Vijayalakshmi: ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮೊದಲ ಶಾಕಿಂಗ್‌ ಪೋಸ್ಟ್‌

Vijayalakshmi: ರೇಣುಕಾಸ್ವಾಮಿ ಕೊಲೆ ಪ್ರಕರಣ ಬರೀ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಗಿದ್ದರೆ, ಎ2 ಆರೋಪಿ ನಟ ದರ್ಶನ್‌ ಆಗಿದ್ದಾನೆ. ಅಲ್ಲದೆ, ಈ ಪ್ರಕರಣದಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆ ತಮ್ಮ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ ಅವರು, ತನ್ನ ಹಾಗೂ ಮಗ, ಪತಿ ದರ್ಶನ್ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದು, ಈ ಬಗ್ಗೆ ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Actor Darshan Case First shocking post on Vijaya lakshmi Darshan Instagram account

ಕೊಲೆ ಆರೋಪದಲ್ಲಿ ದರ್ಶನ್‌ ಬಂಧವಾಗಿದ್ದರೂ ಅವನ ಪರ ಯಾವುದೇ ಕುಟುಂಬದವರು ನಿಂತಿಲ್ಲ. ಬದಲಾಗಿ ಪತ್ನಿ ವಿಜಯಲಕ್ಷ್ಮಿ ಒಬ್ಬರೇ ಅವರ ಪರವಾಗಿ ನಿಂತಿದ್ದು, ಅವರನ್ನು ಜೈಲಿನಿಂದ ಹೊರತರಲು ವಕೀಲರನ್ನು ನೇಮಿಸಿ ಒಬ್ಬೊಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಇದೀಗ ದೀಢರ್‌, ನನ್ನ, ಮಗ ಹಾಗೂ ದರ್ಶನ್‌ ಕುಟುಂಬಂದ ವಿರುದ್ಧ ಯಾವುದೇ ಸುಳ್ಳುಸುದ್ದಿಗಳನ್ನು ಪ್ರಕಟಿಸುವಂತಿಲ್ಲ ಎಂದು ಸ್ಟೇ ಆರ್ಡರ್‌ ತಂದಿದ್ದಾರೆ.

ಹೇಗಿದೆ ನಿನ್ ಟೈಂ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್‌ ಬಂಧನವಾಗಿದ್ದು, ಇದು ಬರೀ ರಾಜ್ಯ ಅಲ್ಲದೆ, ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ನಟ ದರ್ಶನ್‌ ಮೊದಲೆಲ್ಲ ಇಂಟರ್‌ವ್ಯೂವ್‌ಗಳಲ್ಲಿ ಕೊಡುತ್ತಿದ್ದ ದುರಂಹಕಾರದ ಹೇಳಿಕೆಗಳು ಇದೀಗ ಒಂದೊಂದೇ ಮುನ್ನೆಲೆಗೆ ಬರುತ್ತಿವೆ. ಇದರಲ್ಲೊಂದಾದ ಅಂತಾರಾಷ್ಟ್ರೀಯ ಪುಟ್ಬಾಲ್‌ ಆಟಗಾರರೊಬ್ಬರ ಕೈ ಗಡಿಯಾರದ ಹೇಳಿಕೆಯನ್ನು ಎಳೆತಂದಿದ್ದು, ಇದೀಗ ಇದು ಭಾರೀ ವೈರಲ್‌ ಆಗುತ್ತಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಒಬ್ಬ ಫ್ರಸಿದ್ದ ಪೋರ್ಚುಗೀಸ್ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರು ಕ್ರೀಡಾಂಗಣಕ್ಕೆ ಕಾಲಿಟ್ಟರೆ ಸಾಕು ಎದುರಾಳಿಗಳಿಗೆ ನಡುಕ ಶುರು ಗ್ಯಾರಂಟಿ. ಅಷ್ಟರ ಮಟ್ಟಿಗೆ ತಲೆ ಉಪಯೋಗಿಸಿ ಪುಟ್ಬಾಲನ್ನು ಕಾಲಿನಲ್ಲಿ ಬುಗರಿಯಂತೆ ಆಟ ಆಡಿಸುತ್ತಿದ್ದರು. ಕ್ರೀಡಾಂಗಣದಲ್ಲಿ ಇವರ ಬಳಿಗೆ ಬಾಲ್‌ ಹೋತೆಂದರೆ ಮುಗಿತು ಅದು ಗೋಲ್‌ ಫಿಕ್ಸ್‌ ಎನ್ನುವ ಲೆಕ್ಕಾಚಾರದಲ್ಲಿ ಎದುರಾಳಿ ತಂಡದವರ ತಲೆಗೆ ಬಂದುಬಿಡುತ್ತದೆ. ಅಲ್ಲದೆ, ಅವರು ಹೊಡೆಯುವ ಗೋಲ್‌ ತಡೆಯಬೇಕೆಂದರೆ ಕಷ್ಟಸಾಧ್ಯ.

ಇವರು ಆರಂಭದಲ್ಲಿ ತುಂಬಾ ಬಡಕುಟುಂಬದಿಂದ ಬೆಳೆದು ಬಂದವರಾಗಿದ್ದು, ಪುಟ್ಬಾಲ್‌ ಕ್ರೀಡೆಯಲ್ಲಿ ಇಡೀ ಜಗತ್ತೇ ತನ್ನ ಕಡೆ ತಿರುಗಿ ನೋಡುವಂತೆ ಮಾಡುತ್ತಾರೆ. ಅಲ್ಲದೆ, ಇತಿಹಾಸದ ಪುಟಗಳಲ್ಲಿಯೂ ಇವರ ಸಾಧನೆಗಳ ಸರಮಾಲೆಯೇ ಮೂಡಿವೆ. ಕ್ರೀಡೆ ಅಷ್ಟೇ ಅಲ್ಲದೆ, ಇವರು ಬಹುತೇಕ ಅನಾಥ ಹಾಗೂ ಬಡಮಕ್ಕಳಿಗೂ ಆಸರೆಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಬೇಕೆಂದವರಿಗೆ ಉತ್ತಮ ಆದರ್ಶವಾಗಿದ್ದಾರೆ.

ಆಗ ಕಡುಬಡತನ, ಈಗ ಕೋಟಿ.. ಕೋಟಿ ಶ್ರೀಮಂತನಾಗಿದ್ದರೂ ಕೂಡ ರೊನಾಲ್ಡೊ ಅವರಿಗೆ ಸ್ವಲ್ಪನೂ ದುರಹಂಕಾರವೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಸ್ವಲ್ಪಮಟ್ಟಿಗೆ ಬೆಳೆದರೆ ಸಾಕು ದುರಹಂಕಾರದ ಮಾತುಗಳು, ಬೇರೆಯವನ್ನು ನಿಂದಿಸುವ ಕೆಲಸವನ್ನು ಮಾಡುತ್ತಾರೆ. ಅದರಲ್ಲೂ, ಕೆಲವು ರಾಜಕಾರಣಿಗಳ ಮಕ್ಕಳು ಮತ್ತು ಸೆಲೆಬ್ರೆಟಿಗಳು. ಈ ಸಾಲಿಗೆ ನಟ ದರ್ಶನ್‌ ಕೂಡ ಸೇರಿದ್ದಾರೆ.

ಸಾಮಾನ್ಯವಾಗಿ ಇಂಟರ್‌ವ್ಯೂವ್‌ಗಳಲ್ಲಿ ತಾವು ನಡೆದುಬಂದ ಹಾದಿ ಹಾಗೂ ಮುಂದಿನ ಸಾಧನೆಗಳ ಬಗ್ಗೆ ಹೇಳಿಕೊಳ್ಳವುದನ್ನು ನೋಡಿದ್ದೇವೆ. ಆದರೆ ಕೆಲವೊಬ್ಬರು ಬೇರೆಯವರನ್ನು ಹೋಲಿಕೆ ಮಾಡಿಕೊಂಡು ಮಾತನಾಡುವ ಕೆಲಸವನ್ನು ಮಾಡುತ್ತಾರೆ.

ಕೆಲವು ವರ್ಷಗಳ ಹಿಂದೆಯಷ್ಟೇ, ನಟ ದರ್ಶನ್‌ ಅವರು ಇಂಟರ್‌ವ್ಯೂವ್‌ವೊಂದರಲ್ಲಿ ಮಾತನಾಡುತ್ತಾ ರೊನಾಲ್ಡೊ ಅವರ ಕೈಗಡಿಯಾರದ ವಿಚಾರವನ್ನು ತೆಗೆಯುತ್ತಾರೆ. ಈ ವಿಚಾರಗಳೆಲ್ಲ ಇದೀಗ ಮುನ್ನಲೆಗೆ ಬರಲು ಕಾರಣವೇ ರೇಣುಕಾಸ್ವಾಮಿ ಹತ್ಯೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+