Get Updates
Get notified of breaking news, exclusive insights, and must-see stories!

Varthur Flyover: ವರ್ತೂರು ಫ್ಲೈಓವರ್‌ಗೆ ಭಾರಿ ವಿರೋಧ, ಹೊಸ ಡಿಮ್ಯಾಂಡ್‌ ಇಟ್ಟ ಸಿಟಿ ಮಂದಿ

ಪೂರ್ವ ಬೆಂಗಳೂರಿನ ಭಾಗದಲ್ಲಿ ಸುಗಮ ಸಂಚಾರಕ್ಕಾಗಿ ವರ್ತೂರಿನಲ್ಲಿ 488 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ವರ್ತೂರು ನಾಗರಿಕ ಹಿತ ರಕ್ಷಣಾ ವೇದಿಕೆಯ ಸದಸ್ಯರು ಫ್ಲೈಓವರ್ ನಿರ್ಮಾಣ ವಿರೋಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ವಿವರವಾದ ಪತ್ರ ಕೂಡ ಸಲ್ಲಿಸಿದ್ದಾರೆ. ಈ ಮೇಲ್ಸೇತುವೆ ಬೇಡ ಎನ್ನಲು ಕಾರಣವೇನು? ಎಂಬ ಮಾಹತಿ ಇಲ್ಲಿದೆ.

ವರ್ತೂರು ಭಾಗದಲ್ಲಿ ಈ ಫ್ಲೈಓವರ್‌ ನಿರ್ಮಾಣಕ್ಕೆ 2022ರಲ್ಲಿ ಬಿಜೆಪಿ ಸರ್ಕಾರದ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಈ ಸುಮಾರು 1.92 ಕಿ.ಮೀ ಉದ್ದ ಮತ್ತು 60 ಅಡಿ ಅಗಲದ ಈ ಮೇಲ್ಸೇತುವೆಯನ್ನು ಯೋಜಿಸಲಾಗಿದೆ. ಇದನ್ನು ವಿಸ್ತರಿಸುವುದನ್ನು ಕೂಡ ಒಳಗೊಂಡಿತ್ತು. ಆದರೆ ಇದು ಒಮ್ಮೆ ನಿರ್ಮಾಣವಾದರೆ ಫ್ಲೈಓವರ್‌ನಿಂದ ಹೆಚ್ಚಿನ ಖಾಸಗಿ ವಾಹನಗಳ ಓಡಾಟಕ್ಕೆ ಕಾರಣವಾಗುತ್ತೆ. ಇದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕೂಡ ಹೆಚ್ಚಾಗುತ್ತೆ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ. ಈ ಯೋಜನೆಯು ಭವಿಷ್ಯದ ನಗರ ಯೋಜನೆಯನ್ನು ಒಳಗೊಂಡಿಲ್ಲ. ಏಕೆಂದರೆ ಇದು ಕೆಲವೇ ವರ್ಷಗಳಲ್ಲಿ ತುಂಬಿ ಹೋಗುತ್ತೆ ಎಂದು ಕಾರಣ ನೀಡಿದ್ದಾರೆ.

488 Crore Flyover Project In Varthur Faces Public Opposition

ಇದು ನಗರದಲ್ಲಿ ದೈನಂದಿನ ಸಂಚಾರವನ್ನು ಸುಗಮಗೊಳಿಸುವ ಮತ್ತು ದಟ್ಟಣೆಯನ್ನು ಕಡಿಮೆ ಮಾಡುವುದಾದರೂ ಬೆಂಗಳೂರಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೇಲ್ಸೇತುವೆ ಬದಲಾಗಿ, ಜಿಗಣಿಯಿಂದ ಕಾಡುಗೋಡಿ ಟ್ರೀ ಪಾರ್ಕ್‌ಗೆ ವರ್ತೂರು ಮೂಲಕ ಸಂಪರ್ಕಿಸುವ ಮೆಟ್ರೋ ಮಾರ್ಗವನ್ನು ವಿಸ್ತರಿಸುವಂತೆ ಅವರು ಕೇಳಿದ್ದಾರೆ. ಭವಿಷ್ಯದ ನಗರವಾಗಿ ಸಿದ್ಧವಾಗಿರುವ ಪೂರ್ವ ಕಾರಿಡಾರ್‌ಗೆ ಇದು ಬಹಳ ಸಹಾಯ ಮಾಡುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.

Take a Poll

ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಈ ಮೇಲ್ಸೇತುವೆ ಯೋಜನೆ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ವಿವರವಾದ ಯೋಜನಾ ವರದಿ (ಡಿಪಿಆರ್) ನಂತಹ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಸಹ ಹಂಚಿಕೊಂಡಿಲ್ಲ. ಎಂದು ಅವರು ಹೇಳಿದರು. 2018ರಿಂದಲೂ ಈ ಯೋಜನೆಯನ್ನು ನಿವಾಸಿಗಳು ವಿರೋಧಿಸುತ್ತಿದ್ದಾರೆ. ಯೋಜನೆಯ ವೆಚ್ಚವು 187 ಕೋಟಿ ರೂಪಾಯಿಗಳಿಂದ 488 ಕೋಟಿ ರೂಪಾಯಿಗಳಿಗೆ ಏರಿದೆ. ಆದರೆ ಸರ್ಕಾರ ಏಕೆ ಎಂದು ಎಂದಿಗೂ ವಿವರಿಸಲಿಲ್ಲ ಎಂದು ಆರೋಪಿಸಿದ್ದಾರೆ.

488 Crore Flyover Project In Varthur Faces Public Opposition

ಮೇಲ್ಸೇತುವೆಗೆ ವಿರೋಧ ಏಕೆ?

ಈ ಮೇಲ್ಸೇತುವೆಯು ಕೆಟ್ಟ ಕಲ್ಪನೆಯಿಂದ ಕೂಡಿದೆ, ಅಲ್ಲದೆ ಪರಿಸರಕ್ಕೂ ಹಾನಿಕಾರಕ. ಇದು ಬೆಂಗಳೂರಿನ ಭವಿಷ್ಯದ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಯೋಜನೆ ಮುಂದುವರಿಸುವುದರಿಂದ ತೆರಿಗೆದಾರರ ಹಣ ವ್ಯರ್ಥವಾಗುತ್ತದೆ. ಈ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ವರ್ತೂರು ನಾಗರಿಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ. ಅಲ್ಲದೆ ಈ ಫ್ಲೈಓವರ್ ಅನ್ನು ಕೆರೆಯ ಬಫರ್ ವಲಯದೊಳಗೆ ಯೋಜಿಸಲಾಗಿದೆ. ಇದು ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಈ ಸೂಕ್ಷ್ಮ ವಲಯದಲ್ಲಿ ಯಾವುದೇ ನಿರ್ಮಾಣವು ಪರಿಸರ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದೂ ದೂರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+