ರೆಡ್ಡಿ ನೈಜ ಬಣ್ಣ ಬಯಲು ಮಾಡಲಿರುವ ಟಪಾಲ್ !
ಬೆಂಗಳೂರು, ನವೆಂಬರ್ 22: ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ಹಾಗೂ ಗಣಿ ಮಾಫಿಯಾದ ರೆಡ್ಡಿ ಸಹೋದರರ ವಿರುದ್ಧ ಮುಂಚೂಣಿಯಾಗಿ ಎದ್ದು ನಿಂತು ಸತತವಾಗಿ ಹೋರಾಡುತ್ತಾ ಬಂದಿರುವ ಟಪಾಲ್ ಗಣೇಶ್ ಅವರನ್ನು ಅಮ್ ಆದ್ಮಿ ಪಾರ್ಟಿ-ಕರ್ನಾಟಕ ಸಂತಸದಿಂದ ಬರಮಾಡಿಕೊಂಡಿದೆ.
ಟಪಾಲ್ ಗಣೇಶ್ ಅವರು ಮುಂದಿನ ದಿನಗಳಲ್ಲಿ ಆಪ್ ಕರ್ನಾಟಕದ ನಾಯಕರೊಡನೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಪರಂಪರಾಗತ ಭ್ರಷ್ಟ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಜನಾರ್ದನ ರೆಡ್ಡಿಯಂತಹ ಭ್ರಷ್ಟ ನಾಯಕರ ನೈಜ ಮುಖವನ್ನು ರಾಜ್ಯದ ಜನರಿಗೆ ನಿರೂಪಿಸಲಿದೆ ಎಂದು ಎಎಪಿ ಕರ್ನಾಟಕ ತನ್ನ ಪ್ರಕಟಣೆಯಲ್ಲಿ ಹೇಳಿದೆ. [ಗಾಲಿ ರೆಡ್ಡಿ ಬದ್ಧವೈರಿ ಟಪಾಲ್ ಗಣೇಶ್ ಈಗ 'ಆಮ್ ಆದ್ಮಿ' ]
ಬಳ್ಳಾರಿಯಲ್ಲಿ ನಡೆದ ಕಬ್ಬಿಣದ ಅದಿರು ಗಣಿಗಾರಿಕೆ ಅವ್ಯವಹಾರಗಳಿಗೆ ಜನಾರ್ದನ ರೆಡ್ಡಿಯೇ ಕಿಂಗ್ ಪಿನ್ ಎಂಬುದು ಇಡೀ ರಾಜ್ಯದ ಜನರಿಗೇ ತಿಳಿದಿರುವ ಸಂಗತಿ. ಆಪರೇಷನ್ ಕಮಲದ ಹೆಸರಲ್ಲಿ ಅನೈತಿಕ ರಾಜಕೀಯಕ್ಕೆ ನಾಂದಿ ಹಾಡಿ, ಬಿಜೆಪಿಯ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಮಾನಸ ಪುತ್ರ ಎಂದು ಕರೆಸಿಕೊಂಡರು. [ಗಾಲಿ ರೆಡ್ಡಿಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?]
2004ರ ವರೆಗೂ ತೆರಿಗೆಯನ್ನೇ ಕಟ್ಟದ ವ್ಯಕ್ತಿ ತನ್ನ ರಾಜಕೀಯ ಅಧಿಕಾರದ ಮದದಿಂದ ರಾಜ್ಯದ ನೈಸರ್ಗಿಕ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಮಾಡಿ ಹತ್ತಾರು ಸಾವಿರ ಕೋಟಿ ಹಣವನ್ನು ಅಕ್ರಮವಾಗಿ ಸಂಪಾದಿಸಿ ಸಿಬಿಐ ಹಾಗೂ ಲೋಕಾಯುಕ್ತದ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಇನ್ನೂ ಬಿಜೆಪಿ ತನ್ನ ಕಬಂಧಬಾಹುಗಳಿಂದ ರಕ್ಷಿಸುತ್ತಾ, ಬೆಂಬಲಿಸುತ್ತಾ ಬಂದಿದೆ.

ಹಣದ ಮೂಲ ಯಾವುದು? : ಮಾನ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆತುರದ ನಿರ್ಧಾರದಿಂದಾಗಿ ಇಡೀ ದೇಶದಲ್ಲಿ ಜನ ಸಾಮಾನ್ಯರ ಮದುವೆಗಳು ಮುಂದಕ್ಕೆ ಹೋಗುತ್ತಿದ್ದು, ಕೆಲವು ನಿಂತೇ ಹೋಗಿವೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಸಂಪತ್ತು ಲೂಟಿಮಾಡಿ ಗಳಿಸಿದ್ದ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಿ ತನ್ನ ಮಗಳ ಮದುವೆ ಮಾಡಿ ಮುಗಿಸಿರುವ ರೆಡ್ಡಿ, ಈ ಪ್ರಮಾಣದಲ್ಲಿ ಹಣವನ್ನು ಸಂಪಾದಿಸಿದ್ದಾದರೂ ಹೇಗೆ? ಈ ಮಟ್ಟದಲ್ಲಿ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದು ಹೇಗೆ? ಅವರ ಬ್ಯಾಂಕ್ ಖಾತೆಗಳನ್ನೆಲ್ಲಾ ಸಿಬಿಐ ತಡೆ ಹಿಡಿದಿರುವಾಗ ಈ ಹಣದ ಮೂಲ ಯಾವುದು?
AAP welcomes Shri Tapal Ganesh, amongst 1st persons 2 raise voice & amongst few people continuing to fight Janardhan Reddy & Real corruption pic.twitter.com/RzK7AIHeiD
— Prithvi Reddy (@aapkaprithvi) November 21, 2016
ಇಡೀ ದೇಶದ ಜನಸಾಮಾನ್ಯರನ್ನು ಬೀದಿಯಲ್ಲಿ ನಿಲ್ಲಿಸಿರುವ ನರೇಂದ್ರ ಮೋದಿಯವರ ಆತುರದ ನಿರ್ಧಾರ, ಜರ್ನಾರ್ದನ ರೆಡ್ಡಿ ತನ್ನ ಮಗಳ ಮದುವೆ ಮಾಡಲು ಯಾವುದೆ ಪರಿಣಾಮ ಬೀರಿಲ್ಲವೇ? ನರೇಂದ್ರ ಮೋದಿಯವರು ದೇಶಕ್ಕೆ ತಿಳಿಸುವ ಮುನ್ನವೇ ತಮ್ಮ ನಿರ್ಧಾರವನ್ನು ರೆಡ್ಡಿಗೆ ತಿಳಿಸಿ ಅವರ ಹಣ ಬದಲಾಯಿಸಿಲು ಅವಕಾಶ ಮಾಡಿ ಕೊಟ್ಟಿದ್ದರೇ? ಎಂಬ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಮೂಡುತ್ತಿದೆ.
ಕಪ್ಪು ಹಣದ ವಿರುದ್ಧ ಹೋರಾಟವೆಂದು ರೂಪಾಯಿ 500 ಹಾಗೂ 1000 ನೋಟುಗಳನ್ನು ಅನೂರ್ಜಿತಗೊಳಿಸಿ ಇಡೀ ದೇಶದ ಜನರನ್ನು ಭಿಕ್ಷುಕರಂತೆ ಬೀದಿ ನಿಲ್ಲಿಸಿರುವ ನರೇಂದ್ರ ಮೋದಿ ತಮ್ಮದೇ ಪಕ್ಷದ ಪ್ರಭಾವಿ ನಾಯಕನ ಕಪ್ಪುಹಣದ ಸ್ವೇಚ್ಛಾಚಾರದ ಪ್ರದರ್ಶನವನ್ನು ತಡೆಹಿಡಿಯಲು ವಿಫಲರಾಗಿದ್ದಾರೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications