ಬಿಜೆಪಿ ಜತೆಗಿನ 'ರಸ್ತೆ' ಜಗಳಕ್ಕಿಳಿದ ನಟಿ ರಮ್ಯಾ; ಟ್ವಿಟ್ಟರ್ ನಲ್ಲಿ ಟಾಂಗ್
ಅಹ್ಮದಾಬಾದ್ ನ ಹದಗೆಟ್ಟ ರಸ್ತೆಯೊಂದರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ ನಟಿ ರಮ್ಯಾ. ಬಿಜೆಪಿ ಕರ್ನಾಟಕವು ಭಾನುವಾರ (ಆಗಸ್ಟ್ 7) ಬೆಂಗಳೂರಿನ ರಸ್ತೆಗಳನ್ನು ಹದಗೆಟ್ಟಿವೆ ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಇದೀಗ ರ
ಬೆಂಗಳೂರು, ಆಗಸ್ಟ್ 8: ಬೆಂಗಳೂರಿನಲ್ಲಿ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಜಗಜ್ಜಾಹೀರು ಮಾಡುವ ಕೆಲಸಕ್ಕೆ ಹೈ ಹಾಕಿದ್ದ ಬಿಜೆಪಿ ಕರ್ನಾಟಕ ಐಟಿ ಸೆಲ್ ವಿರುದ್ಧ ಪ್ರತೀಕಾರಕ್ಕೆ ಕೈ ಹಾಕಿರುವ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, ತಾವೂ ಒಂದು ಫೋಟೋ ಹಾಕುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಯತ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಹ್ಮದಾಬಾದ್ ನಗರದಲ್ಲಿ ಉಂಟಾಗಿರುವ ಬೃಹತ್ ರಸ್ತೆ ಕುಸಿತದ ಫೋಟೋವೊಂದನ್ನು ಹಾಕಿ, 'ನಾಸಾ ವಿಜ್ಞಾನಿಗಳು ಚಂದ್ರನಲ್ಲಿ ದೊಡ್ಡ ಕುಳಿಯನ್ನು ಪತ್ತೆ ಮಾಡಿದವು. ಆದರೆ, ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆ ಕುಳಿ ಅಹ್ಮದಾಬಾದ್ ರಸ್ತೆಯದ್ದು ಎಂದು ಖಾತ್ರಿ ಪಡಿಸಿದೆ' ಎಂದು ಗೇಲಿ ಮಾಡಿದ್ದಾರೆ.

ಬಿಜೆಪಿ ಕರ್ನಾಟಕ ಐಟಿ ಸೆಲ್ ವಿಭಾಗವು, ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರಿನ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿತ್ತು. ಆದರೆ, ಅದು ಬೆಂಗಳೂರು ರಸ್ತೆಗಳ ಫೋಟೋ ಹಾಕುವ ಬದಲು ಮುಂಬೈನಲ್ಲಿರುವ ಅತಿ ಕೆಟ್ಟದಾದ, ದೊಡ್ಡದೊಡ್ಡ ಗುಂಡಿಗಳು ಇರುವ ರಸ್ತೆಯೊಂದರ ಫೋಟೋ ಹಾಕಿ ಅದನ್ನು ಬೆಂಗಳೂರು ರಸ್ತೆಯೆಂದು ಹೇಳಿತ್ತು.
The story goes.. NASA found a new crater on the moon, but later AMC confirmed it was a road in Ahmedabad/Amdavad pic.twitter.com/Uov95yfu6m
— Divya Spandana/Ramya (@divyaspandana) August 7, 2017
ಅಲ್ಲದೆ, ಚಿತ್ರದ ಕ್ಯಾಪ್ಷನ್ ನಲ್ಲಿ ನಾಸಾ ಸಂಸ್ಥೆಯು (ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಚಂದ್ರನ ಹೊಸತೊಂದು ದೊಡ್ಡ ಕುಳಿಯನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. ಆದರೆ, ಬೆಂಗಳೂರು ಮಹಾನಗರ ಪಾಲಿಕೆಯು, ಅದು ಬೆಂಗಳೂರಿನ ರಸ್ತೆಯಲ್ಲಿನ ಕುಳಿಯೆಂದು ಖಾತ್ರಿ ಪಡಿಸಿದೆ ಎಂದು ಹಾಕಿ ಕುಚೋದ್ಯ ಮಾಡಲಾಗಿತ್ತು.
ಆದರೆ, ಆ ಚಿತ್ರ ತಪ್ಪೆಂದೂ, ಅಸಲಿಗೆ ಆ ರಸ್ತೆಯ ಫೋಟೋ ಮುಂಬೈನ ರಸ್ತೆಯದ್ದೆಂದೂ ಹಲವಾರು ಟ್ವಿಟ್ಟಿಗರು ಪ್ರತಿಕ್ರಿಯೆ ನೀಡಿದ ನಂತರ, ಕಾಂಗ್ರೆಸ್ಸಿಗರ ಪಿತ್ತ ನೆತ್ತಿಗೇರಿ ಅವರೂ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದರು.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications