ಬೆಂಗಳೂರಿನ ಬಸ್ಸಿನಲ್ಲಿ ಕಂಡ ಜಿನ್ನಾ ಚಿತ್ರ, ಅಸಲಿ ವಿಷ್ಯ ಏನು?
ಬೆಂಗಳೂರು, ಜುಲೈ 13: ಬೆಂಗಳೂರಿನ ಹೊಸೂರು ರಸ್ತೆಯ ಎಚ್ ಜಿಎಸ್ ರಸ್ತೆಯ ಬಳಿ ಸಂಚರಿಸುತ್ತಿದ್ದ ಬಸ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಗುರುವಾರದಂದು ವೈರಲ್ ಆಗುತ್ತಿದೆ.
Democracy ಎಂಬ ಹೆಸರಿನ ನಾಮಫಲಕ, ಹಸಿರುಬಣ್ಣ, ಹಿಂಬದಿಯಲ್ಲಿ ಮೊಹಮ್ಮದ್ ಆಲಿ ಜಿನ್ನಾ ಅವರ ಫೋಟೋ ಇರುವ ವಿಚಿತ್ರ ಬಸ್ ವೊಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

ಈ ಬಗ್ಗೆ ನೀರಜ್ ಕಾಮತ್ ಹಾಗೂ ಅಭಿಶೇಕ್ ಸಿಂಗ್ ಎಂಬುವರು ಫೇಸ್ ಬುಕ್ ನಲ್ಲಿ ಚಿತ್ರ ಸಮೇತ ವರದಿ ಮಾಡಿದ್ದಾರೆ. ಭಾಷಾ ಹೇರಿಕೆ ಬಗ್ಗೆ ಮಾತನಾಡುವ ಕನ್ನಡ ಪರ ಹೋರಾಟಗಾರರನ್ನು ಕೆಣಕಿದ್ದಾರೆ, ಎಲ್ಲಿದ್ದೀರಿ? ನಿಮಗೆ ನನ್ನ ಕಡೆಯಿಂದ ಗಿಫ್ಟ್ ಇದೆ ತೆಗೆದುಕೊಳ್ಳಿ.

ಪಾಕಿಸ್ತಾನದ ಜನಕ ಮೊಹಮ್ಮದ್ ಆಲಿ ಜಿನ್ನಾ ಚಿತ್ರವಿರುವ ಬಸ್ ಇಲ್ಲಿದೆ. ಡೆಮೋಕ್ರಾಸಿ ಎಂಬ ಬಸ್ ಸೇವೆ ಬಳಸಿಕೊಳ್ಳಿ.
ಈ ಬಸ್ ಬಗ್ಗೆ ನಿಮ್ಮ ಸರ್ಕಾರ ಏನು ಹೇಳುತ್ತದೆ? ಈಗ ನೀವುಗಳು ಬಸ್ ನೊಳಗೆ ನುಗ್ಗಿ ಎಲ್ಲರನ್ನು ಸದೆಬಡಿಯುತ್ತೀರಾ? ಬಸ್ ಗೆ ಬೆಂಕಿ ಹಂಚುತ್ತೀರಾ? ಎಂದು ಪ್ರಶ್ನಿಸಿ ಅಭಿಶೇಕ್ ಸಿಂಗ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಬಸ್ ಗೆ ಬಳಸಲಾದ ಗಾಢ ಹಸಿರ ಬಣ್ಣದ ಬಗ್ಗೆ ಏನು ಆಕ್ಷೇಪವಿಲ್ಲ. ಆದರೆ, ಜಿನ್ನಾ ಫೋಟೋ ಬಸ್ ನ ಹಿಂಬದಿ ಇರುವುದೇಕೆ ಎಂದು ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಏನಿದರ ಅಸಲಿಯತ್ತು?: ಲಭ್ಯ ಮಾಹಿತಿ ಪ್ರಕಾರ, ಆಭಾಸಂ ಎಂಬ ಮಲಯಾಳಂ ಚಿತ್ರದ ಶೂಟಿಂಗ್ ಗೆ ಈ ಬಸ್ ಬಳಕೆಯಾಗಿದೆ. ಕೇರಳ ಮೂಲದ ಚಿತ್ರ ನಿರ್ದೇಶಕನ ಚಿತ್ರಕಥೆಯಲ್ಲಿ ಕಾರ್ಲ್ ಮಾರ್ಕ್ಸ್, ನೆಹರೂ, ಜಿನ್ನಾ ಬಗ್ಗೆ ಉಲ್ಲೇಖವಿದೆಯಂತೆ.
ಜಿನ್ನಾ ಫೋಟೋ ಅಲ್ಲದೆ, ಮಹಾತ್ಮಾ ಗಾಂಧೀಜಿ, ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್ ಅವರ ಚಿತ್ರವಿರುವ ಬಸ್ ಗಳು ಇವೆ. ಬಸ್ ಟ್ರಾವೆಲರ್ಸ್ ಹಾಗೂ ಪ್ರಯಾಣಿಕರ ನಡುವಿನ ಕಥೆ ಇದಾಗಿದೆ. ಸೂರಜ್ ಎಂಬುವರು ಈ ಚಿತ್ರಕ್ಕೆ ನಾಯಕ. ಶೂಟಿಂಗ್ ಗೆ ಬಳಕೆಯಾಗಿದ್ದ ಬಸ್ ನಂತರ ಹಾಗೆ ಉಳಿದಿದೆ ಎಂದು ಈ ಬಗ್ಗೆ ಬಲ್ಲವರು ಹೇಳಿದ್ದಾರೆ.
-
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications