿಗೆ ಸ್ಫೂರ್ತಿಯಾದ, ಅವರ ಬಹುಪಾಲು ಕವನಗಳಲ್ಲಿ ಬರುವ ಪಾತ್ರವಾದ ಅವರ ಪತ್ನಿ ವೆಂಕಮ್ಮ ಅವರ ಜನ್ಮದಿನದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+